ಕನಾ೯ಟಕದ ನಾಟಕ ಪಿತಾಮಹಾನ ಕಮ೯ಭೂಮಿಯಾದ ಹಾವೇರಿಯ ಅಗಣ್ಡೆ( ಅಗಡಿ ಗ್ರಾಮದ )ಯ ಇತಿಹಾಸ........
ಜಿಲ್ಲಾ ಕೇಂದ್ರ ಹಾವೇರಿಯ ಸಮೀಪದ ಐತಿಹಾಸಿಕ ಗ್ರಾಮ " ಅಗಡಿ ". ಈ ಗ್ರಾಮದಲ್ಲಿಯ ಶಾಸನಗಳು, ಪುರಾತನ ದೇವಾಲಯಗಳು ಸಾವಿರಾರು ವಷ೯ಗಳ ಗತ ವೈಭವದ ಮೂಖ ಸಾಕ್ಷಿಗಳಾಗಿವೆ. ಪುರಾತನವಾದ ಈ ಗ್ರಾಮವನ್ನು ಶಾಸನದಲ್ಲಿ (ಕ್ರಿ.ಶ 1116 ರ) 'ಅಗಣ್ಡೆ 'ಎಂದು ಕರೆಯಲಾಗಿದೆ. ಬಹುಶಃ ದುಂಡಾದ ಸಣ್ಣ ಬೆಟ್ಟದ ರೂಪದಲ್ಲಿ ಈ ಗ್ರಾಮವಿದ್ದುದರಿಂದ ಈ ಗ್ರಾಮವನ್ನು ಶಾಸನದಲ್ಲಿ ' ಅಗಣ್ಡೆ' ಎಂದು ಕರೆದಿರಬಹುದಾಗಿದೆ ಎಂದು ಡಾ.ರಮೇಶ ತೆವರಿ ಅಭಿಪ್ರಾಯಪಟ್ಟಿದ್ದಾರೆ.
ಈಗಿನ ಅಗಡಿಯು ಮೂರು ಗ್ರಾಮಗಳನ್ನೊಳಗೊಂಡ ದೊಡ್ಡ ಗ್ರಾಮವಾಗಿದೆ. ಕನ್ನಡ ಸಾಹಿತ್ಯಕ್ಕೆ, ಹಿಂದೂಳಿದ ಜನರ ಕಲ್ಯಾಣಕ್ಕಾಗಿ ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನದೆ ಕೊಡುಗೆಯನ್ನು ಕೊಟ್ಟ ಜಿಲ್ಲೆಯ ವಿಶೇಷ ಗ್ರಾಮ ಇದಾಗಿದೆ. ಈ ಗ್ರಾಮದಲ್ಲಿಯ ಬಸವಣ್ಣನ ಗುಡಿಯ ( ಹೊಲದಲ್ಲಿ ಹಾಳು ಬಿದ್ದಿರುವ) ಮುಂಭಾಗದಲ್ಲಿಯ ಕ್ರಿ.ಶ 1116 ರ ಶಾಸನದಲ್ಲಿ ಈ ಗ್ರಾಮವನ್ನು 'ಅಜಣ್ಡೆ' ಎಂದು ಉಲ್ಲೇಖಿಸಲಾಗಿದೆ.
ಬಂಕೆಯರಸನ ಅಧಿಕಾರಿಯಾದ "ಬಿರುದರದೇವ" ಬಿರುದೇಶ್ವರದೇವರ ದೇವಾಲಯವನ್ನು ಕಟ್ಟಿಸಿದನು. ಈ ದೇವರಿಗೆ 'ವರೇಶ್ವರಪಂಡಿತದೇವರ' ಕಾಲು ತೊಳೆದು ಅನೇಕ ದಾನಗಳನ್ನು ನೀಡಿದನು. ಈ ಗ್ರಾಮದ ಮುಖ್ಯಸ್ಥನಾಗಿದ್ದ 'ಬಮ್ಮಿಸೆಟ್ಟಿ'ಯನ್ನೊಳಗೊಂಡು ನಗರದ ಐಯ್ನೂರರ ಸಂಘದ ವ್ಯಾಪಾರಸ್ಥರು ಭತ್ತವನ್ನು ಹಾಗೂ 'ತೆಲ್ಲಿಗಾರರು' ನಂದಾದೀಪಕ್ಕೆ ಗಾಣವನ್ನು ಬಿಟ್ಟರು ಎಂದು ತಿಳಿಸುತ್ತದೆ. ಇದೇ ಶಾಸನದಲ್ಲಿ ' ಸವಣೂರು' ಎಂಬ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಶಾಸನದಲ್ಲಿ ಅಗಡಿಯ ಕೆಲವು ಸ್ಥಳಗಳ ಪರಿಚಯವನ್ನು ಹೀಗೆ ತಿಳಿಸುತ್ತದೆ. ಅದೇನೆಂದರೆ ಬಿರುದೇಶ್ವರದೇವರ ದೇವಸ್ಥಾನದ ( ಬಹುಶಃ ಹಾಳದ ಬಸವಣ್ಣನ ದೇವಸ್ಥಾನವೇ ಆಗಿರಬಹುದು) ಪೂವ೯ದಿಕ್ಕಿನಲ್ಲಿ 'ಕೆಂಗೆರೆ' ಹಾಗೂ "ಮಯ್ಯಾ೯ದೆ" ಕೆರೆ ಇವೆ ( ಈಗ ಇವಗಳನ್ನು ದೊಡ್ಡಕೆರೆ ಹಾಗೂ ಸಣ್ಣಕೆರೆ ಎಂದು ಕರೆಯಲಾಗುತ್ತಿದೆ), ಕೋಟೆ ಹಾಗೂ ಕೋಟೆಯ ಪಶ್ಚಿಮಕ್ಕೆ ಹಳ್ಳವೊಂದು ಹರಿಯುತ್ತಿದೆ ಎಂದು ತಿಳಿಸುತ್ತದೆ.
ಈ ಶಾಸನದಲ್ಲಿಯ ವಿಷಯವನ್ನು ಗಮನಿಸಿದಾಗ ಈ ಗ್ರಾಮದಲ್ಲಿ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು ಹಾಗೂ ಆ ಬೆಳೆಗೆ ಬೇಕಾಗುವ ನೀರಿನ ವ್ಯವಸ್ಥೆ ಚನ್ನಾಗಿತ್ತು ಎಂಬುದನ್ನು ತಿಳಿಯಬಹುದಾಗಿದೆ. ಈ ಶಾಸನ ಪಕ್ಕದಲ್ಲಿ 12 ನೇ ಶತಮಾನದಲ್ಲಿ ಮಡಿದ ಯೋಧನ ವೀರಗಲ್ಲನ್ನು ಕಾಣಬಹುದು. ಕಲ್ಯಾಣ ಚಾಳುಕ್ಯರ ಜಗದೇಕಮಲ್ಲನ ಕಾಲದ ಶಾಸನದಲ್ಲಿ 'ಅಮಿತರಾಸಿಜೀಯರ ಪುತ್ರ ಮಾರೆನಾಯಕ ಬಚೇಶ್ವರ ದೇವರಿಗೆ ನೀಡಿದ ಭೂದಾನವನ್ನು ಉಲ್ಲೇಖಿಸುತ್ತದೆ. ಕ್ರಿ.ಶ 1679 ರ ಶಾಸನದಲ್ಲಿ ದೇಸಾಯಿಯವರ ಉಲ್ಲೇಖ ಬರುತ್ತದೆ. ಹಾಗೇಯೇ ಕ್ರಿ.ಶ 1805 ರ ಶಾಸನದಲ್ಲಿ ಗುತ್ತಲದ ದೇಸಾಯಿ ಬಹಾದ್ದೂರ ಲಿಂಗಪ್ಪಗೌಡರು ಶಿವರಾಯ ಜೋಯಿಸನಿಗೆ ನೀಡಿದ ಭೂದಾನವನ್ನು ತಿಳಿಸುತ್ತದೆ. ಕೋಟೆ ಬಯಲಿನಲ್ಲಿರುವ ಕಲ್ಲಪ್ಪನ ದೇವಾಲಯವು ಪುರಾತನವಾಗಿದ್ದು ಅದನ್ನು 1956 ರಲ್ಲಿ 'ದುರುಗಾದೇವಿ ಜೋಷಿಯವರು ' ಜೀಣೊ೯ದ್ದಾರ ಮಾಡಿದ್ದಾರೆ. ಅದರ ಪಕ್ಕದಲ್ಲಿ ವೀರಗಲ್ಲೊಂದನ್ನು ನೋಡಬಹುದು. ಅದನ್ನು ಸ್ಥಳಿಯರು ಖಂಡಪ್ಪನ ಕಲ್ಲು ಅಥವಾ ಹುಲಿಗಲ್ಲೆಂದು ಕರೆಯುತ್ತಾರೆ. ಭಗ್ನಗೊಂಡ ವಿಘ್ನೇಶ್ವರ ವಿಗ್ರಹಗಳು ಹಾಗೂ ವಿಷ್ಣುವಿನ ವಿಗ್ರಹಗಳನ್ನು ನಾವು ಗ್ರಾಮದಲ್ಲಿ ನೋಡಬಹುದು.
