ಹಾಲಸಿದ್ದೇಶ್ವರನಿಂದ ಪ್ರಸಿದ್ಧಿ ಪಡೆದ; ಹಲಗೇರಿ.....lll
ರಾಣೇಬೆನ್ನೂರಿನಿಂದ 7 ಕಿ.ಮೀ ದೂರದಲ್ಲಿರುವ ಹಾಗೂ ಕೊಡ,ಸಮಸಗಿ ಮತ್ತು ಇಟಗಿಯ ಮಧ್ಯದಲ್ಲಿಯ ಗ್ರಾಮವೆಂದರೆ ಹಲಗೇರಿ. ಸುಮಾರು 900 ವಷ೯ಗಳಷ್ಟು ಹಳೆಯದಾದ ಗ್ರಾಮವಿದು ಎನ್ನಲು ನಮಗೆ ಅನೇಕ ಪುರಾವೆಗಳು ಇಲ್ಲಿ ದೊರೆಯುತ್ತವೆ. ಅಂದು ಹಲಗೇರಿಯು ರಟ್ಟಿಹಳ್ಳಿ ಆಡಳಿತ ಕೇಂದ್ರಕ್ಕೆ ಒಳಪಡುತ್ತಿತ್ತು. ಊರಿನಲ್ಲಿಯ ಹೊಂಡದ ಮೇಲಿರುವ ಕ್ರಿ.ಶ 1404 ರ ಶಾಸನದಲ್ಲಿ ಈ ಗ್ರಾಮದ ಹೆಸರನ್ನು " ಹಲಿಗೆರೆ" ಎಂದು ಖಂಡರಿಸಲಾಗಿದೆ. ಕೆಲವು ಬ್ರಿಟಿಷರ ದಾಖಲೆಗಳಲ್ಲಿ "ಹಲಗೆರೆ" ಎಂದು ಸಹ ದಾಖಲಾಗಿದೆ. ಬಹುಶಃ ಪುರಾತನವಾದ "ಹಾಲಸಿದ್ದೇಶ್ವರನ" ದೇವಾಲಯದಿಂದಾಗಿ ಈ ಊರಿಗೆ ಹಲಗೇರಿ ಎಂದು ಬಂದಿರಬಹುದಾಗಿದೆ. ಇದರ ಸಮೀಪದಲ್ಲಿಯೇ ಇಟಗಿ ಗ್ರಾಮಕ್ಕೆ ಹೋಗುವ ಬಲ ಭಾಗದಲ್ಲಿ ಬೇಚರಾಕ(ಹಾಳಾದ) "ಸುಂಕಾಪುರ" ಗ್ರಾಮವೊಂದಿದ್ದು ಅದು ಸಂಪೂಣ೯ವಾಗಿ ಹಾಳಾಗಿದೆ. ಕಾರಣ ಅಂದಿನ ಸಮಯದಲ್ಲಿ ಈ ಊರಿಗೆ ಫ್ಲೇಗ್ ಬಂದಿದ್ದರಿಂದ ಜನರು ಊರನ್ನು ತೊರೆದು ಪಕ್ಕದ ಇಟಗಿ, ಅಂತರವಳ್ಳಿ ಹಾಗೂ ಮಾಗೋಡ ಗ್ರಾಮದಲ್ಲಿ ನೆಲೆಯನ್ನು ಕಂಡುಕೊಂಡರು. ಹೀಗಾಗಿ ಅವರುಗಳನ್ನು "ಸುಂಕಾಪುರ" ದವರು ಎಂದು ಕರೆಯುತ್ತಿದ್ದರು.ಮಸೀದಿಯ ಪಕ್ಕದಲ್ಲಿಯ ಹೊಂಡದ ದಿಬ್ಬದ ಮೇಲಿರುವ ಕ್ರಿ.ಶ 1404 ರ ಶಾಸನದಲ್ಲಿ "ಕಾಂಕತಿಯ ನರಸೆನಾಯ್ಕರು ಹರಿಹರದ ಲಕ್ಕನಾಥಿದೇವಿಯ ಅಮ್ರುತಪಡಿಗೆ "ಹಲಿಗೆರೆ"ಯ ಕೆಲ ಭಾಗಗಳನ್ನು ಧಮ೯ವಾಗಲೆಂದು ನೀಡಲಾಯಿತು ಎಂದು ತಿಳಿಸಲಾಗಿದೆ.
