Posts

Showing posts from March, 2022

ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ

Image
ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ “ ಕಾಗಿನೆಲೆ ಹನ್ನೆರಡು” ಎಂದೇ ಪ್ರಸಿದ್ದಿಯನ್ನು ಪಡೆದ ಪಟ್ಟಣ, ಪ್ರಾಚೀನ ಕಾಲದಲ್ಲಿ ಅತಿಯಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿತ್ತು ಎಂದು ಶಾಸನ ಕವಿ ಹೀಗೆ ವರ್ಣಿಸುತ್ತಾನೆ. ಸಮುದ್ರದಂತೆ ಹೊಳೆಯುತ್ತಿರುವ ದೊಡ್ಡಕೆರೆ, ಸುಂದರವಾದ ಉದ್ಯಾನವನಗಳು, ಅತಿಯಾದ ನೆರಳನ್ನುಂಟು ಮಾಡುವ ಎಲೆ ಬಳ್ಳಿಗಳು, ಸುತ್ತಮುತ್ತ ಹರಡಿ ಕಣ್ಣಿಗೆ ರಂಜನೆ ಇಯುವ ಸುರಗಿ, ನಾಗ ಕುಸುಮಗಳ ಪುಷ್ಪಲತಾ ಗೃಹಗಳು ಸವಿಸ್ತಾರವಾಗಿ ಹಬ್ಬಿದ್ದು. ಕಾಗಿನೆಲೆಯನ್ನು ಸೌಂದರ್ಯದ ತಾಯಿ ನೆಲೆಯಾಗಿ ರಂಜಿಸುತ್ತಿವೆ ಎಂದು ಅನೇಕ ಕವಿಗಳು ವರ್ಣಿಸಿದ್ದಾರೆ.  ಅಗ್ರಹಾರವಾಗಿದ್ದಂತಹ ಸುಗಂಧ ಬೀರುವ ನಾಡು ಕಾಗಿನೆಲೆ. ಈ ನಾಡು ದೊಡ್ಡಕೆರೆಯಿಂದ, ಭತ್ತ-ಗದ್ದೆಗಳಿಂದ, ಫಲಪುಷ್ಪ ಗಿಡಗಳಿಂದ, ಸುಂದರ ದೇವಾಸ್ಥಾನಗಳಾದಂತಹ ಕಲ್ಲೇಶ್ವರ, ಕಾಳಹಸ್ತೇಶ್ವರ, ಹಾಗೂ ಲಕ್ಷ್ಮೀ ನರಸಿಂಹ ದೇವಾಲಯದಿಂದ ಸುತ್ತ-ಮುತ್ತಲಿನ ಪ್ರದೇಶದಲ್ಲಿಯೇ ಪ್ರಸಿದ್ದಿಯನ್ನು ಪಡೆದಿತ್ತು.  ಇಲ್ಲಿಯ ಸಂತ ಶ್ರೀ ಕನಕದಾಸರ ಗದ್ದುಗೆ ನಾಡಿನ ಎಲ್ಲಾ ಜನರ ಮನಸ್ಸನ್ನು ಕೀರ್ತನೆಯಿಂದ ಬಡಿದ್ದೆಬ್ಬಿಸುತ್ತಾ ಜ್ಞಾನ ಮಾರ್ಗದ ಕಡೆಗೆ ಒಯ್ಯಲು ಸದಾ ಚೈತನ್ಯಶಾಲಿಯಾಗಿ ನಿಂತ ಅದ್ಬುತ ಕೇಂದ್ರ ಬಿಂದುವಾಗಿದೆ. ಇಂತಹ ಕಾಗಿನೆಲೆಗೂ ಹಾಗೂ ವಿಶ್ವಗುರು ಬಸವಣ್ಣನವರ ಕಲ್ಯಾಣಕ್ಕೂ ಅವಿನಾಭಾವ ಸಂಭಂದವಿದೆ ಎಂಬುದೇ ಇಲ್ಲಿ ಪ್ರಾಮುಖ್ಯ...

ಶರೀಫ ಶಿವಯೋಗಿಗಳ ಹುಟ್ಟುರು ಶಿಶುನಾಳ....!!

Image
                    ಗ್ರಾಮ:ಶಿಶುನಾಳ ಶಿಶುನಾಳ ಗ್ರಾಮವು ಕರ್ನಾಟಕದಲ್ಲಿಯೇ ಶರೀಫ ಸಾಹೇಬರಿಂದ ಪ್ರಸಿದ್ದಿಯನ್ನು ಪಡೆದ ಗ್ರಾಮವಾಗಿದೆ. ಶಿಗ್ಗಾಂವಿಯಿಂದ ಕೇವಲ 15 ಕಿ.ಮೀ ದೂರದಲ್ಲಿದೆ. "ಶಿಶುನಾಳಧೀಶ" ಈ ಗ್ರಾಮದ ಅಧಿದೇವತೆಯಾಗಿದ್ದರಿಂದ ಈ ಗ್ರಾಮದ ಹೆಸರು ಶಿಶುನಾಳ ಎಂದು ಜನಸಾಮಾನ್ಯರಲ್ಲಿ ಪ್ರಚಲಿತವಾಗಿದೆ.  ವಿಶಾಲವಾದ ದೇವಸ್ಥಾನದ ಮಧ್ಯದಲ್ಲಿ ಸ್ತಂಭದ ಮೇಲಿರುವ ನಂದಿಯೇ ಶಿಶುನಾಳಧೀಶ(ಬಯಲು ಬಸವಣ್ಣ). ಇದರ ಸ್ತಂಭದ ಮೇಲೆ 12-13 ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ, ಇಲ್ಲಿಯ ಭೋಗನಾಥ ಹಾಗೂ ಮಲ್ಲಿನಾಥದೇವರಿಗೆ ಬಿಟ್ಟ ಭೂದಾನದ ಬಗ್ಗೆ ತಿಳಿಸುತ್ತದೆ. ಸಮೀಪದಲ್ಲಿ ಹುಲಗೂರ ಹಾಗೂ ವೀರಭದ್ರೇಶ್ವರ ದೇವರಿಂದ ಪ್ರಸಿದ್ಧಿಯನ್ನು ಪಡೆದ ಕಾರಡಗಿ ಗ್ರಾಮಗಳನ್ನು ನೋಡಬಹುದು. ಹುಲಗೂರನ್ನು ಶಾಸನಗಳಲ್ಲಿ "ಪುಲ್ಲಂಗೂರು" ಎಂದು ಕರೆಯಲಾಗಿದೆ. ಇಲ್ಲಿಯ " ಪುಲಂಗೂರಬ್ಬೆ" ಗ್ರಾಮದೇವತೆಯಿಂದಾಗಿ ಈ ಹೆಸರು ಈ ಗ್ರಾಮಕ್ಕೆ ಬಂದಿದೆ ಎನ್ನಲು ಕ್ರಿ.ಶ 970 ರ ರಾಷ್ಟ್ರಕೂಟರ ಶಾಸನ ಮೂಖ ಸಾಕ್ಷಿಯಾಗಿದೆ. ಕ್ರಿ.ಶ 1245 ರ ಶಾಸನದಲ್ಲಿ ಕದಂಬ ಮಲ್ಲಿದೇವನ ರಾಣಿ ಪದ್ಮಲದೇವಿ ಹುಲಗೂರಲ್ಲಿ ಪ್ರಸನ್ನಕೇಶವ, ಮಾಧವ ಹಾಗೂ ನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ “ಪ್ರಸನ್ನಪುರಿ” ಎಂಬ ಬ್ರಹ್ಮಪುರಿಯನ್ನು ಸ್ಥಾಪಿಸಿದ ವಿಷಯ ತಿಳಿಸುತ್ತದೆ. ಒಟ್ಟು 13 ಶಾಸನಗಳು ಇಲ್ಲಿಯವರೆಗೂ ಹುಲ...

ಮಾಯದಂಥ ಮಳೆ ಬಂತಣ್ಣಾ... ಮದಗಾದ ಕೆರೆಗೆ..!!!