ರಾಣೇಬೆನ್ನೂರಿನ ಐರಣಿ ಕೋಟೆ, ರಟ್ಟಿಹಳ್ಳಿಯ ಹಳ್ಳೂರ ಕೋಟೆ ಹಾಗೂ ಹಾವನೂರ ಕೋಟೆಗಳನ್ನು ಗಡಿಪ್ರದೇಶಗಳೆಂದು ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಹಾವನೂರ ಸಂಸ್ಥಾನವು ಹಾಳಾಗಿದ್ದರಿಂದ ಮೂಲ ಪುರಷನಾದ ವೀರಹನುಮಂತಗೌಡ ಬಹದ್ದೂರ ದೇಸಾಯಿ ವಂಶಸ್ಥರಾದ ಲಿಂಗಪ್ಪಗೌಡರಿಗೆ ಪರಮ ಪೂಜ್ಯ ಚಿದಂಬರರ ಪ್ರೇರಣೆಯಿಂದ ಅಗಡಿಯ ದೇಶಗತಿ 17 ನೇ ಶತಮಾನದಲ್ಲಿ ದೊರೆಕಿತು. ಪೇಶ್ವೆಯವರು ನೀಡಿದ ಇನಾಮಿನಿಂದಾಗಿ ಇಂದಿಗೂ ಸಹ "ಬಹದ್ದೂರ ದೇಸಾಯಿ" ಎಂಬ ಉಪನಾಮವನ್ನು ಈ ವಂಶಸ್ಥರು ಹೊಂದಿದ್ದಾರೆ. ಇವರು ಆಗಿನ ಕಾಲದಲ್ಲಿ ತಾವು ವಾಸ ಮಾಡಲು ವಾಡೆಯಲ್ಲಿ ಅರಮನೆಯನ್ನು ಕಟ್ಟಿಸಿಕೊಂಡಿದ್ದರು. ಆದರೆ ವಾಡೆಯು ಈಗ ಸಂಪೂಣ೯ವಾಗಿ ಆಧುನಿಕತೆಯ ಕಡೆಗೆ ನಡೆದಿದೆ ಎನ್ನಬಹುದು. ಪೇಶ್ವೆಯವರು ಇಚಲ ಗೀಡಗಳನ್ನು ಬೆಳೆಸಲು ಈ ಭಾಗದಲ್ಲಿ ಪರಿಣಿತರಿಗೆ ಅವಕಾಶವನ್ನು ಕಲ್ಪಿಸಿದರು. ಅಲ್ಲಮ ಪ್ರಭುಗಳು ಕಲ್ಯಾಣಕ್ಕೆ ಬಳ್ಳಿಗಾವಿಯಿಂದ ಹೋಗುತ್ತಿರುವಾಗ ಜಕ್ಕನಕೊಪ್ಪಕ್ಕೆ ಬಂದಿದ್ದರು ಆ ವಿಷಯವನ್ನು ತಿಳಿದ ಅಗಡಿ ಗ್ರಾಮಸ್ಥರು ಅವರನ್ನು ತಮ್ಮ ಗ್ರಾಮಕ್ಕೆ ಬರಮಾಡಿಕೊಂಡರು.
