ಹತ್ತಿಬಿತ್ತಿ ಹಾಳಾಗಿ ಹೋಗು..............

     ತಂದೆಯ ಮಾತನ್ನು ಮಕ್ಕಳು  ಕೇಳದೆ ಇದ್ದಾಗ ಅಥವಾ ಹಿರಿಯರ ಮಾತನ್ನು ಕಿರಿಯರು ಕೇಳದೆ ಇದ್ದಾಗ ಈ ಮೇಲಿನ ಮಾತನ್ನು ಹಳೆಯ ಧಾರವಾಡ  ಜಿಲ್ಲೆಯಲ್ಲಿ (ಈಗಿನ ಹಾವೇರಿಯನ್ನು ಒಳಗೊಂಡಂತೆ) ಸಾಮಾನ್ಯವಾಗಿ ಬಳಸುವುದನ್ನು ನಾವು ನೋಡಬಹುದು. ಆದರೆ ಈ ಮಾತಿನ ಹಿಂದೆ ಒಂದು ದೊಡ್ಡ ಇತಿಹಾಸವೆ ಇದೆ ಎಂಬುವುದು ವಿಶೇಷ. 19 ನೇ ಶತಮಾನದ ಪ್ರಾರಂಭದಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾದ ಬದಲಾವಣೆಯೊಂದಿಗೆ ಹೊಳೆಯಂತೆ ಹರಿದ ಹಣದ ಪರಿಣಾಮವಾಗಿ ಅನೇಕ ಹತ್ತಿ ಬೆಳೆಗಾರರು ಹಾಳಗಿದ್ದನ್ನು ಬಿಂಬಿಸುವ ಮಾತಾಗಿ 'ಹತ್ತಿಬಿತ್ತಿ ಹಾಳಾಗಿ ಹೋಗು' ಎಂಬ ಮಾತು ಜನ ಸಾಮಾನ್ಯರಲ್ಲಿ ಹುಟ್ಟಿಕೊಂಡಿತು. ಅಮೇರಿಕದಲ್ಲಿ ನಡೆದ ಯಾದವೀ ಯುದ್ಧದ ಕಾಲಕ್ಕೆ ಆ ದೇಶದಿಂದ ಇಂಗ್ಲೇಂಡಗೆ ಬರುವ ಹತ್ತಿಯು ನಿಂತುದ್ದದ್ದರಿಂದ ಅಲ್ಲಿಯ ಹತ್ತಿ ಅವಲಂಬಿತ  ಕೈಗಾರಿಕೆಗಳು ಮುಚ್ಚುವ ಭೀತಿಯಲ್ಲಿದ್ದವು.ಆಗ ಆ ಕೈಗಾರಿಕೆಗಳು ಭಾರತದ ಹತ್ತಿಯ ಮೇಲೆ ಹೆಚ್ಚಾಗಿ  ಅವಲಂಬಿತವಾದವು. ಅಮೆರಿಕನ್ ಹತ್ತಿಯು ಅಂದು ಧಾರವಾಡ ಜಿಲ್ಲೆಯನ್ನು ನಿದಾನವಾಗಿ ಆಕ್ರಮಿಸಲಾರಂಭಿಸಿತು. ಜಿಲ್ಲೆಯಲ್ಲಿ ಕ್ರಿ.ಶ 1842 ರಲ್ಲಿ ಕೇವಲ ಎರಡು ಎಕರೆ ಇದ್ದ ಹತ್ತಿ ಬೆಳೆ 1878 ರಲ್ಲಿ 2.46 ಲಕ್ಷ ಎಕರೆಯಷ್ಟು ಜಮೀನನ್ನು ಆಕ್ರಮಿಸಿಕೊಂಡಿತು. ಒಂದು ಹಂಡಿಗೆಗೆ ಕೇವಲ 75 ರಿಂದ 100 ರೂಪಾಯಿಗಳಷ್ಟು ಇದ್ದ ಬೆಲೆ, ಅಮೇರಿಕದಲ್ಲಿಯ ಯಾದವೀ ಕಲಹದ ಪರಿಣಾಮವಾಗಿ ಹಂಡಿಗೆಗೆ 380 - 465 ರೂಪಾಯಿಯಾಯಿತು.ಹತ್ತಿ ಬೆಳೆಗಾರರ ಮೂಗದಲ್ಲಿ ಸಂತೋಷದ ಛಾಯೆ ಕಾಣಲಾರಂಭಿಸಿತು. ಇದರ ಪರಿಣಾಮವೆಂಬಂತೆ ಕ್ರಿ.