Image
ಮಾಯದಂಥ ಮಳೆ ಬಂತಣ್ಣಾ... ಮದಗಾದ ಕೆರೆಗೆ..! ಈ ಮೇಲಿನ ಜನಪದದ ಸಾಲಿನಲ್ಲಿನ ಕಥಾನಾಯಕಿಯ ತ್ಯಾಗದ ಕಥೆಯನ್ನು ಹೇಳುವ ಮದಗದ ಕೆರೆಯು ಇರುವುದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದಿಂದ ಸುಮಾರು 4 ಕಿ.ಮೀ. ದೂರದಲ್ಲಿ. ಮಲ್ಲನಗೌಡರು ಕಟ್ಟಿಸಿದ ಕೆರೆಗೆ ನೀರು ಬರದೇ ಇದ್ದಾಗ ಜೋಯಿಸರನ್ನು ವಿಚಾರಿಸಿದಾಗ ಗೊತ್ತಾಗಿದ್ದು ತನ್ನ ಮುದ್ದಿನ ಸೊಸೆಯನ್ನ ಜನರ ಕಲ್ಯಾಣಕ್ಕಾಗಿ ಕೆರೆಗೆ ಬಲಿ ಕೊಡುವದ್ದಾಗಿತ್ತು.  ಲೋಕ ಕಲ್ಯಾಣಕ್ಕಾಗಿ ನಿಷ್ಕಲ್ಮಷ ಮನಸ್ಸಿನಿಂದ ‘ಕೆರೆಗೆ ಹಾರ’ವಾದ ಮಹಾತಾಯಿ ಕೆಂಚಮ್ಮದೇವಿಯ ತ್ಯಾಗ ಮನೋಭಾವದಿಂದ ಹುಟ್ಟಿದ ಕೆರೆ ಇದಾಗಿದೆ ಎಂಬುದು ನಮಗೆ ಜಾನಪದ ಗೀತೆಯ ಮುಖಾಂತರ ಗೊತ್ತಾಗುತ್ತದೆ. ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿಯಿಂದ ಮಾಸೂರಿಗೆ ಪ್ರಯಾಣ ಬೆಳೆಸಿ ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿ ಹಚ್ಚು-ಹಸಿರಾದ ಕಾಡಿನ ಮಧ್ಯದೊಳಗೆ ಪ್ರವೇಶಿಸಿದಾಗ ಎಡಭಾಗದಲ್ಲಿ ವಿಶಾಲವಾದ ಈ ಕೆರೆಯನ್ನು ನೋಡಬಹುದು.  ಕೆರೆಯ ಬಲಭಾಗದ ಗುಡ್ಡದ ಮೇಲೆ ಹಾಳುಬಿದ್ಧಂತಹ ಕೋಟೆಯೊಂದಿದ್ದು ಅದರ ತುದಿಯಿಂದ ಸಂಪೂರ್ಣವಾದ ಕೆರೆಯನ್ನು ವೀಕ್ಷಿಸಬಹುದಾಗಿದೆ. ಮುಂದೆ ಸಾಗುತ್ತಾ ನಡೆದರೆ ನೀರಿನ ಭೋರ್ಗರೆಯುವ ಶಬ್ಧ ನಮ್ಮ ಕಿವಿಯ ಮೇಲೆ ಬೀಳಲಾರಂಭಿಸುತ್ತದೆ. ಈ ಕೆರೆಯ ನೀರು ಗುಡ್ಡದ ಇಕ್ಕೆಲಗಳಲ್ಲಿ ಹರಿದು ಬಂದು ಜಲಪಾತವನ್ನು ನಿರ್ಮಾಣ ಮಾಡಿ ಕುಮಧ್ವತಿಯ ಮಡಿಲನ್ನು ಸೇರುತ್ತದೆ. ನೀರ...

ವಿರಳವಾದ ‘ಸೂರ್ಯ ಬಲಿದಾನ’ ಶಿಲಾ ಫಲಕ ಪತ್ತೆ

Image
ವಿರಳವಾದ ‘ಸೂರ್ಯ ಬಲಿದಾನ’ ಶಿಲಾ ಫಲಕ ಪತ್ತೆ ಹಾವೇರಿ: ಮಧ್ಯಕಾಲೀನ ಕರ್ನಾಟಕದಲ್ಲಿ ಧಾರ್ಮಿಕ ಮನೋಭಾವನೆಯಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ತಮ್ಮ ಆತ್ಮವನ್ನು ತಾವೇ ಬಲಿಕೊಟ್ಟುಕೊಳ್ಳುತ್ತಿದ್ದ ಪದ್ಧತಿಗೆ ಸಾಕ್ಷಿಯೆಂಬಂತೆ ಸೂರ್ಯ ಬಲಿದಾನ ಶಿಲಾ ಫಲಕವನ್ನು ಹಾವೇರಿಯ ದೇಸಾಯಿ ಗಲ್ಲಿಯಲ್ಲಿರುವ ಗರಡಿಮನೆಯ ಹತ್ತಿರ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಪತ್ತೆ ಮಾಡಿದ್ದಾರೆ. ಧಾರ್ಮಿಕ ಮನೋಭಾವನೆಯಿಂದ ತಮ್ಮ ಆತ್ಮವನ್ನು ತಾವೇ ಬಲಿಕೊಟ್ಟುಕೊಳ್ಳುತ್ತಿದ್ದ ಪದ್ಧತಿ ಹಿಂದೂ ಹಾಗೂ ಜೈನ ಧರ್ಮದಲ್ಲಿ ಇತ್ತು. ಹಿಂದೂಗಳು ವಿಶೇಷವಾಗಿ ಚಿತೆ(ಕಿಚ್ಚ) ಮುಖಾಂತರ ಮರಣವನ್ನು ಹೊಂದುತ್ತಿದ್ದರು. ಇವರ ಸ್ಮರಣಾರ್ಥವಾಗಿ ಒಂದು ಶಿಲಾ ಫಲಕವನ್ನು ಆ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು. ಸೂರ್ಯನಿಗೆ ಆ ಕಾಲದಲ್ಲಿ ಬಹುಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ರಾಹು ಸೂರ್ಯನನ್ನು ನುಂಗುತ್ತಿರುವುದರಿಂದ ಸೂರ್ಯಗ್ರಹಣವಾಗುತ್ತದೆ ಎಂಬ ನಂಬಿಕೆ ಇತ್ತು.  ಸೂರ್ಯನಿಗೊದಗಿದ ಈ ಕಷ್ಟ ಸಂದರ್ಭದಲ್ಲಿ ಸಹಾನುಭೂತಿ ತೋರಿಸುವ ರೂಪದಲ್ಲಿ ಚಿತೆ(ಕಿಚ್ಚ) ಪ್ರವೇಶ ಮಾಡಿ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಿದ್ದರು. ಹೀಗೆ ಮಾಡಿಕೊಳ್ಳುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಅಲ್ಲದೇ ಸೂರ್ಯಗ್ರಹಣ ಸಂದರ್ಭಗಳಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದೇವಾಲಯಗಳಲ್ಲಿ ಪೂಜೆ ಮಾಡುವುದರೊಂದಿಗೆ ದತ್ತಿದಾನವನ್ನ...

ಆನೆ ಬಂತು ಆನೆ ಯಾವ ಊರ ಆನೆ? ವಿಜಾಪುರ ಆನೆ......!!!!

