ಸುಮಾರು 115 ವಷ೯ಗಳ ನಂತರ ನಡೆಯುತ್ತಿರುವ ಹಾವೇರಿಯ ದ್ಯಾಮವ್ವದೇವಿಯ ಜಾತ್ರೆ........!!!!!!
ಉತ್ತರ ಕನಾ೯ಟಕದ ಹೆಬ್ಬಾಗಿಲು ಜಿಲ್ಲೆ ಎಂದೇ ಪ್ರಸಿದ್ದಿಯನ್ನು ಪಡೆದ ಹಾವೇರಿಯನ್ನು ಶಾಸನಗಳಲ್ಲಿ ನಳಪುರಿ, ಪಾವರಿ, ಸಿದ್ದನಾಥಕ್ಷೇತ್ರ, ಹಾವರಿ ಹಾಗೂ ಹಾವೇರಿ ಎಂಬ ಹೆಸರುಗಳಿಂದ ಕರೆಯಲಾಗಿದೆ. "ಸೇವಣರ"(ಯಾದವರ) ಆಡಳಿತದಲ್ಲಿ 400 ಮಹಾಜನರು ಇಲ್ಲಿಯ ಅಗ್ರಹಾರದಲ್ಲಿ ವಾಸವಾಗಿದ್ದರು. ಅವರು ನೀಡುತ್ತಿದ್ದ ನಿಷ್ಪಕ್ಷಪಾತ ನ್ಯಾಯದಿಂದಾಗಿ ತಪ್ಪು ಮಾಡಿದವರು ಈ ಪಂಚಾಯಿತಿಗಿಗೆ ಹೆದರಿ" ಹಾವೇರಿ ಪಂಚಾಯಿತಿ" ಬೇಡಾ, ನಾವು ಅಲ್ಲಿ ಹೋದರೆ ಸಿಕ್ಕಿಕೊಳ್ಳುತ್ತೆವೆ ಎಂಬ ಭಯ ಅವರಲ್ಲಿ ಕಾಡುತ್ತಿತ್ತು. ಹೀಗಾಗಿ ಆ ಪಂಚಾಯಿತಿಯೇ "ಹಾವೇರಿ ಪಂಚಾಯಿತಿ " ಎಂಬ ಹೆಸರನ್ನು ಮುಂದೆ ಪಡೆದುಕೊಂಡಿತು. ಇಲ್ಲಿಯ ಐತಿಹಾಸಿಕ ಕೆರೆಯಾದ ಹೆಗ್ಗೇರಿಯ ಪಕ್ಕದಲ್ಲಿ ದೊರೆತೆ 8 ನೇ ಶತಮಾನದ ಶಾಸನದಲ್ಲಿ ಈ ಪುಣ್ಯಕ್ಷೇತ್ರವನ್ನು ಬ್ರಹ್ಮನ ನಿವಾಸ ಹಾಗೂ ಸರಸ್ವತಿಯ ಬೀಡು ಎಂದೆಲ್ಲಾ ಪ್ರಶಂಸಿಸಲಾಗಿದೆ. ಈ ಹಿಂದೆ ಹುಕ್ಕೇರಿ ಮಠದ ಹಿಂಭಾಗದಲ್ಲಿಯ ಬಾವಿಯಿಂದ ನೀರನ್ನು ತೆಗೆದು
"ಯಾಲಕ್ಕಿಯನ್ನು " ತೊಳೆಯುತ್ತಿದ್ದರು ಅವುಗಳು ಉಬ್ಬಿ ಬಿಳಿಯ ಬಣ್ಣಕ್ಕೆ ತಿರುಗುತ್ತಿತ್ತು. ಕಾರಣ ಆ ನೀರು ಗಂಧಕವನ್ನು ಹೊಂದಿತ್ತು ಹೀಗಾಗಿ ಆ ರಸ್ತೆಯನ್ನು 'ಕಂಧಕದ ರಸ್ತೆ' ಎಂದೂ ಈಗಲೂ ಸಹ ಕರೆಯುತ್ತಾರೆ. ಅನೇಕ ಪುಣ್ಯ ಪುರುಷರು ನಡೆದಾಡಿದ ಈ ಪುಣ್ಯಭೂಮಿಯು ಬ್ರಿಟಿಷರ ಆಳ್ವಿಕೆಯಲ್ಲಿ ಗ್ರಾಮವಾಗಿತ್ತು. ಆ ಕಾಲದಲ್ಲಿ "ಕಜ೯ಗಿ"ಯು ತಾಲೂಕಾ ಕೇಂದ್ರವಾಗಿತ್ತು ಎಂಬುದು ಗಮನಾರ್ಹ. ಮುಂದೆ ಬ್ರಿಟಿಷ ಸರಕಾರ ತಮ್ಮ ಆಡಳಿತವು ಸುಲಭವಾಗಿ ನಡೆಯಲಿ ಎಂಬ ಬಯಕೆಯಿಂದಾಗಿ ಹಾವೇರಿಯನ್ನು ಕ್ರಿ.