ಇದರಲ್ಲಿಯ " ಹುಲಿಗಿಲಿ ಹಳದ" ಎಂಬುದು ಬಹುಶಃ ಈಗಿನ "ಹಳ್ಳದಕೇರೆ"(ಹರಿಯಾಳದ ಒಣೆ)ಯಾಗಿರಬಹುದು. ಹಲಗೇರಿಯ ಊರ ಮಧ್ಯದಲ್ಲಿಯ ಪುರಾತನವಾದ ಹಾಲಸಿದ್ಧೇಶ್ವರ ದೇವಸ್ಥಾನವು ಸು 11-12 ಶತಮಾನದಲ್ಲಿ (ಕಲ್ಯಾಣ ಚಾಳುಕ್ಯರ ಕಾಲದಲ್ಲಿ) ನಿಮಾ೯ಣವಾಯಿತು. ಇದರಲ್ಲಿಯ ಲಿಂಗವು ಸಹ ಅವರ ಕಾಲಮಾನಕ್ಕೆ ಸೇರಿದ್ದಾಗಿದೆ. ಇಲ್ಲಿ ಪುರಾತನವಾದ ಗವಿಯೊಂದಿತ್ತು ಆದರೆ ಅದನ್ನು ಈಗ ಮುಚ್ಚಲಾಗಿದೆ.ಇದರ ಪಕ್ಕದಲ್ಲಿರುವ ಚಿಕ್ಕ ದೇವಾಲಯವನ್ನು "ಉಜಿನೆಪ್ಪ ಅಥವಾ ಜೆಟ್ಟೆಪ್ಪನ ದೇವಸ್ಥಾನವೆಂದು ಕರೆಯುತ್ತಾರೆ. ಹಾಲಸಿದ್ದೇಶ್ವರ ಜಾತ್ರೆಯು ಪ್ರತಿವಷ೯ ಮಾಚ೯ ತಿಂಗಳದಂದು (ಬನದ ಹುಣ್ಣಿಮೆ) ನಡೆಯುತ್ತದೆ. ಪೇಟೆಯ ಮಧ್ಯದಲ್ಲಿಯ ಶ್ರೀ ಆಂಜನೇಯ ದೇವಾಸ್ಥಾನವು ಪುರಾತನ ದೇವಸ್ಥಾನವಾಗಿದ್ದು, ಅದರ ಆವರಣದಲ್ಲಿ ಗಜಲಕ್ಷ್ಮೀ ಹಾಗೂ ಶಿವ-ಪಾವ೯ತಿ ವಿಗ್ರಹಗಳನ್ನು ನೋಡಬಹುದು. ಇದರ ಮುಂಭಾಗದಲ್ಲಿ "ಪ್ರಾ" "ಣ" ಎಂದು ಎರಡಕ್ಷರಗಳಿಂದ ಬರೆದ 18 ಸಾಲುಗಳನ್ನುಳ್ಳ ಯಂತ್ರಗಲ್ಲನ್ನು ನೋಡಬಹುದು. ಈ ಹಿಂದೆ ಜನರು ತಮ್ಮ ಆರೋಗ್ಯದಲ್ಲಿ ಏರುಪೇರಾದಾಗ ಇದನ್ನು ಸುತ್ತುವರೆಯುವುದರಿಂದ ತಾವುಗಳು ಅನಾರೋಗ್ಯದಿಂದ ಗುಣಮುಖರಾಗಬಹುದು ಎಂದು ನಂಬಿದ್ದರು.