Image
ಆನೆ ಬಂತು ಆನೆ ಯಾವ ಊರ ಆನೆ? ವಿಜಾಪುರ ಆನೆ......!!!! ಆನೆ ಬಂತು ಆನೆ ಯಾವೂರು ಆನೆ? ವಿಜಾಪುರ ಆನೆ  ಇಲ್ಲಿಯಾಕೆ ಬಂತು? ಹಾದಿತಪ್ಪಿ ಬಂತು, ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು ಅದ ದುಡ್ಡ ಕೊಟ್ಟು ಕೊಬ್ಬರಿ ತಂದು ಲಟಲಟ ಮುರಿದು ಊರಿಗೆಲ್ಲ ಹಂಚಿದೆ. ಈ ಮೇಲಿನ ಜಾನಪದವನ್ನು ನಮ್ಮ ಹಿರಿಯರು ತಮ್ಮ ಮೊಮ್ಮಕ್ಕಳನ್ನು ಮೊಂಡೆಯ ಮೇಲೆ ಹಾಕಿಕೊಂಡು ಹೇಳುತ್ತಾ ನನ್ನ ವಿಜಾಪುರದ ಚಿನ್ನ, ಬಂಗಾರ ಎಂದು ಸಂತೈಸುವ ಸಂತೋಷದ ಸನ್ನಿವೇಶ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರ್ವೆಸಾಮಾನ್ಯ  ಆದರೆ ಈ ಜಾನಪದವು ಆ ಕಾಲದಲ್ಲಿಯ ದುಃಖದ ಸನ್ನಿವೇಶವನ್ನು ಬಿಂಬಿಸುತ್ತದೆ ಎನ್ನುವುದೆ ವಿಶೇಷ. ವಿಜಯನಗರವು ಕೃಷ್ಣದೇವರಾಯನ ಕಾಲದಲ್ಲಿ ಅತಿ ಸಮೃದ್ಧಿಯಾಗಿತ್ತು. ಇಲ್ಲಿ ಬಂಗಾರ, ಬೆಳ್ಳಿ ಹಾಗೂ ವಜ್ರಗಳನ್ನು ಸಂತೆಯಲ್ಲಿ ಮಾರುವ ಶ್ರೀಮಂತ ಮಾರುಕಟ್ಟೆಗಳಿದ್ದವು. ಬಡತನ ಅನ್ನುವುದು ಬಹಳ ವಿರಳವಾಗಿತ್ತು.  ಇಂತಹ ಸಾಮ್ರಾಜ್ಯವು ಕೃಷ್ಣದೇವರಾಯನ ಅಳಿಯನಾದಂತಹ ರಾಮರಾಯನ ಕಾಲದಲ್ಲಿ ನಶಿಸಿಹೊಯಿತು ಎನ್ನುವುದು ದುಃಖದ ವಿಷಯ. ರಾಮರಾಯನು ಷಾಹಿ ರಾಜ್ಯಗಳ ಮದ್ಯ (ವಿಜಾಪುರದ ಆದಿಲ್-ಷಾ, ಗೋಲ್ಕಂಡದ ಕುತುಬ್-ಷಾ, ಬೀದರಿನ ಬರಿದ್-ಷಾ, ಅಹಮದನಗರಿನ ನಿಜಾಮ-ಷಾ ಮತ್ತು ಬೀರಾರಿನ ಷಾಹಿಗಳು) ವಿರಸವನ್ನು ತಂದಿಟ್ಟು ಅದರ ಲಾಭವನ್ನು ಪಡೆಯುತ್ತಿದ್ದನು. ಇದನ್ನು ಅರಿತ ಐದು ಷಾಹಿ ಕುಟುಂಬಗಳು ತಮ್ಮೊಳಗೆ ಶರೀರ ಸಂಬಂಧವನ್ನು ಬೆಳೆಸಿ 1564 ...

ಹಾವೇರಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರನ ನೆನಪಿಸುವ ಬೆಂಗಳೂರ ಸೆಂಟ್ರಲ್ ಜೈಲು ..........!!!

Image
ಹಾವೇರಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರನ ನೆನಪಿಸುವ ಬೆಂಗಳೂರ ಸೆಂಟ್ರಲ್ ಜೈಲು ...............................                                    ಕ್ರಿ.ಶ 1865-66 ರಲ್ಲಿ ಸ್ವಾತಂತ್ರ ಹೋರಾಟಗಾರರ ಸಂಖ್ಯೆ ಹೆಚ್ಚಾಗತೊಡಗಿತು, ಆಗ ಅವರನ್ನು ಬಂಧಿಸಿಡಲು ಹುಟ್ಟಿಕೊಂಡ ಹೊಸದಾದ ಜೈಲು " ಬೆಂಗಳೂರ ಸೆಂಟ್ರಲ್ ಜೈಲ್". ಹಿಂದೆ ಬೆಂಗಳೂರಿನ ಸುಭಾಸ್ ನಗರದ ಸುಭಾಸ ಬಸ್ ಸ್ಟಾಂಡ್, ಅಲ್ಲಿಯ "ಮ್ಯಾಜಸ್ಟಿಕ್" ಚಿತ್ರಮಂದಿರದಿಂದಾಗಿ "ಮ್ಯಾಜಸ್ಟಿಕ್" ಎಂಬ ಹೆಸರಿನಿಂದ ಬದಲಾಯಿತು.  ಅಲ್ಲಿಯ ಕೆರೆ ಮಾಯವಾಯಿತು. ಈಗ ಸಂಪೂಣ೯ ಪ್ರಮಾಣದ "ಕೆಂಪೆಗೌಡ" ಬಸ್ ನಿಲ್ದಾಣ ಅಲ್ಲಿ ನಿಮಾ೯ಣವಾಗಿದೆ(ಮಾ: ಆರ್ನಲ್ಲಿ ಶಿವಶಂಕರ).  ಬಹುಶಃ ಇಲ್ಲಿಯ ಅಣ್ಣಮ್ಮಾದೇವಿಗೆ ಬರುತ್ತಿದ್ದ ಭಕ್ತರನ್ನು ರಂಜಿಸಲು ನಾಟಕ ಟೆಂಟುಗಳು ಅಂದು ನಿಮ೯ಣಗೊಂಡು. ಕ್ರಮೇಣವಾಗಿ ಥೀಯಟರಾಗಿ ಬದಲಾವಣೆಯಾಗಿರಬಹುದು(ಇದರ ಸಮೀಪ ಗಾಂಧಿನಗರವಿರುವುದು). ಇದರ ಸ್ವಲ್ಪ ದೂರದಲ್ಲಿಯೇ ಈ ಜೈಲ ಅಂದು ಆರಂಭವಾಯಿತು. ಕನಾ೯ಟಕದ ಪ್ರಮುಖ ಸ್ವಾತಂತ್ರ ಹೋರಾಟಗಾರರನ್ನು ಇಲ್ಲಿ ಬಂಧಿಸಿಡಲಾಗುತ್ತಿತ್ತು. ಇಲ್ಲಿ ಬಂಧಿತರಾದವರ ದೇಹದ ಮೇಲಿರುವ ದಾರ, ಇತ್ಯಾದಿಗಳನ್ನು ಕಿತ್ತು ಬಿಸಾಡಲಾಗುತ್ತಿತ್ತು. ಜೇಬಿನಲ್ಲಿದ್ದ ಪುಡಿಕಾಸು, ಗಡಿಯಾರ, ಇತ್ಯಾದಿ...

ನರಗುಂದ ಬಾಬಾಸಾಹೇಬ್ ಮಾರುವೇಷದಲ್ಲಿ ಬಂಕಾಪುರದಲ್ಲಿದ್ದನು______________!!!