12 ನೇ ಶತನದಲ್ಲಿ ಬಂದಿದ್ದ ಪ್ರಭುಸ್ವಾಮಿಗಳು ಅಲ್ಲಿಯೇ ಅನುಷ್ಠಾನಗೈದರು ಆ ಸ್ಥಳವು ಈಗ ಪವಿತ್ರವಾದ ಪ್ರಭುಸ್ವಾಮಿ ಮಠವಾಗಿ ಕಂಗೊಳಿಸುತ್ತಿದೆ. ನಿಜ೯ನ ಪ್ರದೇಶದಲ್ಲಿರುವ ಗವಿಮಠವು 200 ವಷ೯ಗಳ ಹಿಂದೆ ಸ್ಥಾಪಿತವಾಯಿತು. ಇಲ್ಲಿ 18 ನೇ ಶತಮಾನದಲ್ಲಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸಜೀವ ಸಮಾದಿಯಾಗಿದ್ದಾರೆ. ಶ್ರೀ ಶರಣಪ್ಪ ಗೌಳಿಯವರು ದೊಡ್ಡಾಟದ ಅನೇಕ ಕಾವ್ಯಗಳನ್ನು ಇದೇ ಸ್ಥಳದಲ್ಲಿ ರಚಿಸಿದ್ದಾರೆ. ಕ್ರಿ.ಶ 1500 ರಂದು ಧಮ೯ ಜಾಗೃತಿಗಾಗಿ ವಿರಕ್ತ ಚಕ್ರವತಿ೯ ಯಡೆಯೂರ ಸಿದ್ದಲಿಂಗೇಶ್ವರ ಸ್ವಾಮಿಗಳು ತಮ್ಮ 770 ವಿರಕ್ತ ಶಿಷ್ಯ ಸಮೂಹದೊಡನೆ ಅಗಡಿಗೆ ಬಂದಿದ್ದರು. ಅದರಲ್ಲಿಯ ಶಿಷ್ಯರಾದ ಪೂಜ್ಯ ಶ್ರೀ ಗುರುಬಸವ ದೇಶಿಕೇಂದ್ರರು ಧಮ೯ ಜಾಗೃತಿಗಾಗಿ ಇಲ್ಲಿಯೇ ನೆಲೆಸಿದರು. ಶ್ರೀಗಳು ಮಠವನ್ನು ಕಟ್ಟಿ ಪೂಜೆ, ಜಪ-ತಪ ಮಾಡುತ್ತಿದ್ದರು. ಅವರು ನೂರಾರು ಪಾರಿವಾಳಗಳನ್ನು ಮಠದಲ್ಲಿ ಸಾಕಿದ್ದರು. ಅವುಗಳು ಶ್ರೀಗಳಿಗೆ ಸಹಕಾರಿಯಾಗಿತ್ತಿದ್ದವು ಹೀಗಾಗಿ ಮಠಕ್ಕೆ "ಹಕ್ಕಿ ಮಠ " ಎಂಬ ಹೆಸರು ರೂಡಿಗೆ ಬಂದಿತು ಮುಂದೆ ಅಕ್ಕೀಮಠವಾಗಿ ಬದಲಾಯಿತು. ಅಂದಿನ ಶ್ರೀಗಳು ಆದಿಶಕ್ತಿ ಚೌಡೇಶ್ವರಿಯನ್ನು ಸಾಕ್ಷಾತ್ಕಾರಿಸಿಕೊಂಡಿದ್ದರಿಂದ ಈ ಸ್ಥಳವು ಜಾಗೃತ ಸ್ಥಳವಾಗಿ ಬದಲಾಯಿತು. ಈಗಿನ ಶ್ರೀಗಳಾದ ಪರಮ ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಜಪ-ತಪದೊಂದಿಗೆ ಪರಿಸರದ ಕುರಿತು ಜನರಲ್ಲಿ ಜಾಗೃತಿಯನ್ನು ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಮಾಡುತ್ತಾ ಕನಾ೯ಟಕದ ಜನರ ಮನೆಮಾತಾಗಿದ್ದಾರೆ. ಪುತ್ರ ವಗ೯ದ ಮಠವಾದ "ಕಲ್ಮಠವು" ಸಣ್ಣ ಕೆರೆಯ ಸಮೀಪದಲ್ಲಿದ್ದು ಅಲ್ಲಿ "ಲಲಾಟ ಸ್ವಾಮಿಗಳ" ಗದ್ದುಗೆಯನ್ನು, ದಾಸೋಹ ಉಗ್ರಾಣವನ್ನು ಹಾಗೂ ಸಿಹಿ ನೀರಿನ ಬಾವಿಯನ್ನು ನೋಡಬಹುದಾಗಿದ್ದು, ಸತತ ಮಳೆಯಿಂದಾಗಿ ಮಠದ ಕಟ್ಟಡ ಹಾಳಾಗುತ್ತಿದೆ. ಕ್ರಿ.