ಶ 1905 ರಲ್ಲಿ ತಾಲೂಕನ್ನಾಗಿ ಘೋಷಿಸಿತು. ಇಲ್ಲಿ ಮುನ್ಸಿಪಾಲಟಿಯು ಕ್ರಿ.ಶ 1878 ರಲ್ಲಿಯೇ ಹುಟ್ಟಿಕೊಂಡಿತ್ತು. ಔಷದಿ ತಯಾರಿಸುವ ಘಟಕ ಇಲ್ಲಿ 1878 ರಲ್ಲಿ ಉದಯಿಸಿತು. ಕಿತ್ತೂರು ರಾಣಿ ಚೆನ್ನಮ್ಮನಿಂದ ಹತನಾದ "ಥ್ಯಾಕರೆಯು" ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಠಿಕಾಣೆ ಹೂಡಿದ್ದನು. ಹೀಗೆ ಹತ್ತು ಹಲವು ಇತಿಹಾಸದ ಘಟನಾವಳಿಗಳನ್ನು ಹೊಂದಿದ ಹಾವೇರಿಯಲ್ಲಿ 115 ವಷ೯ಗಳಿಂದ ಆಚರಣೆಯಾಗದೆ ಸ್ತಭ್ದವಾಗಿದ್ದ "ಗ್ರಾಮದೇವತೆಯ" ಜಾತ್ರೆ ಈಗ ಊರಿನ ಹಿರಿಯರ ನಿಧಾ೯ರದಿಂದ ನಡೆಯುತ್ತಿರುವುದು ಎಲ್ಲರಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಿದೆ. ಈ ಜಾತ್ರೆಯು ಮರೆತು ಹೋದ ಇತಿಹಾಸದ ಪುಟಗಳನ್ನು ಮತ್ತೆ ತೆರೆಯಲಿ ಎಂಬುದು ನನ್ನಾಸೆ. ಗ್ರಾಮೀಣ ಭಾಗಗಳಲ್ಲಿ 18 ವಿವಿಧ ಬಗೆಯ ದೇವರಿಗೆ (ಉದಾ: ದುಗ೯ವ್ವ, ಮಾರಮ್ಮ, ಪಾಲಕಮ್ಮ, ದ್ಯಾಮವ್ವ, ಕಾಳಮ್ಮ ಎಲ್ಲಮ್ಮ ...... ಮುಂತಾದವು) ಹರಿಕೆ ಹೋಗುವುದು ಸಾಮಾನ್ಯ. ಕಾರಣವೇನೆಂದರೆ ಈ ದೇವರುಗಳು ಕೋಪಗೊಂಡರೆ ಒಂದೊಂದು ತರಹದ ರೋಗಗಳು ಬರುತ್ತವೆ ಎಂಬುದು ಆ ಕಾಲದ ಜನರ ನಂಬಿಕೆಯಾಗಿತ್ತು. ಅದು ಆ ಕಾಲದಲ್ಲಿ ನಡೆದ ಘಟನೆಗಳಿಂದಾಗಿ ಸತ್ಯವು ಆಗಿರಬಹುದು. ಆ ದೇವರುಗಳ ಪ್ರೀತ್ಯಥ೯ವಾಗಿ ಕೋಳಿ, ಕುರಿ ಹಾಗೂ ಕೋಣವನ್ನು ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈಗ ನಡೆಯುತ್ತಿರುವ ಈ ಐತಿಹಾಸಿಕ ಜಾತ್ರೆಯಲ್ಲಿ ಇವುಗಳನ್ನು ಹೊರತುಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ದ್ಯಾಮವ್ವ ದೇವಿಯನ್ನು ಬಂಡೆಯ ಮೇಲೆ ಒಯ್ದು ಪಾದಕಟ್ಟೆಯ ಮುಂಭಾಗದಲ್ಲಿ ಪ್ರತಿಷ್ಠಾಪಿಸುತ್ತಾರೆ. ನಸುಕಿನಲ್ಲಿ ಕೋಣವನ್ನು ಆ ದೇವಿಗೆ ಬಲಿ ಕೊಡಲಾಗುತ್ತಿತ್ತು ಹಾಗೂ ಅವುಗಳ ಕೊಂಬುಗಳ ಮಧ್ಯದಲ್ಲಿ ದೀಪವನ್ನು ಹಚ್ಚಿ ರಾತ್ರಿಯಲ್ಲಾ ಆರದಿರುವಂತೆ ನೋಡಿಕೊಳ್ಳುತ್ತಿದ್ದರು. ಇದೊಂದು ಮಹಿಷಾಸುರ ಮದಿ೯ನಿಯ ಪವಾಡವನ್ನು ಬಿಂಬಿಸುತ್ತದೆ. ಕೆಲವು ಕಡೆ ಈ ವಿಚಾರವನ್ನು ಬಿಂಬಿಸಲು ಊರಿನ ಪೂವ೯ ದಿಕ್ಕಿನಲ್ಲಿ ಕೋಣನ ತೆಲೆಯ ಕಲ್ಲುಗಳು ಇನ್ನೂ ಜೀವಂತವಾಗಿವೆ. ಕೆಲವರ ಅಭಿಪ್ರಾಯದ ಪ್ರಕಾರ ಈ ಹಿಂದೆ ಹಾವೇರಿ ದೇವತೆಯ "ಹುಲಸನ್ನು" ಪಕ್ಕದ ಹೊಂಬರಡಿ ಗ್ರಾಮದವನು ಒಯ್ಯುತ್ತಿರುವಾಗ ಕನಕಾಪುರ ಹಾಗೂ ಹೊಂಬರಡಿ ಗ್ರಾಮದ ಮಧ್ಯದಲ್ಲಿರುವ ಗುಡ್ಡದಲ್ಲಿ ಅವನನ್ನು ಹಾವೇರಿ ಗ್ರಾಮದವರು ಹೊಡೆದುರುಳಿಸಿದರಂತೆ. ಈ ಮಾತು ಬಹುಶ: ಸತ್ಯವಿರಬಹುದು ಕಾರಣ ಆ ಗುಡ್ಡದ ಮೇಲೆ ಶಿರಚ್ಚೇದನಗೊಂಡಂತಹ ಒಂದು ವಿಗ್ರಹವನ್ನು ಈಗಲೂ ಸಹ ನೋಡಬಹುದಾಗಿದೆ. ಗ್ರಾಮೀಣ ಭಾಗಗಳಲ್ಲಿ ದೇವತೆ ವಿಗ್ರಹಗಳು ತಾಳಿಕೆ ಬರಲೆಂದು ಕಲ್ಲು ಅಥವಾ ಕಟ್ಟಿಗೆಯಿಂದ ಮಾಡುತ್ತಿದ್ದರು. ವಿಶೇಷವಾಗಿ ಬಸರಿ, ಆಲಗೌರಿ, ಮದ್ದಿ, ಮಳಗಿ, ಶ್ರೀದಂಧದ ಕಟ್ಟಿಗೆಯನ್ನು ಬಳಿಸುತ್ತಿದ್ದರು. ಆದರೆ ಕೆಲವೊಮ್ಮೆ ಮಾವು, ಜಾಲಿ, ಹುಣಸೆ, ಬೇವಿನ ಕಟ್ಟಿಗೆಯಿಂದಲೂ ಸಹ ಮಾಡಿದ್ದಾರೆ. ವಿಗ್ರಹವನ್ನು ಮಾಡಲು ಬಳಿಸುವ ಕಟ್ಟಿಗೆಯನ್ನು ತರುವ ದಿವಸಗಳನ್ನು ನಿಗದಿ ಪಡಿಸುತ್ತಿದ್ದರು.