ಶ 1866 ರಲ್ಲಿ ಹಾವೇರಿ ಹಾಗೂ ಧಾರವಾಡ ಮಧ್ಯದಲ್ಲಿಯ ವರದಾ ನದಿಗೆ ಹತ್ತಿ ಸಾಗಿಸಲು ಸೇತುವೆ ಕಟ್ಟಲಾಯಿತು, ಒಳ್ಳೆಯ ರಸ್ತೆಗಳಾದವು. ಕ್ರಿ.ಶ 1889 ರಲ್ಲಿ ಧಾರವಾಡದಿಂದ ವಾಸ್ಕೊಗೆ ರೈಲು ಸಂಪಕ೯ ಕಲ್ಪಿಸಲಾಯಿತು. 1888 ರಲ್ಲಿ ಹುಬ್ಬಳ್ಳಿಯಲ್ಲಿ ರೈಲ್ವೆ ವಕ೯ಶಾಪ್ ಪ್ರಾರಂಭವಾಯಿತು. ಅತಿಯಾಗಿ ಹರಿದ ಹಣದ ಪರಿಣಾಮವೆಂಬಂತೆ ಭೂಮಿಯ ಬೆಲೆ ಹೆಚ್ಚಿತು, ಅತಿಯಾದ ವರದಕ್ಷಿಣೆ ರೂಢಿಗೆ ಬಂತು. ಇದೆ ಕಾಲಕ್ಕೆ ಉಳಿತಾಯದ ಸ್ವಾಭಾವ ಬೆಳೆದು ಬ್ಯಾಂಕಗಳು ಪ್ರಾರಂಭವಾದವು. ಅಡ್ಡ ಪರಿಣಾಮಗಳು ಎಂಬಂತೆ ಜಗಳ, ಕಟ್ಲೆಗಳು ಹೆಚ್ಚಾದವು ಜನರ ಮನಸ್ಥಿತಿ ಬದಲಾಗಿ ಸಹೋದರರ ಮಧ್ಯದಲ್ಲಿ ಕಲಹಗಳು ಹೆಚ್ಚಾಗತೊಡಗಿದವು. ಕೆಲವರು ಜಮೀನಿನ ಕಲಹದಿಂದಾಗಿ ಕೋಟ್೯ ಮೆಟ್ಟಿಲುಗಳನ್ನು ಎರಬೇಕಾಯಿತು. ಹಲುವಾರು ಜನ ದುಶ್ಚಟಗಳಿಗೆ ಬಲಿಯಾಗಿ ಪ್ರಾಣವನ್ನೆ ಕಳೆದುಕೊಂಡರು. ಇಂತಹ ಬದಲಾಣೆಯಿಂದಾದ ದುಷ್ಪರಿಣಾಮಗಳನ್ನು ಸಮೀಪದಿಂದ ಗಮನಿಸಿದ ಜನಸಾಮಾನ್ಯರು ಇದು ಹತ್ತಿಯಿಂದಾದ ಪರಿಣಾಮವೆಂದು ತಿಳಿದು, ಯಾರದರು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರಲು " ಹತ್ತಿ ಬಿತ್ತಿ ಹಾಳಾಗಿ ಹೋಗು"ಎನ್ನುವ ಮಾತನ್ನು ಅಂದು ಬಳಿಸಲಾರಂಭಿಸಿದರು........ಈಗಲೂ ಸಹ ಈ ಮಾತು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಕಾರಣ ತಪ್ಪು ದಾರಿಯಲ್ಲಿ ನಡೆಯುತ್ತಿರುವರನ್ನು ಸರಿದಾರಿಗೆ ತರಲು ಇದನ್ನು ಗೊತ್ತಿದ್ದೊ-ಗೊತ್ತಿರದೊ ನಾವು ಉಪಯೋಗಿಸುತ್ತಿರುತ್ತೇವೆ.                               ###ಪ್ರಮೋದ ಎಸ್ ನಲವಾಗಲ ###

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!