ಶ 1848 ರಲ್ಲಿ ಚಿದಂಬರನ ದಿವ್ಯ ವಿಭೂತಿಯಾಗಿ ಈ ಪುಣ್ಯ ಭೂಮಿಯಲ್ಲಿ ಅವತಾರವಿಟ್ಟ ಮಹಾಪುರುಷರು ಶ್ರೀ ಶೇಷಾಚಲ ಸದ್ಗುರುಗಳು. ಇವರುಗಳ ಜ್ಞಾನಕ್ಕೆ ಮಾರು ಹೋಗಿದ್ದ ಶಿಶುನಾಳ ಶರೀಫ್ ಸಾಹೇಬರು ಹಾಗೂ ನವಲಗುಂದ ನಾಗಲಿಂಗ ಮಹಾಸ್ವಾಮಿಗಳು ಆಗಾಗ ಅಗಡಿಗೆ ಬಂದು ಹೋಗುತ್ತಿದ್ದರು. ಶೇಷಾಚಲ ಸದ್ಗುರುಗಳು ಜಪ-ತಪಗಳೊಂದಿಗೆ ಶೈಕ್ಷಣಿಕ ರಂಗದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದ್ದರು 1908 ರಲ್ಲಿ ಅಗಡಿಯ ಆನಂದವನದಲ್ಲಿ ಗಳಗನಾಥರ ಉಸ್ತುವಾರಿಯಲ್ಲಿ 'ಸದ್ಬೋಧ ಚಂದ್ರಿಕೆ" ಪತ್ರಿಕೆಯನ್ನು ಪ್ರಾರಂಭಿಸಿದರು. ದಿ.ಬಿ.ಎಫ ಕಾಳೆಯವರು ಎಡಿಟರ್ಗಳಾಗಿ ಕಾಯ೯ನಿವ೯ಹಿಸುತ್ತಿದ್ದರು. ಶ್ರೀಗಳ ಶಕ್ತಿಯನ್ನು ಬಲ್ಲವರಾಗಿದ್ದ ಕನಾ೯ಟಕದ ಅನೇಕ ಜನರು ಈ ಮಠದ ಭಕ್ತರಾದರು. ಅನೇಕ ಪವಾಡಗಳನ್ನು ಈ ಪುಣ್ಯ ಭೂಮಿಯಲ್ಲಿ ಶ್ರೀಗಳು ಮಾಡಿದ್ದಾರೆ. ಸದ್ಗುರು ಶೇಷಾಚಲ ಗುರುಗಳ ಹಾಗೂ ಅವರ ಪರಮಾಪ್ತ ಶಿಷ್ಯರಾದ ನಾರಯಣ ಭಗವಾನಜೀಯವರ ವೃಂದಾವನಗಳನ್ನು ನಾವು ಆನಂದವನದಲ್ಲಿ ನೋಡಬಹುದು. ಅವುಗಳು ಭಕ್ತರು ಬೇಡಿದ ವರಗಳನ್ನು ಕೊಡುವ ಕಲ್ಪವೃಕ್ಷಗಳಾಗಿವೆ ಎಂದರೆ ತಪ್ಪಾಗಲಾರದು. ಆನಂದವನ ಹಳೆಯ ಧಾರವಾಡ ಜಿಲ್ಲೆಯ ಸಾಹಿತ್ಯವನ್ನು ಕಟ್ಟಿ ಬೆಳೆಸುವಲ್ಲಿ ಬಹುಮುಖ್ಯ ಪಾತ್ರವಹಿಸಿತ್ತು. ಉದಾಹರಣೆಗೆ ಕ್ರಿ.ಶ 1926 ರಲ್ಲಿ "ಶ್ರೀ ಕನಕಮಹಿಮಾ ದಶ೯ನ" ಎಂಬ ಪುಸ್ತಕವು ಶಿಡೆನೂರಿನ ದಿ.ಭೀಮಾಚಾಯ೯ ವಡವಿಯವರಿಂದ ಬರೆಯಲ್ಪಟ್ಟಿತು. ಗಳಗನಾಥರ ಅನೇಕ ಕಾದಂಬರಿಗಳು ಇಲ್ಲಿಯೇ ಜೀವ ತುಂಬಿಕೊಂಡವು. ಕನಾ೯ಟಕದ ನಾಟಕ ಪಿತಾಮಹ ಎಂದೇ ಪ್ರಸಿದ್ಧಿಯನ್ನು ಪಡೆದ " ಸಕ್ಕರೆ ಬಾಳಾಚಾಯ೯ರು " ಮೂಲತಃ ಸಾತೇನಹಳ್ಳಿಯವರು. ಅವರು ಮುಖ್ಯೋಪಾಧ್ಯಾಯರಾಗಿ ಕ್ರಿ.ಶ 1886-1895 ವರೆಗೆ ಒಂಬತ್ತು ವಷ೯ಗಳ ಕಾಲ ಅಗಡಿಯಲ್ಲಿ ಸೇವೆಯನ್ನು ಸಲ್ಲಿಸದರು. ಈ ವೇಳೆ ಅವರು ಇಲ್ಲಿ ವಿರಾಟಪವ೯, ಚಿತ್ರಸೇನಗಂಧವ೯ ಹಾಗೂ ಅನೇಕ ನಾಟಕಗಳನ್ನು ಮರಾಠಿ ಭಾಷೆಯ ಪ್ರಾಬಲ್ಯದಲ್ಲಿಯು ಕೂಡಾ ಕನ್ನಡದಲ್ಲಿ ರಚಿಸಿ ಅವಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದರು. ಇವರು ನಿವೃತ್ತಿಯನ್ನು ಅಗಡಿಯಲ್ಲಿ ಹೊಂದಿದಾಗ ಶಿಷ್ಯ ಬಳಗದವರು ಹಾಗೂ ಗ್ರಾಮಸ್ತರು ಸೇರಿ ವೀರಾಪುರದ ಸಮೀಪ 12 ಎಕರೆ ಜಮೀನನ್ನು ಹಾಗೂ ಮನೆಯನ್ನು ಗುರುಕಾಣಿಕೆಯನ್ನಾಗಿ ನೀಡಿದರೆಂದರೆ ಶಿಕ್ಷಕರಾದ ಅನೇಕರಿಗೆ ಇದು ಹೆಮ್ಮೆಯ ವಿಷಯ. ಕಲ್ಯಾಣ ಚಾಳುಕ್ಯರ ಕಾಲದಿಂದಲೂ ಅಗಡಿ ಗ್ರಾಮವು ಕುಸ್ತಿಯಲ್ಲಿ ತನ್ನದೆ ಛಾಪನ್ನು ಮೂಡಿಸಿದೆ. ಅಂತಯೇ 1930 ರಲ್ಲಿ ಪಾಕಿಸ್ತಾನದ ಪೈಲ್ವಾನ ಪಾಷಾ ಉಮರ್ ಅಗಡಿಯ ಕುಸ್ತಿಪಟುಗಳ ಮುಂದೆ ಸೋತು ಸುಣ್ಣವಾದನು.
ಬಡೋದೆಯ ಗಾಮಾ-ಗುಂಗಾ ಹಾಗೂ ಪಂಜಾಬಿನ ಅಲಂಚುವಾನು ಅಗಡಿಯಲ್ಲಿ ಪೈಲ್ವಾನರೊಂದಿಗೆ ಕಾದಾಡಿದ್ದಾರೆ. ಅಗಡಿಯಲ್ಲಿ " ಒಡ್ಢನೆಂಬ ಜಟ್ಟಿಯು ಆ ಕಾಲದಲ್ಲಿ ಪ್ರಸಿದ್ದಿಯನ್ನು ಪಡೆದಿದ್ದನು. ಪ್ರಪ್ರಥಮವಾಗಿ ಸಕ೯ಸ್ ನ್ನು ಕನಾ೯ಟಕಕ್ಕೆ ಪರಿಚಯಿಸಿದ ಕಿತಿ೯ ಈ ಗ್ರಾಮಕ್ಕೆ ಸಲ್ಲುತ್ತದೆ. ಕ್ರಿ.ಶ 1875 ರಲ್ಲಿ ಸಕ೯ಸ್ ಕಂಪನಿಯನ್ನು ದಿ.ಈಳಿಗೇರ ಯಲ್ಲಪ್ಪ ಪ್ರಾರಂಭಿಸಿದರು. ಅವರ ಸಕ೯ಸ್ ಕಂಪನಿಯು ಕನಾ೯ಟಕದ್ಯಾಂತ ಪ್ರಸಿದ್ಧಿಯನ್ನು ಪಡೆದಿತ್ತು. ಈ ಗ್ರಾಮವು ಪುರವಂತಿಕೆಗೂ ಸಹ ಪ್ರಸಿದ್ಧಿಯನ್ನು ಹೊಂದಿತ್ತು. ಸುಗ್ಗಾ ಚನ್ನಪ್ಪ, ಈರಪ್ಪ ಕ್ಷೌರದ ಹಾಗೂ ವೀರಪ್ಪ ಕಮ್ಮಾರರವರು ಪ್ರಸಿದ್ದ ಪುರವಂತರಾಗಿದ್ದರು. 