ಸಂತರಾದ ಹಜರತ್ ಜಮಾಲಷಾವಲಿಯವರು ಕ್ರಿ.ಶ 1785 ರಂದು ಅಜಮಿರದಿಂದ ಇಲ್ಲಿಗೆ ಆಗಮಿಸಿದ್ದರು, ಮೊಳಕೈವರೆಗೆ ಬಳೆ ಧರಿಸುತ್ತಿದ್ದ ಇವರು ಇಲಿ, ಬೆಕ್ಕು, ನಾಯಿ, ಚಿಗರಿ ಹಾಗೂ ಹಾವುಗಳನ್ನು ಒಂದೆ ಹಗ್ಗದಲ್ಲಿ ಕಟ್ಟಿಕೊಂಡು ದೊಡ್ಡಕೆರೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಇಲ್ಲಿಯ "ನಾಯಕ"(ಚಿಕ್ಕೇರೂರ) ವಂಷಸ್ಥರಿಗೆ ಗಂಡು ಸಂತತಿಯಾಗಲಿ ಎಂದು ಆಶೀರ್ವಾದವನಿತ್ತು ಅಧ೯ ರೊಟ್ಟಿಯನ್ನು ಸಂತರು ಆ ದಂಪತಿಗಳಿಗೆ ಪ್ರಸಾದ ರೂಪದಲ್ಲಿ ನೀಡಿದ್ದರು ಎಂಬುದನ್ನು ಆ ವಂಶಸ್ಥರು ಇಂದಿಗೂ ಸಹ ನೆನೆಯುತ್ತಾರೆ. ಮುಂದೆ ಸಂತರು ರಾಣೇಬೆನ್ನೂರಿಗೆ ಆಗಾಗ ಹೋಗುತ್ತಿದ್ದರು ಇಂತಹ ಗುರುಗಳನ್ನು ಬೇಟಿ ಮಾಡಲು ಟಿಪ್ಪೂಸುಲ್ತಾನ ಶ್ರೀರಂಗಪಟ್ಟಣದಿಂದ ಬರುತ್ತಿದ್ದನು ಎಂಬ ವಿಷಯವು ಗಮನಾರ್ಹವಾಗಿದೆ.
ಹಲಗೇರಿಯಲ್ಲಿ ಇವರ "ಬೈಸಾಕಿಯು" (ಕುಳಿತ ಪವಿತ್ರ ಸ್ಥಳ) ಈಗ ಪೇಟೆಯಲ್ಲಿ ದಗಾ೯ ರೂಪವನ್ನು ಪಡೆದಿದೆ. "ಗುಳಗಿ" ಸಂತರ ದಗಾ೯ವನ್ನು ಸಹ ಊರಿನಲ್ಲಿ ನೋಡಬಹುದು. ಕಂಬಾಳಿಮಠ ಹಾಗೂ ಆರಾಧ್ಯಮಠ(ವಿರಕ್ತ ಮಠ)ಗಳನ್ನು ರಾಜ್ಯ ಹೆದ್ದಾರಿಯಲ್ಲಿ ನೋಡಬಹುದು. ಹಲಗೇರಿಯ "ಆರಾಧ್ಯಮಠದ" ಶ್ರೀ ಗುರುಪಾದಪ್ಪ ಮತ್ತು ಶ್ರೀಮತಿ ಹಾಲಮ್ಮನವರ ಪುತ್ರರಾಗಿ ಕ್ರಿ.ಶ 1914ರಲ್ಲಿ ಶ್ರೀ ಬಸವ ಸ್ವಾಮಿಗಳು ಜನಿಸಿದರು. ಧಾರವಾಡದಲ್ಲಿ ವಿಧ್ಯಾಭ್ಯಾಸ ಮುಗಿಸಿ ತಮ್ಮ 18 ನೇ ವಯಸ್ಸಿನಲ್ಲಿ ಪಟ್ಟಾಧಿಕಾರವನ್ನು ವಹಿಸಿಕೊಂಡರು.ಇಲ್ಲಿ ನಾಲ್ಕು ಗದ್ದುಗೆಗಳು ಅಂದು ಸ್ಥಾಪನೆಗೊಂಡವು. ದೊಡ್ಡಪೇಟೆಯ ಪುಟ್ಟಯ್ಯನ ಮಠದ ಶಾಖಾಮಠವಾದ ಹಲಗೇರಿಯ ವಿರಕ್ತಮಠವು (ಆರಾಧ್ಯ ಮಠವು) ಈಗ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಸಂಕವ್ವನ(ಬನಶಂಕರಿ) ದೇವಸ್ಥಾನ, ದ್ಯಾಮವ್ವ, ದುಗ೯ವ್ವ, ಬಸವಣ್ಣ ಹಾಗೂ ಗಣೇಶ ದೇವಸ್ಥಾನಗಳು ಈ ಗ್ರಾಮದ ಇತರೆ ದೇವಸ್ಥಾನಗಳೆನ್ನಬಹುದು.