Image
ನರಗುಂದ ಬಾಬಾಸಾಹೇಬ್ ಮಾರುವೇಷದಲ್ಲಿ ಬಂಕಾಪುರದಲ್ಲಿದ್ದನು______________!!!! ಕ್ರಿ.ಶ 1809 ರಲ್ಲಿ ಪೇಶ್ವೆ ಎರಡನೇಯ ಭಾಜೀರಾಯನು ನರಗುಂದದ ವೆಂಕಟರಾಯನ  ಮಗ ಮೂರನೇಯ ದಾದಾಜಿರಾವ್ ಭಾವೆಗೆ 33 ಗ್ರಾಮಗಳ ಜಾಗಿರ್ದಾರಕಿಯನ್ನು ನೀಡಿದ್ದರು. ದಾದಾಜಿರಾವ್ ಭಾವೆಯವರ ಮಗ ಎರಡನೇಯ ಭಾಸ್ಕರರಾವ್ ಭಾವೆ. ಈತನನ್ನು ಬಾಬಾಸಾಹೇಬ್ ಭಾವೆ ಎಂದು ಕರೆಯುತ್ತಿದ್ದರು. ಮೂಲತ: ಬ್ರಾಹ್ಮಣ ಕುಲದಲ್ಲಿ ಜನಸಿದ್ದ ಬಾಬಾಸಾಹೇಬಗೆ ಸಂಸ್ಕೃತದ ಜ್ಞಾನ ರಕ್ತಗತವಾಗಿ ಬಂದಿತ್ತು.  ಬಾಬಾಸಾಹೇಬ 3000 ದಿಂದ 4000 ಸಂಸ್ಕೃತ ಗ್ರಂಥಗಳನ್ನೊಳಗೊಂಡ ಸ್ವಂತ ಗ್ರಂಥಾಲಯವನ್ನು ಹೊಂದಿದ್ದನು ಹಾಗೂ ಇತನಿಗೆ ಅಪಾರ ಜ್ಞಾನವಿತ್ತೆಂದು ಬ್ರಿಟಿಷ್   ರು ದಾಖಲಿಸಿದ್ದಾರೆ. ಹೀಗಾಗಿಯೇ ಬ್ರಿಟಿಷ್‌ ಅಧಿಕಾರಿಗಳು ಜಮಖಂಡಿಯ ಪಟವರ್ಧನರಂತೆ  ಸಂಸ್ಥಾನವನ್ನು ಮುಂದುವರಿಸಲು ಯಾವುದೇ ಆಕ್ಷೇಪವೆತ್ತಿರಲಿಲ್ಲ. ತುಂಬು ಕುಟುಂಬವನ್ನು ಹೊಂದಿದ್ದ ಈತನೂ ತಾಯಿ ಯಮುನಾಬಾಯಿ ಹಾಗೂ ಪತ್ನಿ ಸಾವಿತ್ರಬಾಯಿಯ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದನು. ವೀರನೂ ಹಾಗೂ ಚಾಣಾಕ್ಷನಾದ ಈತನಿಗೆ ಬ್ರಿಟಿಷ್‌ರ ಮೇಲೆ ಎಲ್ಲಿಲ್ಲದ ದ್ವೇಶವಿತ್ತು ಕಾರಣ ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡಿದ್ದ. ತನ್ನ ನಂತರ ಹುದ್ದೆಯನ್ನು ತನ್ನ ದತ್ತು ಮಗ ನಿರ್ವವಹಿಸಲಿ ಎಂಬ ಮಹಾದಾಸೆಯನ್ನಿಟ್ಟುಕೊಂಡಿದ್ದನು. ಆದರೆ ಬ್ರಿಟಿಷರ "ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ...

ಬಂಕಾಪುರದಲ್ಲಿ ಮಗಳದುರ್ಮರಣದ ಕಥೆ ಹೇಳುವ ಜಮಾಸಬಾವಿಯೇ ದೇಮರಸಿಯಬಾವಿ.....!!

Image
ಬಂಕಾಪುರದಲ್ಲಿ ಮಗಳದುರ್ಮರಣದ ಕಥೆ ಹೇಳುವ ಜಮಾಸಬಾವಿಯೇ ದೇಮರಸಿಯಬಾವಿ.....!! ಹಾವೇರಿ ಜಿಲ್ಲೆಯ ಬಂಕಾಪುರ ಐತಿಹಾಸಿಕ ಕ್ಷೇತ್ರ. ವಂಕಪುರ, ವಂಕಾಪುರ, ವೆಂಕಪುರ, ವೆಂಗಾಪುರ , ಬಂಕಪುರ, ಬಂಕಾಪುರ ಹಾಗೂ ಬಂಕಾಹುರ ಎಂದು ಶಾಸಗಳಲ್ಲಿ ಈ ಗ್ರಾಮದ ಹೆಸರನ್ನು ಸೂಚಿಸಲಾಗಿದೆ. ರಾಷ್ಟ್ರಕೋಟರು, ಚಲ್ಲಕೇತನರು, ಕಲ್ಯಾಣದ ಚಾಲುಕ್ಯರು, ಗೋವೆಯ ಕದಂಬರರು, ಬನವಾಸಿ ಕದಂಬರರು, ಹೊಯ್ಸಳರು, ವಿಜಯನಗರದ ಅರಸರು, ಬಹುಮನಿ ಅರಸರು, ಕೆಳದಿ ಅರಸರು, ಬಿಜಾಪುರದ ಆದಿಲ್ ಶಾಹಿಗಳು, ಹೈದರಾಲಿ ಮತ್ತು ಟಿಪ್ಪೂಸುಲ್ತಾನ ಹಾಗೂ ಹಂಡೆ ಪಾಳೆಯಗಾರರು ಇದರ ಆಳ್ವಿಕೆಯನ್ನು ಕ್ರಮೇಣವಾಗಿ ನಡೆಸಿದ್ದಾರೆ. ತಮ್ಮ-ತಮ್ಮ ಆಳ್ವಿಕೆಯಲ್ಲಿ ಅವರು ಬಂಕಾಪುರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವುಗಳು ಮಾತ್ರ ಇನ್ನೂ ಜೀವಂತವಾಗಿವೆ. ಪ್ರಸಿದ್ದ ವ್ಯಾಪಾರಿ ಕೇಂದ್ರವಾಗಿದ್ದ ಬಂಕಾಪುರ ಗೋವೆ ರಾಜ್ಯವನ್ನು ವಿಜಯನಗರಕ್ಕೆ ಜೋಡಿಸುವ ಕೊಂಡಿಯಾಗಿತ್ತು. ಇಂತಹ ಬೃಹತ್ ವ್ಯಾಪಾರಿ ಕೇಂದ್ರಕ್ಕೆ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಂದು ಮಾಡಲಾಗಿತ್ತು. ಅವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವೆಂದರೆ ಪುರಾತನ ಬಾವಿಗಳು. ಅಂತಹ ಬಾವಿಗಳಲ್ಲಿ ಕೆಲವುಗಳು ಮಾತ್ರ ಜೀವವನ್ನು ಬಿಗಿಯಾಗಿ ಹಿಡಿದುಕೊಂಡು ಇನ್ನೂ ಜೀವವನ್ನು ಉಳಿಸಿಕೊಂಡಿವೆ.  ಪಂಚಮಲಕಪ್ಪನ ಬಾವಿ, ಕಳ್ಳರ ಬಾವಿ, ನಾಗರಬಾವಿ, ಗುನ್ನಪ್ಪನ ಬಾವಿ, ವಿಟ್...

ಬೇಡರು ವಾಸವಾಗಿದ್ದ ಪ್ರದೇಶ ಮುಂದೆ "ಬ್ಯಾಡಗಿ" ಎಂದಾಯಿತೇ ???

Image
ಬೇಡರು ವಾಸವಾಗಿದ್ದ ಪ್ರದೇಶ ಮುಂದೆ "ಬ್ಯಾಡಗಿ" ಎಂದಾಯಿತೇ ???........ ಹಾವೇರಿ ಜಿಲ್ಲೆಯ ಬ್ಯಾಡಗಿ ಶಾಸನಗಳಲ್ಲಿ "ಬೇಡಗೆಯ್, ಬೇಡಗೆ, ಬೆಡಗಿ ಹಾಗೂ ಬ್ಯಾಡಗೆ ಎಂದೆಲ್ಲಾ ಉಲ್ಲೇಖಿತಗೊಂಡಿದೆ.  ಬೇಡಗೆ(ಬ್ಯಾಡಗಿ)ಯನ್ನು ಬೇಡ +ಕೆಯ್ ಎಂದು ಬಿಡಿಸಬಹುದು. "ಕೆಯ್" ಎಂದರೆ ಪ್ರದೇಶ ಅಥವಾ ಕೃಷಿ ಪ್ರದೇಶ ಎಂಬ ಅರ್ಥವನ್ನು ಕೊಡುತ್ತದೆ. ಹೀಗಾಗಿ ಬ್ಯಾಡಗಿ ಬೇಡರು ವಾಸಿಸುವ ಸ್ಥಳವಾಗಿತ್ತು ಎಂದು ದಿ.ಡಾ.ಎಂ.ಎಂ ಕಲಬುರ್ಗಿಯವರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಪುರಾವೆ ಎಂಬಂತೆ ಹಿಂದೆ ಇಲ್ಲಿ ಅನೇಕ ಗುಂಡಿಗಳಿದ್ದವು (ಬಹುಶಃ ಅವರು ಅಡಗಿಕೊಳ್ಳಲು ಸಹಕಾರಿಯಾಗಿದ್ದಿರಬಹುದು) ಅವುಗಳನ್ನು ಮುನ್ಸಿಪಾಲಟಿಯವರು ಮುಚ್ಚಿದರು ಎಂಬ ಮಾಹಿತಿಯನ್ನು ಕ್ರಿ.ಶ 1893 ದಾಖಲೆ ತಿಳಿಸುತ್ತದೆ.  ಬ್ಯಾಡಗಿ ಸುಮಾರು 1200 ವರ್ಷಗಳಷ್ಟು  ಪ್ರಾಚಿನವಾದದ್ದು ಎಂಬುದಕ್ಕೆ ಎ.ಪಿ.ಎಂ.ಸಿ ಮಾರ್ಕೆಟನಲ್ಲಿಯ ಸಿದ್ದೇಶ್ವರ ದೇವಸ್ಥಾನದಲ್ಲಿರುವ ರಾಷ್ಟ್ರಕೂಟರ ಶಾಸನ ಮೂಕ ಸಾಕ್ಷಿಯಾಗಿದೆ. ಈ ಶಾಸನ ಕ್ರಿ.ಶ 902 ರಲ್ಲಿ ಬ್ಯಾಡಗಿಯನ್ನು "ಬುದ್ದನು" ಊರ ಗೌಡಿಕೆಯನ್ನು ಮಾಡುತ್ತಿದ್ದಾಗ "ಪಿಟ್ಟಮ್ಮೆಯು ಮಾಡಿದ ದಾನವನ್ನು ತಿಳಿಸುತ್ತದೆ. ಕ್ರಿ.ಶ 1092 ರಲ್ಲಿ " ವೀರಗಾಂಗೇರಾಯನು ಬೇಡಗೆಯ ಮಲ್ಲಿಕಾರ್ಜುನ (ಬಹುಶಃ ಬೆಟ್ಟದ ಮಲ್ಲಿಕಾರ್ಜುನ ಇರಬಹುದು) ದೇವರಿಗೆ ಕೊಟ್ಟ ದಾನದ ವಿಷಯವನ್ನು ಶಾಸನ ತಿಳ...

ಹಾವೇರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆಯನ್ನು ತೊಲಗಿಸುವಲ್ಲಿನಡೆದ ಹೋರಾಟಗಳು(ಡಾ ಬಿ.ಆರ್.ಅಂಬೇಡ್ಕರ್‌ ನೆನಪಿಗಾಗಿ).......!!!

Image
#ಹಾವೇರಿ_ಜಿಲ್ಲೆಯಲ್ಲಿ_ಅಸ್ಪೃಶ್ಯತೆಯನ್ನು_ತೊಲಗಿಸುವಲ್ಲಿನಡೆದ_ಹೋರಾಟಗಳು (#ಡಾ_ಬಿ_ಆರ್_ಅಂಬೇಡ್ಕರ್‌_ನೆನಪಿಗಾಗಿ) ಮನುವಿನ ಸಾಮಾಜಿಕ ವ್ಯವಸ್ಥೆಯಲ್ಲಿ ಚಾತುರ್ವರ್ಣದ ಹೊರಗೆ ಇದ್ದವರದೊಂದು ಮತ್ತು ಚಾತುರ್ವರ್ಣದ ಒಳಗೆ ಇದ್ದವರದು ಇನ್ನೊಂದು ಎಂಬ ಎರಡು ಸಮಾಜಿಕ ವಿಭಾಗಗಳಿದ್ದವು. ಅವುಗಳೆಂದರೆ ಬ್ರಾಹ್ಮಣ, ಕ್ಷೇತ್ರಿಯ, ವೈಶ್ಯರು, ಶೂದ್ರ ಮತ್ತು ಅಂತ್ಯಜ(ಅಸ್ಪೃಶ್ಯ). ಇವುಗಳಲ್ಲಿ ವೇದಗಳ ಪ್ರಾರಂಭ ಕಾಲದಿಂದ ಹೆಚ್ಚು ಶೋಷಣೆಗೆ ಒಳಗಾದವನು ಇದೇ ಅಂತ್ಯಜರು. ಭಾರತದಲ್ಲಿ ಬ್ರಿಟಿಷರನ್ನೊಳಗೊಂಡು ಮನುವಿನಿಂದ ನಿರೂಪಿತವಾದ ಅಸಮಾನತೆಯ ನಿಯಮವೇ ನಾಡಿನ ಶಾಸನವಾಗಿತ್ತು ಎನ್ನುವುದು ಬಹಳಷ್ಟು ವಿದೇಶಿಯರಿಗೆ ತಿಳಿದಿರಲಿಲ್ಲ. ಮರಾಠ ಹಾಗೂ ಪೇಶ್ವೆಗಳ ಆಳ್ವಿಕೆಯಲ್ಲಿ ನಗರದೊಳಗೆ ಸಾಯಂಕಾಲ ಮೂರು ಗಂಟೆ ಮತ್ತು ಮುಂಜಾನೆ ಒಂಬತ್ತು ಗಂಟೆಯ ಮಧ್ಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅವರು 'ನಮಸ್ಕಾರ' ಎಂಬ ಪದವನ್ನು ಬಳಿಸದಂತೆ ನಿರ್ಬಂಧ ಹೇರಲಾಗಿತ್ತು. ಅವರ ಉಗುಳು ಪುರೋಹಿತಷಾಹಿಗಳ ಕಾಲಿಗೆ ತಗುಲಬಾರದು ಹೀಗಾಗಿ ಅಸ್ಪೃಶ್ಯರು ಕೊರಳಿಗೆ ಮಣ್ಣಿನ ಮಡಿಕೆ ಅಥವಾ ತೆಂಗಿನ ಚಿಪ್ಪನ್ನು ಕೊರಳಿಗೆ ಕಟ್ಟಿಕೊಳ್ಳುವುದು ಕಡ್ಡಾಯವಾಗಿತ್ತು. ಬಹುಶಃ ಹೀಗಾಗಿಯೇ ನೆಲದಲ್ಲಿ ಹುಟ್ಟುವ ಉಳ್ಳಾಗಡ್ಡಿ, ಆಲುಗಡ್ಧೆ ಮತ್ತು ಬೆಳ್ಳೊಳ್ಳಿಯನ್ನು ಪುರೋಹಿತಷಾಹಿಗಳು ತಿನ್ನುತ್ತಿದ್ದಿಲ್ಲ. ಹಬ್ಬದ ದಿನಗಳಲ್ಲಿ   ಬಟ್ಟೆ ಅಂಗಡಿಯವನು ಅಸ್ಪೃ...

ಮೈಲಾರ ಕ್ಷೇತ್ರಗಳಲ್ಲಿ ಪ್ರಮುಖ ಸುಕ್ಷೇತ್ರವಾದ ದೇವರಗುಡ್ಡದ ಕಿರು ಪರಿಚಯ.......!!!

Image
ಮೈಲಾರ ಕ್ಷೇತ್ರಗಳಲ್ಲಿ ಪ್ರಮುಖ ಸುಕ್ಷೇತ್ರವಾದ ದೇವರಗುಡ್ಡದ ಕಿರು ಪರಿಚಯ.......!!!!!! ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಸುಕ್ಷೇತ್ರ ದೇವರಗುಡ್ಡ. ಈ ಕ್ಷೇತ್ರವನ್ನು 'ಗುಡ್ಡ ಗುಡ್ಡಾಪುರವೆಂದು' ಸಹ ಕರೆಯುವರು. ಉತ್ತರ ಕರ್ನಾಟಕದ ಮೈಲಾರ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ಸುಕ್ಷೇತ್ರ ದೇವರಗುಡ್ಡ. ಹಿರೇಮೈಲಾರಕ್ಕೆ ಹೋಗುವುದಕ್ಕಿಂತ ಪೂರ್ವದಲ್ಲಿ ಈ ಕ್ಷೇತ್ರಕ್ಕೆ ಭೇಟಿ ಕೊಡಬೇಕೆನ್ನುವುದು ಸಂಪ್ರದಾಯ. ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಜನಪದ ದೇವತೆಯಾಗಿರುವ 'ಮ್ಹಾಲತೀಶ' ನ ಸನ್ನದಿ ಸುಕ್ಷೇತ್ರ ದೇವರಗುಡ್ಡ. ಮಾಲತೇಶ(ಮ್ಹಾಲತೀಶ)ನನ್ನು ಮಲ್ಲಯ್ಯ, ಮೈಲಾರ, ಮಾರ್ತಾಂಡ, ಗುಡದಯ್ಯ, ಖಂಡೋಬಾ, ಖಂಡೇರಾಯ, ಗುಡ್ಡದ ಒಡೆಯ ಎಂದೆಲ್ಲಾ ಕರೆಯುತ್ತಾರೆ. ಜನಪದ ದೇವತೆಯ ಉಗಮದ ಪುಟಗಳನ್ನು ಗಮನಿಸಿದಾಗ, ಮನುಷ್ಯನ ವಿಕಾಸಕ್ರಮದಲ್ಲಿ ಪ್ರಥಮ ಹಂತದ್ದು ಬೇಟೆಯ ಸಂಸ್ಕೃತಿ (ಇದರ ದೈವತ ಭೈರವ), ದ್ವಿತೀಯ ಹಂತದ್ದು ಪಶುಪಾಲನ ಸಂಸ್ಕೃತಿ (ಇದರ ದೈವತ ಮೈಲಾರ) ಮತ್ತು ತೃತೀಯ ಹಂತದ್ದು ಕೃಷಿ ಸಂಸ್ಕೃತಿ (ಇದರ ದೈವತ ಮಲ್ಲಿಕಾರ್ಜುನ). ಈ ಎಲ್ಲಾ ಹಂತಗಳನ್ನು ಗಮನಿಸಿದಾಗ ಮೊದಲೆರಡು ಸಂಸ್ಕೃತಿಯಲ್ಲಿ ದೇವರ ಸಹಾಯಕ್ಕೆ ನಿಂತ ಶ್ವಾನ ಲಾಂಛನವಾಗಿ ಉಳಿದುಕೊಂಡಿತು ಮುಂದೆ ಕೃಷಿ ಸಂಸ್ಕೃತಿಯಲ್ಲಿ ನಂದಿ ಲಾಂಛನವಾಯಿತು. ಈ ಮೂರು ಸಂಸ್ಕೃತಿಗಳಿಗೆ ಸ...

ಡಾ ಬಾಬು ರಾಜೇಂದ್ರ ಪ್ರಸಾದವರ ಆಗಮದಿಂದಾಗಿ ಹಾವೇರಿಯಲ್ಲಿ ರಾಜೇಂದ್ರ ನಗರ ಹುಟ್ಟಿಕೊಂಡಿತು.....!!!

Image
ಡಾ ಬಾಬು ರಾಜೇಂದ್ರ ಪ್ರಸಾದವರ ಆಗಮದಿಂದಾಗಿ ಹಾವೇರಿಯಲ್ಲಿ ರಾಜೇಂದ್ರ ನಗರ ಹುಟ್ಟಿಕೊಂಡಿತು.....!!! ಹಾವೇರಿಯಲ್ಲಿ 5 ಮೇ 1935 ರಿಂದ 12 ಮೇ 1935 ರ ವರೆಗೆ ವಿಜ್ರಂಭಣೆಯಾಗಿ ಬಸವ ಜಯಂತಿಯನ್ನು ಆಚರಿಸಲು ಊರಿನ ಹಿರಿಯರು ನಿರ್ಣಯಿಸಿದರು. ಆ ದಿನದ ಅಂಗವಾಗಿ ಊರಲ್ಲಿ ಆಟ, ನೋಟ ಹಾಗೂ ಕುಸ್ತಿಗಳನ್ನು ಆಯೋಜಿಸಲಾಗಿತ್ತು.  ಹಬ್ಬದ ವಾತಾವರಣದಿಂದಾಗಿ ಮನೆಗಳು ಬೀಗರಿಂದಾ ತುಂಬಿ ತುಳುಕುತ್ತಿದ್ದವು.  ಈ ವಾತಾವರಣದಲ್ಲಿ ಅಂದರೆ 12/05/1935 ರಂದು ರಾಷ್ಟ್ರಸಭೆಯ ಅಧ್ಯಕ್ಷರಾದ ಡಾ. ಬಾಬು ರಾಜೇಂದ್ರ ಪ್ರಸಾದವರು ಆಚಾರ್ಯ ಕೃಪಲಾನಿಯವರೊಂದಿಗೆ ಮೇಲಗಾಡಿಯಲ್ಲಿ(ರೈಲು) ಪ್ರಯಾಣ ಬೆಳಸಿ ಮುಂಜಾನೆ 9.00 ಗಂಟೆಗೆ ಹಾವೇರಿಯ ರೈಲು ನಿಲ್ದಾಣಕ್ಕೆ ಬಂದಿಳಿದರು. ಹಾವೇರಿಯಲ್ಲಿ ಸ್ವಾತಂತ್ರ ಹೋರಾಟಗಾರರಿಗೆ ಭವನದ ಅವಶ್ಯಕತೆ ಇದ್ದುದರಿಂದ "ಸುಂದರ ಭವನದ" ಅಡಿಗಲ್ಲು ಸಮಾರಂಭಕ್ಕೆ ಅವರನ್ನು ಹಾವೇರಿಯ ಹೋರಾಟಗಾರರು ಬಸವ ಜಯಂತಿಯ ದಿನದಂದೂ ಆಹ್ವಾನಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆಚಾರ್ಯ ಕೃಪಲಾನಿಯರು ಜಯ ಪ್ರಕಾಶ ನಾರಾಯಣ ಹಾಗೂ ವಿನೋಭಾ ಬಾವೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಡಾ.ರಾಜೇಂದ್ರ ಪ್ರಸಾದ ಹಾಗೂ ಆಚಾರ್ಯ ಕೃಪಲಾನಿಯವರನ್ನು ಮೋಟಾರ ಗಾಡಿಯಲ್ಲಿ ಮೆರವಣಿಗೆಯ ಮುಖಾಂತರ ಹೈಸ್ಕೂಲ್ ಮೈದಾನಕ್ಕೆ ತರುವ ಇರಾದೆಯು ಸ್ಥಳೀಯ  ಮುಖಂಡರದ್ದಾಗಿತ್ತು. ಆದರೆ ಮಳೆ ಅವರ ಆಸೆಯನ್...

ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಹಾವೇರಿಯ ದ್ಯಾಮವ್ವನ ಕಟ್ಟೆ.......!!!!

Image
ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಹಾವೇರಿಯ ದ್ಯಾಮವ್ವನ ಕಟ್ಟೆ.......!!!! ಹಾವೇರಿ ನಗರದ ದ್ಯಾಮವ್ವನ ಕಟ್ಟೆ ಸುಮಾರು 150 ವರ್ಷಗಳಷ್ಟು ಹಳೆಯಾದದ ಸ್ವಾತಂತ್ರ ಹೋರಾಟಗಾರರ ನೆನಪನ್ನು ತನ್ನ ಹೃದಯಾಂತರದಲ್ಲಿ ಬಚ್ಚಿಟ್ಟುಕೊಂಡಿದೆ. ಅಂದು ಸಾವಿರಾರು ಹೋರಾಟಗಾರರಿಗೆ ಸ್ಪೂರ್ತಿಯ ಕೇಂದ್ರ ಇದಾಗಿತ್ತು. ಮಹಾತ್ಮಾ ಗಾಂಧೀಜಿಯವರು, ಸುಭಾಷಚಂದ್ರ ಭೋಸರು, ಡಾ.ರಾಜೇಂದ್ರ ಪ್ರಸಾದ, ವಿನೋಬಾ ಭಾವೆ, ಹರ್ಡೇಕರ ಮಂಜಪ್ಪನವರು, ಉಮಾದೇವಿ ಕುಂದಾಪುರ, ಕೆ.ಎಫ್ ಪಾಟೀಲ, ಮೈಲಾರ ಮಹದೇವಪ್ಪ, ಮುದವೀಡ ಕೃಷ್ಣರಾಯರು, ಹೊಸಮನಿ ಸಿದ್ದಪ್ಪನವರು, ಗುದ್ಲೇಪ್ಪ ಹಳ್ಳಿಕೇರಿಯವರು ಹಾಗೂ ಅನೇಕರ ಪಾದ ಸ್ಫರ್ಶದಿಂದ ಈ ಭೂಮಿ ಪುಣ್ಯ ಭೂಮಿಯನೆಸಿದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ದ್ಯಾಮವ್ವನ ಕಟ್ಟೆಯ ಮುಂಭಾಗದಲ್ಲಿ ಮೈದಾನವಿತ್ತು. ಪೇಟೆಯ ಮಧ್ಯಭಾಗದ ಸ್ಥಳವಾಗಿದ್ದರಿಂದ ಜನರನ್ನು ಬಹಳ ಸರಳವಾಗಿ ಕೂಡಿಸಬಹುದಾಗಿತ್ತು. ಮೇಲಾಗಿ ಗ್ರಾಮ ದೇವತೆ ಕಟ್ಟೆಯಾಗಿದ್ದರಿಂದ ಇಲ್ಲಿಯ ಹೋರಾಟಗಳಿಗೆ ಬಹಳ ಪಾವಿತ್ರತೆಯೂ ಇತ್ತು. ಇಲ್ಲಿಯ ಮುನಸಿಪಾಲಟಿಯವರು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸುವ ಸ್ಥಳವು ಇದಾಗಿತ್ತು. ಬ್ರಿಟಿಷ್‌ ಅಧಿಕಾರಿಯಾದ ಜಾನ್ ಥ್ಯಾಕರೆ ಕ್ರಿ.ಶ 1820 ಕ್ಕೆ ಹಾವೇರಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದಾಗ ನಗರ ಸಂಚಾರದ ಸಮಯದಲ್ಲಿ ದ್ಯಾಮವ್ವನ ಕಟ್ಟೆ, ದೊಡ್ಡಕೆರೆ ಹಾಗೂ ಗಂಧಕದ ರಸ್ತೆಗೆ ಭೇಟಿ ಕೊ...