1919 ರಲ್ಲಿ ಶ್ರೀ ರಾಜಪುರೋಹಿತರು ಅಖಿಲ ಕನಾ೯ಟಕ ಬ್ರಾಹ್ಮಣ ಸಭೆಯನ್ನು ಇದೇ ಗ್ರಾಮದಲ್ಲಿ ನಡೆಸಿದ್ದರು. ಇಲ್ಲಿಯ ನೇಕಾರರ ಸೀರೆ ಮತ್ತು ಪಂಚೆಗಳಿಗೆ ಬ್ರಿಟಿಷ್ ಸರಕಾರದಲ್ಲಿ ಬಹು ಬೇಡಿಕೆ ಇತ್ತು ಎಂಬುದನ್ನು ಮರೆಯುವಂತಿಲ್ಲ. ಭಾರತ ಸ್ವಾತಂತ್ರ್ಯದ ವೇಳೆಯಲ್ಲಿ ಈ ಗ್ರಾಮದಿಂದ ಅನೇಕ ಹೋರಾಟಗಾರರು ಬ್ರಿಟಿಷರ ವಿರುದ್ದ ದಂಗೆ ಎದ್ದಿದ್ದರು. ಅವರಲ್ಲಿ ಶ್ರೀ ಸಿಂಪಿಗೇರ, ದಿ.ಕರಿಯಪ್ಪ ಹುಚ್ಚಣ್ಣನವರ, ಶ್ರೀ ತುಳಜಪ್ಪ ಹಾಗೂ ಶ್ರೀ ಬಾಬುರಾಯ ಪ್ರಮುಖರು.
ದಿ.ಗುದ್ಲೇಪ್ಪ ಹಳ್ಳಿಕೇರಿಯವರ ಅಡಗುತಾಣ ಅಂದು ಅಗಡಿಯಾಗಿತ್ತು ಎಂಬುದು ವಿಶೇಷ. ಸ್ವಾತಂತ್ರ ಹೋರಾಟಗಾರರಾಗಿದ್ದ ದಿ.ಕರಿಯಪ್ಪ ಹುಚ್ಚಣ್ಣನವರ ಸಾಹಿತ್ಯಿಕ ಕೊಡುಗೆ ಅತ್ಯಮೂಲ್ಯವಾದದು. ಅವರು 1965 ರಲ್ಲಿ ಸಂತ ಶ್ರೀ ಕನಕದಾಸರ 400 ನೇ ಜಯಂತೋತ್ಸವವನ್ನು ಕಾಗಿನೆಲೆಯಲ್ಲಿ ಅದ್ದೂರಿಯಾಗಿ ನಡೆಸಿದರು. ಈ ವೇಳೆಯಲ್ಲಿ "ಮಹಾತ್ಮ ಶ್ರೀ ಕನಕದಾಸರು ಎಂಬ ಗ್ರಂಥವನ್ನು ಲೋಕಾಪ೯ಣೆ ಮಾಡಿದರು. ಕನಕ ಜ್ಯೋತಿಯನ್ನು ದೆಹಲಿಯವರೆಗೆ ಕೊಂಡೊಯ್ದವರಲ್ಲಿ ಶ್ರೀಯುತರು ಪ್ರಮುಖರು. ಅಗಡಿಯ ಹಿರಿಯರೆಲ್ಲಾ ಸೇರಿ ಭೀಕ್ಷೆ ಬೇಡುತ್ತಿದ್ದ ಅಲೆಮಾರಿ ಜನಾಂಗದವರನ್ನು ನೆಲೆ ನಿಲ್ಲುವಂತೆ ಪ್ರೇರಣೆ ನೀಡಿ ಅವರಿಗೆ ಸ್ಥಳಾವಕಾಶವನ್ನು ಕಲ್ಪಿಸಿದರು. ಮುಂದೆ ಆ ಸಣ್ಣ ಗ್ರಾಮ ಗಾಂಧೀವಾದಿಗಳಿಂದ ಹುಟ್ಟಿದ್ದರಿಂದ ಅದನ್ನು "ಗಾಂಧೀಪುರ" ಎಂದು ಕರೆಯಲಾಯಿತು. ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ, ಹಿಂದುಳಿದ ವಗ೯ಗಳಿಗಾಗಿ " ಹಾವನೂರ ವರದಿಯನ್ನು ರಚಿಸಿ ಅಗಡಿಯ ಕಿತಿ೯ಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎತ್ತಿಹಿಡಿದ ದಿ.