ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ

ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ “ ಕಾಗಿನೆಲೆ ಹನ್ನೆರಡು” ಎಂದೇ ಪ್ರಸಿದ್ದಿಯನ್ನು ಪಡೆದ ಪಟ್ಟಣ, ಪ್ರಾಚೀನ ಕಾಲದಲ್ಲಿ ಅತಿಯಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿತ್ತು ಎಂದು ಶಾಸನ ಕವಿ ಹೀಗೆ ವರ್ಣಿಸುತ್ತಾನೆ. ಸಮುದ್ರದಂತೆ ಹೊಳೆಯುತ್ತಿರುವ ದೊಡ್ಡಕೆರೆ, ಸುಂದರವಾದ ಉದ್ಯಾನವನಗಳು, ಅತಿಯಾದ ನೆರಳನ್ನುಂಟು ಮಾಡುವ ಎಲೆ ಬಳ್ಳಿಗಳು, ಸುತ್ತಮುತ್ತ ಹರಡಿ ಕಣ್ಣಿಗೆ ರಂಜನೆ ಇಯುವ ಸುರಗಿ, ನಾಗ ಕುಸುಮಗಳ ಪುಷ್ಪಲತಾ ಗೃಹಗಳು ಸವಿಸ್ತಾರವಾಗಿ ಹಬ್ಬಿದ್ದು. ಕಾಗಿನೆಲೆಯನ್ನು ಸೌಂದರ್ಯದ ತಾಯಿ ನೆಲೆಯಾಗಿ ರಂಜಿಸುತ್ತಿವೆ ಎಂದು ಅನೇಕ ಕವಿಗಳು ವರ್ಣಿಸಿದ್ದಾರೆ. ಅಗ್ರಹಾರವಾಗಿದ್ದಂತಹ ಸುಗಂಧ ಬೀರುವ ನಾಡು ಕಾಗಿನೆಲೆ. ಈ ನಾಡು ದೊಡ್ಡಕೆರೆಯಿಂದ, ಭತ್ತ-ಗದ್ದೆಗಳಿಂದ, ಫಲಪುಷ್ಪ ಗಿಡಗಳಿಂದ, ಸುಂದರ ದೇವಾಸ್ಥಾನಗಳಾದಂತಹ ಕಲ್ಲೇಶ್ವರ, ಕಾಳಹಸ್ತೇಶ್ವರ, ಹಾಗೂ ಲಕ್ಷ್ಮೀ ನರಸಿಂಹ ದೇವಾಲಯದಿಂದ ಸುತ್ತ-ಮುತ್ತಲಿನ ಪ್ರದೇಶದಲ್ಲಿಯೇ ಪ್ರಸಿದ್ದಿಯನ್ನು ಪಡೆದಿತ್ತು. ಇಲ್ಲಿಯ ಸಂತ ಶ್ರೀ ಕನಕದಾಸರ ಗದ್ದುಗೆ ನಾಡಿನ ಎಲ್ಲಾ ಜನರ ಮನಸ್ಸನ್ನು ಕೀರ್ತನೆಯಿಂದ ಬಡಿದ್ದೆಬ್ಬಿಸುತ್ತಾ ಜ್ಞಾನ ಮಾರ್ಗದ ಕಡೆಗೆ ಒಯ್ಯಲು ಸದಾ ಚೈತನ್ಯಶಾಲಿಯಾಗಿ ನಿಂತ ಅದ್ಬುತ ಕೇಂದ್ರ ಬಿಂದುವಾಗಿದೆ. ಇಂತಹ ಕಾಗಿನೆಲೆಗೂ ಹಾಗೂ ವಿಶ್ವಗುರು ಬಸವಣ್ಣನವರ ಕಲ್ಯಾಣಕ್ಕೂ ಅವಿನಾಭಾವ ಸಂಭಂದವಿದೆ ಎಂಬುದೇ ಇಲ್ಲಿ ಪ್ರಾಮುಖ್ಯ...