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹಾವೇರಿಯಿಂದ ಮುದ್ರಣವಾಗುತ್ತಿದ್ದ ಬಸವರಾಜ ವಾರಪತ್ರಿಕೆ ಈಗ ನೆನಪು ಮಾತ್ರ.!!!!!!!!!!

Image
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹಾವೇರಿಯಿಂದ ಮುದ್ರಣವಾಗುತ್ತಿದ್ದ ಬಸವರಾಜ ವಾರಪತ್ರಿಕೆ ಈಗ ನೆನಪು ಮಾತ್ರ.!!!!!!!!!! ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಪತ್ರಿಕೆಯನ್ನು ಮುದ್ರಿಸುವ ಕಾರ್ಯ ಅಷ್ಟೊಂದು ಸುಲಭವಾಗಿರಲಿಲ್ಲ. ಕಾರಣ ಆವತ್ತಿನ ಕಾಲದಲ್ಲಿ ತಾಂತ್ರಿಕತೆ ಅಷ್ಟೊಂದಾಗಿ ಮುಂದುವರೆದಿರಲಿಲ್ಲ. ಮುದ್ರಣ ಕಾರ್ಯವು ಶ್ರಮದಾಯಕವಾಗಿತ್ತು. ಇಂತಹ ಕಠಿಣ ಸಮಯದಲ್ಲಿ ಜನರನ್ನು ಜಾಗೃತಗೊಳಿಸಬೇಕು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ  ಪ್ರೇರಣೆ ನೀಡಬೇಕು ಎಂಬ ಉದ್ದೇಶದಿಂದ ದಿ.ಚನ್ನಬವಪ್ಪ. ಮುರಿಗೇಂದ್ರಪ್ಪ ಹಾಲಪ್ಪನವರ "ಬಸವರಾಜ" ವಾರಪತ್ರಿಕೆಯನ್ನು 30-ಮೇ-1924 ರಂದು ದಿ.ಹರ್ಡೇಕರ ಮಂಜಪ್ಪನವರ ಪ್ರೇರಣೆಯಿಂದ ಬಸವಣ್ಣನ ದಿನವಾದ ಸೋಮವಾರದಂದು ಪತ್ರಿಕಾ ಪ್ರೇಮಿಗಳಿಗೆ ತಲುಪುವಂತೆ ಪ್ರಾರಂಭಿಸಿದರು. ಅಂದಿನ ಕಾಲದಲ್ಲಿ ಹಾವೇರಿಯಿಂದಲೇ ಪತ್ರಿಕೆ ಮುದ್ರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮುದ್ರಣಕ್ಕೆ ಬೇಕಾಗುವ ಮುದ್ರಣ ಯಂತ್ರಗಳು ಹಾಗೂ ಇತರ ಸಾಮಗ್ರಿಗಳು ಹಾಲಪ್ಪನವರವರ ಬೇಡಿಕೆಯಿಂದಾಗಿ ಜರ್ಮನದಿಂದ ಮುಂಬೈಯ ಮಾರ್ಗವಾಗಿ ಕಾರವಾರಕ್ಕೆ ಬಂದಳಿದವು. ಅಲ್ಲಿಂದ ಅವುಗಳನ್ನು ಹಾವೇರಿಗೆ ಎತ್ತಿನ ಬಂಡೆಯಲ್ಲಿ ತರಲಾಯಿತು. ಬೃಹತ್ ಗಾತ್ರದ ಯಂತ್ರಗಳನ್ನು ಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರಾದ ದಿ.ಚನ್ನಬಸವಪ್ಪನವರು ಹಾವೇರಿಯ ಸಿದ್ದದೇವಪುರದಲ್ಲಿರುವ ತಮ್ಮ ಸ್ವಗೃಹದಲ್ಲಿ ಇರಿಸಿದರು. ದಿ. ಚನ್ನಬಸವಪ್ಪ ಹಾಲಪ್ಪನವರ ಇವರು ಹರ್ಡಿಕರ ಮಂಜಪ್ಪನವ...

ಹಾವೇರಿ ತಾಲೂಕಿನ ಹಾವನೂರಿನಲ್ಲಿ ತಾಯಿಯನ್ನು ನೆನೆದು ವಿನೋಬಾ ಬಾವೆಯವರು ಬಿಕ್ಕಿ ಬಿಕ್ಕಿ ಅತ್ತರು....!!

Image
ಹಾವೇರಿ ತಾಲೂಕಿನ ಹಾವನೂರಿನಲ್ಲಿ ತಾಯಿಯನ್ನು ನೆನೆದು ವಿನೋಬಾ ಬಾವೆಯವರು ಬಿಕ್ಕಿ ಬಿಕ್ಕಿ ಅತ್ತರು....!! ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಗಾಗೋಡಿಯಲ್ಲಿಯ ವಿನೋಭಾ ಬಾವೆಯವರು (ವಿನಾಯಕ ನರಹರಿ ಬಾವೆ) ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ 1895ರ ಸೆಪ್ಟೆಂಬರ್ 11 ರಂದು ಜನಿಸಿದರು. ಕಣ್ಬಿಟ್ಟ ಗಳಿಗೆಯಿಂದ ಹಾವೇರಿ ಜಿಲ್ಲೆಯ ಹಾವನೂರು ಪ್ರಕೃತಿಯ ಸವಿಯನ್ನು ಅನುಭವಿಸಿದ್ದರು. ಕಾರಣ ಭಾವೆಯವರ ತಾಯಿ ರುಕ್ಕಿಣಿಬಾಯಿಯ ತವರೂರು(ಅವಳ ಸೋದರತ್ತೆ ಉಮಾತಾಯಿಯ ಊರು).ಉಮಾತಾಯಿಯ ಗಂಡ ಪರಶುರಾಮ ಜೋಗರು ಅಲ್ಲಿಯ ಐದು ಜೋಗ ಮನೆತನಗಳಲ್ಲಿ ಅವರೊಬ್ಬರು.  ರುಕ್ಕಿಣಿಬಾಯಿ ಹಾಗೂ ನರಹರಿ ಶಂಭುರಾವ್ ಅವರಿಗೆ ನಾಲ್ಕು ಗಂಡು (ವಿನಾಯಕ, ಬಾಲಕೃಷ್ಣ, ಶಿವಾಜಿ ಹಾಗೂ ದತ್ತಾತ್ರೇಯ) ಹಾಗೂ ಒಬ್ಬಳು ಹೆಣ್ಣು ಮಗಳು. ಇವರಲ್ಲಿ ಹಿರಿಯನಾದವನೇ ವಿನೋಬಾ ಭಾವೆ. ರುಕ್ಕಿಣಿಬಾಯಿಯ ತಾಯಿ ಚಿಕ್ಕಂದಿನಲ್ಲಿ ತೀರಿಕೊಂಡಿದ್ದರಿಂದ ಸೋದರತ್ತೆ ಉಮಾತಾಯಿಯೇ ತಾಯಿಯಂತೆ ಅವಳನ್ನು ನೋಡಿಕೊಳ್ಳುತ್ತಿದ್ದಳು. ಹೀಗಾಗಿ ರಜೆ ಅಥವಾ ಬಿಡುವಿನ ವೇಳೆಯಲ್ಲಿ ಹಿರಿಯ ಮಗ ವಿನೋಬಾರನ್ನು (ಪ್ರೀತಿಯಿಂದ ತಾಯಿಯು ವಿನ್ಯಾ ಎಂದು ಕರೆಯುತ್ತಿದ್ದಳು) ಕರೆದುಕೊಂಡು ಹಾವನೂರಿಗೆ ಬರುತ್ತಿದ್ದಳು (1905ರ ಆಸುಪಾಸಿನಲ್ಲಿ). ತಾಯಿಗೆ ಓದು ಬರೆಯಲು ಬರದಿದ್ದರೂ ತಂದೆ ಬಾಲಕೃಷ್ಣ ವೈದ್ಯರ (ವಿನೋಭರ ಮಾತಮಹಾ) ಪ್ರೇರಣೆಯಿಂದ ಅನೇಕ ಕೀರ್ತನೆಗಳನ್ನು ಹಾಡುತ್ತಾ ಪೂಜೆ ಪುನಸ್ಕಾರಗಳಲ್ಲಿ ಮಗ್ನರಾ...

ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ನೆನಪು......!!!!

Image
ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ನೆನಪು......!!!! 30/01/1948 ರ ಸಾಯಂಕಾಲ 5.07 ಕ್ಕೆ ವಿಶ್ವಸಂಸ್ಥೆಯ ಕಛೇರಿಯ ಮೇಲಿರುವ ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಎಲ್ಲಾ ದೇಶಗಳ ಧ್ವಜಗಳು ಅರ್ಧಕ್ಕೆ ಇಳಿಸಲ್ಫಟ್ಟಿದ್ದವು. ಕಾರಣ ಅದೂ ಯಾವುದೋ ರಾಜಕೀಯ ಪಕ್ಷದ ನಾಯಕನ, ರಾಜನ ಸಾವಿಗೆ ಸಂಭಂದಿಸಿದ ವಿಷಯಕ್ಕಲ್ಲ. ಬರಿಮೈಯಲ್ಲಿ ಪಂಚೆಯನ್ನುಟ್ಟು, ಕೋಲನ್ನು ಕೈಯಲ್ಲಿ ಹಿಡಿದು, ದೇಶಿಗರೆಲ್ಲಾ ಖಾದಿ ಬಟ್ಟೆಗಳನ್ನು ತೊಡಬೇಕೆಂದು ತಿಳಿಸುತ್ತಾ ಅಹಿಂಸೆ ಹಾಗೂ ಸತ್ಯ ಎಂಬ ತತ್ವಗಳಿಂದ ಜಗತ್ತನ್ನೇ ಗೆದ್ದು, ಜೀವನೂದ್ದಕ್ಕೂ ಗುಲಾಮಗಿರಿಯನ್ನು ಖಂಡಿಸುತ್ತಾ ಬಂದು ಜೀವನದ ಕೊನೆ ಗಳಿಗೆಯಲ್ಲಿ ಗುಂಡಿಗೆ ಬಲಿಯಾಗಿದ್ದ ಮಹಾತ್ಮ ಗಾಂಧಿಯವರ ಬಗ್ಗೆ  ವಿಶ್ವಸಂಸ್ಥೆ ಹಾಗೂ ಅನ್ಯ ದೇಶಗಳು ಇಟ್ಟ ಗೌರವ ಸೂಚಕದ ಪ್ರತಿಬಿಂಬ ಇದಾಗಿತ್ತು. ಜಗತ್ತಿನಲ್ಲಿಯ ಗಾಂಧೀಜಿಯವರ ಅನುಯಾ ಯಿಗಳು ಅಂದು ಶೋಕತಪ್ತರಾಗಿದ್ದರು. ಮನುಷ್ಯತ್ವ ಸತ್ತು ಹೋಯಿತಲ್ಲಾ ಎಂದು ಗೊಳಾಡಿದರು. ಮದುರೈನ ಮ್ಯೂಸಿಯಂನಲ್ಲಿ ಅಂದು ಅವರು ಗುಂಡೇಟು ತಿಂದಾಗ ಹಾಕಿಕೊಂಡಿದ್ದ ಶಾಲು ಹಾಗೂ ದೋತಿಯು ಆ ಕ್ಷಣದಲ್ಲಿಯ ಭೀಕರತೆಯನ್ನು ಇನ್ನೂ ತನ್ನಲ್ಲಿ ಜೀವಂತವಾಗಿರಿಸಿಕೊಂಡಿದೆ.1893 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆ ಮಹಾತ್ಮ ಗಾಂಧೀಜಿಯವರ ಜೀವನದ ದಿಕ್ಕನ್ನು ಬದಲಾಯಿಸಿತು ಎನ್ನ...

ದ. ರಾ.ಬೇಂದ್ರೆಯವರು ಕೆಲಕಾಲ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು......!!!!!

Image
ದ. ರಾ.ಬೇಂದ್ರೆಯವರು ಕೆಲಕಾಲ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು......!!!!! ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ದ.ರಾ.ಬೇಂದ್ರೆಯವರು ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರು ದ.ರಾ.ಬೇಂದ್ರೆ ಎಂದರೆ ಬರಿ ಕವಿತೆ ಒಂದೇ ಅಲ್ಲ. ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ. ಕನ್ನಡದಲ್ಲಿ ಅಲ್ಲದೆ ಮರಾಠಿಯಲ್ಲೂ ಅವರಿಗೆ ಹಿಡಿತವಿತ್ತು. (ಅವರ ಮೂಲ ಮಹಾರಾಷ್ಟ್ರ) ಅದರಲ್ಲೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಬರೀ ಸಾಹಿತ್ಯ ಒಂದೇ ಅವರ ಜೀವನವಾಗಿರಲಿಲ್ಲ. ಅದರ ಜೊತೆಗೆ ಭೌತ ವಿಜ್ಞಾನ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಆಕಾಶದ ಬಗ್ಗೆ, ಆಧ್ಯಾತ್ಮದ ಬಗ್ಗೆ. ಹೀಗೆ ಹತ್ತು ಹಲವು ವಿಷಯಗಳು ಅವರಲ್ಲಿ ಹಾಸುಹೊಕ್ಕಾಗಿದ್ದವು. ಅವರು ಅದ್ಭುತ ಭಾಷಣಕಾರರಾಗಿದ್ದರು. ವಿಷಯಗಳ ಮೇಲೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಕವಿತೆಯನ್ನು ಮನಮುಟ್ಟುವಾಗೆ ವಾಚನ ಕೂಡ ಮಾಡುತ್ತಿದ್ದರು. ಇಂತಹ ಮಹಾನಚೈತನ್ಯ ಶಕ್ತಿಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೂ ಅವಿನಾಭಾವ ಸಂಬಂಧವಿತ್ತು ಎಂಬುದು ವಿಶೇಷ.  ದ.ರಾ. ಬೇಂದ್ರೆಯವರು ಕ್ರಿ.ಶ 1919 ರಲ್ಲಿ ಹುಬ್ಬಳ್ಳಿಯ ಲಕ್ಷ್ಮೀಬಾಯಿಯವರನ್ನು ವಿವಾಹವಾದರು. ಕಷ್ಟ ಸಮಯದಲ್ಲಿಯೂ ಸಾಹಿತ್ಯದಲ್ಲಿ ಪತಿಯ ಎಳ್ಗೆಯನ್ನೆ ಬಯಸುತ್ತಿದ್ದಳು ಆ ಮಹಾತಾಯಿ. ಪತ್ನಿಯು ಮಕ್ಕಳ ಸಾವಿನಿಂದ ನೊಂದಿದ್ದ ಬೇಂದ್ರೆಯವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್...