ಅಮವಾಸ್ಯೆಯು ಆದಿತ್ಯವಾರದಂದು ಬಂದರೆ ಯಾವುದಾದರು ಕಟ್ಟಿಗೆಯನ್ನು ವಿಗ್ರಹ ಮಾಡಲು ಬಳಿಸಬಹುದಾಗಿತ್ತು. ವಿಗ್ರಹವನ್ನು ಕಟ್ಟಿಗೆಯಲ್ಲಿ ಕೆತ್ತನೆ ಮಾಡುವಾಗ ಹಾಳಾಗಬಾರದೆಂದು ಬಡಿಗ ಕಾಯಕದವರು ಕುಲದೇವತೆಯಾದ 'ಕಾಳಮ್ಮ'ಳನ್ನು ನೆನೆಯುತ್ತಿದ್ದರು. ಹಾವೇರಿಯ ದೊಡ್ಡ ಹೊಂಡದ ( ಈಗ ಅಕ್ಕ ಮಹಾದೇವಿ ಹೊಂಡ ಎಂದು ಪ್ರಚಲಿತದಲ್ಲಿದೆ) ಸುತ್ತಮುತ್ತಲು ಜನವಸತಿ ಹೆಚ್ಚಾಗಿತ್ತು. ಕಾರಣ ಮೇಲಿನ( ಪ್ರವಾಸಿ ಮಂದಿರದ ಮುಂಭಾಗದಲ್ಲಿಯ) ಗದ್ದೆಯಿಂದ ಹರಿದು ಬರುತ್ತಿದ್ದ ನೀರು ಈ ಹೊಂಡದಲ್ಲಿ ಮತ್ತು ಮುನ್ಸಿಪಲ್ ಹೈಸ್ಕೂಲಿನಲ್ಲಿಯ ಹೊಂಡದಲ್ಲಿ ( ಈಗ ಮುಚ್ಚಲ್ಪಟ್ಟಿದೆ) ಶೇಖರಣೆಯಾಗುತ್ತಿತ್ತು. ಈ ನೀರನ್ನು ಕುಡಿಯಲು ಬಳಿಸುತ್ತಿದ್ದರು. ಹೀಗಾಗಿ ಅಂದು ಜನವಸತಿಗೆ ಯೋಗ್ಯವಾದ ಸ್ಥಳ ಇದಾಗಿತ್ತು. ಹಳೆ ಹಾವೇರಿಯ ಈ ಭಾಗದಲ್ಲಿ ಕಲ್ಮೇಶ್ವರ, ಮೈಲಾರ ದೇವಸ್ಥಾನ, ಈಶ್ವರ, ಹೊಂಡದ ಮಠ, ರಾಘವೇಂದ್ರ ಸ್ವಾಮಿ ಮಠ, ವೆಂಕಪ್ಪ ದೇವಸ್ಥಾನ, ಕಾಳಮ್ಮದೇವಿ ದೇವಸ್ಥಾನ ಹಾಗೂ ಬಸವಣ್ಣದೇವರುಗಳು ಇರುವುದರಿಂದ ಇದೊಂದು ಶಕ್ತಿ ಕೇಂದ್ರವಾಗಿತ್ತು. ಈ ಭಾಗದಲ್ಲಿ ಸುಮಾರು 400 ವಷ೯ಗಳ ಹಿಂದೆ " ದ್ಯಾಮವ್ವ ದೇವಿಯನ್ನು " ಪ್ರತಿಷ್ಠಾಪಿಸಲಾಗಿದೆ ಎನ್ನಬಹುದು. ಕಟ್ಟಿಗೆಯ ಆವರಣದಿಂದ ಕೂಡಿದ ದೇವಸ್ಥಾನದಲ್ಲಿ ದೇವಿಯ ಸಹೋದರಿಯರ ವಿಗ್ರಹಗಳನ್ನು ಅಕ್ಕಪಕ್ಕದಲ್ಲಿ ಇರಿಸಲಾಗಿದೆ. ಪ್ರಬಾವಳಿಯಲ್ಲಿ ವಿಷ್ಣುವಿನ ದಶಾವತಾರಗಳ ಚಿತ್ರಗಳು ಚಿತ್ತಾಕಷ೯ಕವಾಗಿವೆ. ಇಲ್ಲಿ ವಜ್ರದುಂಡಿ ಕಲ್ಲಿನಲ್ಲಿ ಕೆತ್ತಲ್ಪಟ್ಟ ಜಟಾದಾರಿ ಗಣಪನನ್ನು ವಿಶೇಷವಾಗಿ ನೋಡಬಹುದು. ದ್ಯಾಮವ್ವ ದೇವಿಯ ವಿಗ್ರಹವನ್ನು " ಬಹುಶಃ ಹಳೆ ಹಾವೇರಿಯ ಮಾಲಗೌಡರು" ಮಾಡಿಸಿರಬಹುದಾಗಿದೆ. ಕಾರಣ ಗ್ರಾಮೀಣ ಪ್ರದೇಶದಲ್ಲಿಯ ದ್ಯಾಮವ್ವನ ವಿಗ್ರಹಗಳನ್ನು ಇವರುಗಳೇ ಮಾಡಿಸಬಹುದಾಗಿತ್ತು ಎಂಬುದನ್ನು ಸಂಶೋಧಕರು ಉಲ್ಲೇಖಿಸುತ್ತಾರೆ. ಈ ದೇವಿಯನ್ನು ಆರಾಧಿಸುತ್ತಿರುವ ಈಗಿನ ಶ್ರೀ ದ್ಯಾಮಣ್ಣ ಬಡಿಗೇರ ವಂಶಸ್ಥರೇ ಈ ಹಿಂದೆ ಬಹಳ ಪಾವಿತ್ರತೆಯಿಂದ ಕೆತ್ತಿರಬಹುದಾಗಿದೆ. ವಿಜ್ರಂಭಣೆಯಿಂದ ನಡೆಯುತ್ತಿದ್ದ ನಡೆಯುತ್ತಿದ್ದ ಜಾತ್ರೆ ಬರಗಾಲದಿಂದಾಗಿ ಸ್ಥಗಿತಗೊಂಡಿತ್ತು ಎನ್ನಬಹುದು. ಕಾರಣ ಬ್ರಿಟಿಷರ ದಾಖಲಾತಿಯ ಪ್ರಕಾರ ಕ್ರಿ.ಶ 1899 ರಲ್ಲಿ "ಮುಂಬೈ ಪ್ರಸಿಡೆನ್ಸಿಯಲ್ಲಿ" (ಈಗಿನ ಹಾವೇರಿಯನ್ನು ಒಳಗೊಂಡಂತಹ ಭಾಗ) ಭೀಕರ ಬರಗಾಲದಿಂದಾಗಿ ಹಾಗೂ ಅಂತರ ಪ್ರಾದೇಶಿಕ ವ್ಯಾಪಾರ ಇಲ್ಲದಿದ್ದರಿಂದಾಗಿ 4 ಲಕ್ಷದ 62 ಸಾವಿರ ಜನರು ಮರಣವನ್ನು ಹೊಂದಿದರು ಎಂದು ಉಲ್ಲೇಖಿಸಲಾಗಿದೆ. ಅದರ ಪರಿಣಾಮ ನಮ್ಮ ಹಾವೇರಿಯ ಮೇಲೆಯೂ ಬಿದ್ದಿರಬಹುದಾಗಿದೆ. ಕಾರಣ ಆ ವಿಷಯಕ್ಕೆ ಪುಷ್ಠಿ ನೀಡುವ ದಾಖಲೆಯೊಂದು ದೇವಸ್ಥಾನದಲ್ಲಿದೆ. ಆ ಭೀಕರ ಬರಗಾಲದಿಂದ ತಮ್ಮನ್ನು ಹಾಗೂ ತಮ್ಮ ಧನಕರಗಳನ್ನು ಕಾಪಾಡಲು ದ್ಯಾಮವ್ವ ದೇವಿಗೆ ದಿ:6/8/1900 ರಂದು ದೀಪಗಳನ್ನು (ಸಮೇವು) "ಗೌಳಿ" ಓಣಿಯವರು ನೀಡಿರುತ್ತಾರೆ. ತದನಂತರ ಸ್ವಾತಂತ್ರ ಚಳುವಳಿಯು ಈ ಭಾಗದಲ್ಲಿ ಕಾವು ಪಡೆದಿದ್ದರಿಂದ ಜಾತ್ರೆಯ ಚಿಂತೆಯನ್ನು ಆಗಿನ ಜನರು ಮಾಡಲಿಲ್ಲವೆನ್ನಬಹುದು. ಎಲ್ಲಾ ವಗ೯ದವರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಎಲ್ಲರಿಗೂ "ಬಾಬನ್ನು" ನೀಡಲಾಗಿತ್ತು. ಬಹುಶಃ ಅವರು ಭೀಕರ ಬರಗಾಲದ ಪರಿಸ್ಥಿತಿಯಿಂದಾಗಿ ಊರನ್ನೇ ತೊರೆದು ಹೋಗಿರಬಹುದು, ಎನ್ನುತ್ತಾ 80 ರ ಇಳಿಯ ವಯಸ್ಸಿನ ದ್ಯಾಮಣ್ಣ ಬಡಿಗೇರ ಕಣ್ಣಂಚನ್ನು ಒದ್ದೆಯಾಗಿಸಿಕೊಂಡರು. ಅವರ ಆ ದು:ಖದ ಬಾಷ್ಪ ಜಾತಿ-ಧಮ೯ವನ್ನು ಮೀರಿದ ಪ್ರೀತಿ-ವಾತ್ಸಲ್ಯದ ಪ್ರತೀಕವೆನ್ನಬಹುದು. ಈ ಹಿಂದೆ ದೇವಿಯನ್ನು ಬಂಡಿಯಲ್ಲಿ ಕುಳ್ಳರಿಸಿಕೊಂಡು ಮೆರವಣಿಗೆಯ ಮುಖಾಂತರ ಗೌಳಿಯರ ಓಣಿ, ಮೇಲಿನ ಪೇಟೆಯ ಮುಖಾಂತರ ಹೋಗಿ ಚವತಿಯ (ಚೌಕಕಟ್ಟೆ) ಕಟ್ಟೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದರು. ಅಲ್ಲಿ ಮಂಗಳ ಕಾಯ೯ ಮುಗಿದ ಮೇಲೆ ಗಡಿಯ ಭಾಗಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈಗಿನ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿಯ ಗಡಿ ದುಗ೯ವ್ವ ದೇವಸ್ಥಾನ. ತೆರಬೀದಿ ಹನುಮಂತದೇವರು ಹಾಗೂ ಮುರಗಿ ಮಠದ ( 1931 ರಲ್ಲಿ ಗಾಂಧೀಜಿಯವರು ಹಾವೇರಿಗೆ ಬಂದಾಗ ಇಲ್ಲಿಯೇ ವಾಸ್ತವ್ಯವನ್ನು ಹೂಡಿದ್ದರು) ಭಾಗವೇ ಬಹುಶಃ ಗಡಿ ಭಾಗವಾಗಿರಬಹುದು. ಗಡಿ ಭಾಗದಿಂದ ದುಷ್ಟ ಶಕ್ತಿಗಳು ಊರೊಳಗೆ ಬರದಿರಲಿ ಹಾಗೂ ಜನರು ಸುಭಿಕ್ಷೆಯಿಂದರಲಿ ಎಂಬ ಅಭಿಪ್ರಾಯದಿಂದಾಗಿ ದೇವಿಯ ಜಾತ್ರೆಯನ್ನು ಮಾಡುತ್ತಿದ್ದರು. ಈ ದೇವಿಯ ಚಾಕರಿ ಮಾಡುವವರಿಗೆ ಪಕ್ಕದ 'ಯತ್ನಳ್ಳಿ' ಗ್ರಾಮದಲ್ಲಿ ಜಮೀನಿತ್ತು ಆದರೆ ತೆರೆಗೆ ಕಟ್ಟಲಿಲ್ಲವೆಂದು ಬ್ರಿಟಿಷರು ಅದನ್ನು 'ಲೀಲಾವ್ ' ಮಾಡಿದರು. ಇಂತಹ ಐತಿಹಾಸಿಕ ಜಾತ್ರೆ ಜನರಲ್ಲಿ ಪ್ರೀತಿ-ವಾತ್ಸಲ್ಯವನ್ನು ಇಮ್ಮಡಿಗೊಳಿಸುವುದರೊಂದಿಗೆಕಳೆದು ಹೋದ ಕೊಂಡಿಗಳನ್ನು ಕೂಡಿಸುವಂತಹ ಶಕ್ತಿಯನ್ನು ಹೊಂದಿದೆ ಎಂಬುದು ನನ್ನ ಅಭಿಪ್ರಾಯ.
~~ ಪ್ರಮೋದ ನಲವಾಗಲ ~~
ಹಾವೇರಿ
9686168202
Comments
Post a Comment