ಎಲ್.ಜಿ ಹಾವನೂರವರ ಜನ್ಮಭೂಮಿ ಇದೇ ಪುಣ್ಯಭೂಮಿ ಎನ್ನುವುದು ವಿಶೇಷ. ಮಾಜಿ ಸಚಿವರಾದ ಶ್ರೀ ಬಸವರಾಜ ಶಿವಣ್ಣನವರ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ. ಕೋಟ್ರೆಶಪ್ಪ ಬಸಗಣ್ಣಿಯವರು ಇದೇ ಗ್ರಾಮದವರು. ಬನಶಂಕರಿ ದೇವಸ್ಥಾನ , ವೀರಭದ್ರ ದೇವಸ್ಥಾನ,ಪವ೯ತೇಶ್ವರ ದೇವಸ್ಥಾನ, ವೆಂಕಟೇಶ್ವರ ದೇವಸ್ಥಾನ,ಹಕ್ಕಲು ದುಗ೯ವ್ವ ದೇವಸ್ಥಾನ, ಹನುಮಂತ ದೇವಸ್ಥಾನ ಹಾಗೂ ಬಿರೇಶ್ವರ ದೇವಸ್ಥಾನಗಳಿಂದ ಶಕ್ತಿ ಕೇಂದ್ರವಾಗಿದೆ ಈ ಗ್ರಾಮ. ಇಂತಹ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಪುಣ್ಯಭೂಮಿಗೆ ನನ್ನ ಕೋಟಿ ಕೋಟಿ ನಮನ. ~~ ಪ್ರಮೋದ ನಲವಾಗಲ ~~ 9686168202
ಸರ್ ನಿಮ್ಮ ಬರವಣಿಗೆ ಹಾಗೂ ಆ ಸ್ಥಳದ ಬಗ್ಗೆ ತಿಳಿಸಿಕೊಟ್ಟಿದು ಶೈಲಿ ತುಂಬಾ ಚೆನಾಗಿದೆ ಮತ್ತೆ ಹಾವೇರಿ ಬಗ್ಗೆ ಅಷ್ಟೇ ಅಲ್ಲದೆ ಇತರೆ ನಮ್ಮ ಕರ್ನಾಟಕದ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿ ನಮ್ಮ ನಾಡು ನುಡಿ ಬಗ್ಗೆ ತಿಳಿಸುವ ಪ್ರಯತ್ನ ನಿಮ್ಮದಾಗಲಿ ಅಂತಾ ನಿಮ್ಮಲಿ ವಿನಂತಿಸಿಕೊಳ್ಳುತಿದ್ದೇನೆ..... 🙏ಸರ್ ನಿಮ್ಮ ಬರವಣಿಗೆ ಹಾಗೂ ಆ ಸ್ಥಳದ ಬಗ್ಗೆ ತಿಳಿಸಿಕೊಟ್ಟಿದು ಶೈಲಿ ತುಂಬಾ ಚೆನಾಗಿದೆ ಮತ್ತೆ ಹಾವೇರಿ ಬಗ್ಗೆ ಅಷ್ಟೇ ಅಲ್ಲದೆ ಇತರೆ ನಮ್ಮ ಕರ್ನಾಟಕದ ಇತಿಹಾಸದ ಬಗ್ಗೆ ಸಂಶೋಧನೆ ಮಾಡಿ ನಮ್ಮ ನಾಡು ನುಡಿ ಬಗ್ಗೆ ತಿಳಿಸುವ ಪ್ರಯತ್ನ ನಿಮ್ಮದಾಗಲಿ ಅಂತಾ ನಿಮ್ಮಲಿ ವಿನಂತಿಸಿಕೊಳ್ಳುತಿದ್ದೇನೆ..... 🙏
ReplyDeleteಸರ್ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ದಯವಿಟ್ಟು ತಿಳಿಸಿ ಕೊಡಲು ತಮ್ಮಲ್ಲಿ ಕಳಕಳಿಯ ಮನವಿ.
ReplyDelete