ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!
ಹೊಯ್ಸಳರ ಲಾಂಛನದಲ್ಲಿಯ "ಪ್ರಾಣಿ ಹುಲಿಯಲ್ಲ ಸಿಂಹ"..................!
ಹೊಯ್ಸಳರ ದೊರೆ ವಿಷ್ಣುವರ್ಧನ್ ಈಗಿನ ಹಾವೇರಿ ಜಿಲ್ಲೆಯ ಬಂಕಾಪುರ ಹಾಗೂ ಹಾನುಗಲ್ ನ್ನು ಉಪರಾಜಧಾನಿಗಳನ್ನಾಗಿ ಮಾಡಿಕೊಂಡು ಆಡಳಿತವನ್ನು ಮಾಡಿ ಕೊನೆಗಾಲದಲ್ಲಿ ಬಂಕಾಪುರದಲ್ಲಿಯೇ ಪ್ರಾಣವನ್ನು ಬಿಟ್ಟನು ಎಂಬುದು ವಿಶೇಷ. ರಟ್ಟಿಹಳ್ಳಿಯ ಕದಂಬೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಹಾಗೂ ಚೌಡದಾನಪುರದ ಮುಕ್ತೇಶ್ವರ ದೇವಸ್ಥಾನಗಳಲ್ಲಿ ಹೊಯ್ಸಳರ ಲಾಂಛನವನ್ನು ನೋಡಬಹುದಾಗಿದೆ. ಆದರೆ ಅವುಗಳು ತನ್ನ ನಾಯಕನ ಕಥೆಯನ್ನು ಜನರಿಗೆ ವಿಭಿನ್ನ ರೀತಿಯಲ್ಲಿ ತಿಳಿಸುತ್ತಿರುವುದು ವಿಶೇಷ. ದಂತಕತೆಯ ಪ್ರಕಾರ ಜೈನ ಗುರು ಸುದತ್ತಚಾರ್ಯನು ಸೊಸೆಯೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ "ಸಳನಿಗೆ" "ಹೊಯ್ ಸಳ" ಎಂದು ಆಜ್ನಾಪಿಸಿದನು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಈ ದಂತ ಕಥೆಯು ಕಂಡು ಬಂದದ್ದು ಕ್ರಿ.ಶ ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ. ಕಾರಣ ಹುಲಿಯೊಡನೆ ಬೇಟೆಯಾಡಲು ಆತನಿಗೆ ಅಹಿಂಸಾ ಧಮ೯ ಅಡ್ಡಿಯಾಗಲಿಲ್ಲವೆ ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಅದೆನೆಂದರೆ.........ಅಡ್ದಿಯಾಗಲಿಲ್ಲ ......ಎಕೆಂದರೆ ಆತ ಮೂಲದಲ್ಲಿ ಬೇಟೆಗಾರನಾಗಿದ್ದು ಆ ಸ್ಥಳದಲ್ಲಿ ಬೇಟೆಯನ್ನಾಡುತ್ತಿರುವಾಗ ಈ ಘಟನೆ ನಡೆದಿರಬಹುದಾಗಿದೆ. ಮುಂದೆ ಜೈನ ಗುರುಗಳ ಸಹಾಯದಿಂದ ಆತ ಸಾಮ್ರಾಜ್ಯ ಕಟ್ಟಿರಬಹುದು ( ಕಾರಣ ಹೊಯ್ಸಳರಕ್ಕಿಂತ ಪೂವ೯ ಆ ಸ್ಥಳದಲ್ಲಿ ಜೈನರು ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದರು). ಇನ್ನೂಂದು ಉಹೆಯ ಪ್ರಕಾರ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಕಾರಣ ಪೋಯ್ - ಚೋಳ". “ಪೋ" ಅನ್ನುವುದು ಕನ್ನಡದ ಪದ. "ಪೋಗಾದಿರೆಲೋ ರಂಗಾ....” ಕೇಳ್ಳಿದ್ದೀರಲ್ಲ? ಪೋ ಅನ್ನುವುದನ್ನು ಹೋಗು, ಕಳಿಸು, ಓಡಿಸು ಅನ್ನುವ ಆರ್ಥದಲ್ಲಿ ಬಳಸಲಾಗುತ್ತದೆ. "ಪೋಯ್ - ಚೋಳ" ಅಂದರೆ, ಚೋಳರನ್ನು ಓಡಿಸಿದವ ಎಂದರ್ಥ. ಆಡುಭಾಷೆಯಲ್ಲಿ, "ಪೋಯ್ - ಚೋಳ", “ಪೋಯ್ಚಳ" ಆಗುತ್ತದೆ. “ಪೋಯ್ಚಳ" ಮುಂದೆ “ಹೊಯ್ಸಳ" ಆಗಿದೆ ಎಂಬುದು ಮೇಲ್ನೋಟಕ್ಕೆ ಸರಿಯಾದದ್ದು ಅನಿಸುತ್ತದೆ. ಹೊಯ್ಸಳರ ದೊರೆ ಬಿಟ್ಟಿದೇವ(ವಿಷ್ಣುವದ೯ನ) ಕೊಂದ ಪ್ರಾಣಿ ದಂತಕಥೆಯ ಪ್ರಕಾರ ಹುಲಿಯಾಗಿದೆ ಆದರೆ ಲಾಂಛನದಲ್ಲಿರುವ ಪ್ರಾಣಿ ಸಿಂಹವಾಗಿದೆ(ಹಳೆಬೀಡು ಹಾಗೂ ಬೇಲೂರ ಶಿಲಾ ವಿಗ್ರಹಗಳನ್ನು ನಾನು ಗಮನಿಸಿದಾಗ). ಹಾಗಾದರೆ ದಂತಕಥೆ ಸುಳ್ಳೆ......! ಎಂಬುದಕ್ಕೆ ಉತ್ತರ ಇಲ್ಲಿದೆ...... ವಿಷ್ಣುವರ್ಧನ್ ದಂತಕಥೆಯಲ್ಲಿ ಕೊಂದ ಪ್ರಾಣಿ ಹುಲಿಯಾಗಿದ್ದು, ಅದು ಲಾಂಛನದಲ್ಲಿ ಸಿಂಹದ ರೂಪವನ್ನು ಪಡೆದುಕೊಂಡಿದೆ. ಕಾರಣ ಲಾಂಛನದಲ್ಲಿಯ ಪ್ರಾಣಿಯ ಬಾಲದ ತುದಿಯನ್ನು ನಾವು ಗಮನಿಸಿದಾಗ ಕುದಲಿನ ಗುಂಪನ್ನು ನೋಡಬಹುದಾಗಿದೆ ಹಾಗೂ ದೇಹದ ಆಕೃತಿಯನ್ನು ಗಮನಿಸಿದಾಗ ಅದು ಹುಲಿಯಲ್ಲ ಸಿಂಹವೆಂದು ಯಾವ ಸಂಶಯವಿಲ್ಲದೆ ನಾವು ಹೇಳಬಹುದಾಗಿದೆ. ಮತ್ತೊಂದು ವಿಷಯವನ್ನು ನಾವು ಇಲ್ಲಿ ಗಮನಿಸಬೇಕು. ಅದೆಂದರೆ, ಸಳನು ಹುಲಿಯ ಬದಲಾಗಿ ಸಿಂಹವನ್ನೆ ಕೊಂದಿರಬಹುದು? ಎಂದು ಯಾರಾದರೂ ಭಾವಿಸಿದ್ದಲ್ಲಿ ,10 ಹಾಗೂ 11 ನೆ ಶತಮಾನದಲ್ಲಿ ಸಿಂಹಗಳು ಆ ಭಾಗದಲ್ಲಿ ಇರಲಿಲ್ಲ (ಬ್ರಿಟಿಷ್ ದಾಖಲಾತಿ ಪ್ರಕಾರ) ಹೀಗಾಗಿ ಅವನು ಸಿಂಹವನ್ನು ಕೊಲ್ಲಲು ಹೇಗೆ ಸಾಧ್ಯ ? ಹೊಯ್ಸಳರ ಹಲವು ಶಿಲಾ ಲಾಂಛನಗಳನ್ನು ಗಮನಿಸಿದಾಗ ನಮಗೆ ಹುಲಿಯ ಬದಲು ಸಿಂಹದ ಆಕೃತಿ ಬರಲು ಕಾರಣವೆನೆಂದು ತಿಳಿಯುತ್ತದೆ. ನಮ್ಮ ದೇಶದಲ್ಲಿಯ ಪುರಾಣಗಳ ಪ್ರಕಾರ ಸಿಂಹವೇ ಶ್ರೇಷ್ಠ ಪ್ರಾಣಿಯೆಂದು ತಿಳಿಯುತ್ತಾ ಬಂದಿದ್ದು, ಮುಂದೆ ಅದುವೆ ಕಾಡಿನ ರಾಜಾ ಎನಸಿಕೊಂಡಿದೆ. ಹೀಗಾಗಿ ಬೇಟೆಗಾರನಾಗಿದ್ದ ವಿಷ್ಣುವರ್ಧನ್ ನ ಪೌರುಷವನ್ನು ಜನಸಾಮಾನ್ಯರಲ್ಲಿ ಇಮ್ಮಡಿಗೊಳಿಸುವ ಸಲುವಾಗಿ ಹುಲಿಯ ಬದಲು ಸಿಂಹವನ್ನು ಖಂಡರಿಸಲಾಗಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಆದರೆ ವಾಸ್ತವವಾಗಿ ಹುಲಿಯು ಸಿಂಹಕ್ಕಿಂತ ಬಲಿಷ್ಠವಾದ ಪ್ರಾಣಿ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಈ ಹೊಯ್ಸಳರ ಲಾಂಛನದ ಬಗ್ಗೆ ಇನ್ನೂ ಹೆಚ್ಚು ಅಧ್ಯಾಯನ ನಡೆಸುವುದು ಉಚಿತ. ( ಪ್ರಮೋದ. ಸೋ. ನಲವಾಗಲ)
Comments
Post a Comment