ಊರಿನ ಸಂತೆಯು ಪ್ರತಿ ಗುರುವಾರದಂದು ನಡೆಯುತ್ತದೆ. ಕೃಷಿ ಮಾರುಕಟ್ಟೆಯಲ್ಲಿ ನಡೆಯುವ "ಬೆಳ್ಳೂಳ್ಳೆ ಸಂತೆ" ರಾಜ್ಯದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಸುಮಾರು 250 ವಷ೯ಗಳ ಹಿಂದೆ ಹಲಗೇರಿಯ ಕೆಲವು "ನಾಯಕ" ಎಂಬ ಕುಟುಂಬದವರು ರಾಣೇಬೆನ್ನೂರಿನ ಕೋಟೆ ಭಾಗದಲ್ಲಿ ಬಂದು ನೆಲಸಿದರು. ಇವರನ್ನು ಹಲಗೇರಿ ಅಥವಾ ನಾಯಕ ಎಂದು ಜನಸಾಮಾನ್ಯರು ಸಂಭೋಧಿಸುತ್ತಿದ್ದರು. ಇವರ ವಂಶಸ್ಥರಾದ ತಮ್ಮಣ್ಣ ನಾಯಕ ಲೋಕ ಕಲ್ಯಾಣಕ್ಕಾಗಿ ಕೆರೆಯೊಂದನ್ನು ಹಲಗೇರಿಯಲ್ಲಿ ಕಟ್ಟಿಸಿದನು. ಅಂತರವಳ್ಳಿ ಮಾಗ೯ದಲ್ಲಿರುವ ಅದನ್ನು ಈಗಲೂ ಸಹ "ತಮ್ಮಣ್ಣ ನಾಯಕನ" ಕೆರೆಯೆಂದು ಕರೆಯುತ್ತಾರೆ. ನಾಡೋಜ ಪಾಟೀಲ ಪುಟ್ಟಪ್ಪನವರ ತಂದೆಯ ಊರು ಇದೇ ಹಲಗೇರಿಯಾಗಿದೆ. ಅವರ ಬಾಲ್ಯದ ನೆನಪುಗಳನ್ನು ನೆನಪಿಸುವ ಕೆಲವು ಫೋಟೊಗಳನ್ನು ಅವರ ಸಹೋದರರಾದ ಶ್ರೀ ಗುರಣ್ಣ ಪಾಟೀಲರ ಮನೆಯಲ್ಲಿ ನೋಡಬಹುದು. ಖ್ಯಾತ ರಂಗನಟರಾದ ದಿ.ಜಟ್ಟೆಪ್ಪ ಮುದ್ಧಪ್ಪಳವರರು ಇದೇ ಗ್ರಾಮದವರು. ಅವರು ಅಂದು' ಹಲಗೇರಿಯಲ್ಲಿ " ಹಾಲಸಿದ್ದೇಶ್ವರ ನಾಟ್ಯ ಸಂಘವನ್ನು ಹುಟ್ಟು ಹಾಕಿದರು. ಹೀಗೆ ಅನೇಕ ಇತಿಹಾಸ ಪುಟಗಳನ್ನು ತನ್ನಲ್ಲಡಗಿಸಿಕೊಂಡಿರುವುದು ನಮ್ಮಯ ಹೆಮ್ಮೆಯ ಹಲಗೇರಿ. ** ಪ್ರಮೋದ ನಲವಾಗಲ ** (9686168202)
Comments
Post a Comment