ಹಾವೇರಿಯಲ್ಲಿ ಸುಭಾಶಚಂದ್ರ ಬೋಸ್‌ರ ನೆನಪುಗಳಿಗೆ 80 ರ ಪ್ರಾಯ

1938 ರ ಹರಿಪುರ ಕಾಂಗ್ರೆಸ್ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷತೆಯ ಚುಣಾವಣೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಭ್ಯಥಿ೯ಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ ಸುಭಾಸ್ ಚಂದ್ರ ಬೋಸ್‌ ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಅಭಿಮಾನಿಗಳಗೆ ಕೃತಜ್ಞತೆ ಸಲ್ಲಿಸಲು ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ಹಾವೇರಿಗೆ  01/07/ 1939 ರಂದು ಆಗಮಿಸಿದ್ದರು. 

(ಬ್ಯಾಡಗಿಯ ಪುರಸಭೆ ಆವರಣದಲ್ಲಿ ಅವರ ನೆನಪಿಗಾಗಿ)
ಇವರ ಸ್ವಾಗತಕ್ಕಾಗಿ ಹಾವೇರಿಯ ತುಂಬಾ ಹಸಿರು ತೋರಣವನ್ನು ಕಟ್ಟಲಾಗಿತ್ತು. ಕೆರೆಯ ಪಕ್ಕದಲ್ಲಿರುವ 'ಶಿವಾನಂದ ಥೀಯಟರ್ '( ಈಗಿನ ಅನ್ನದಾನೇಶ್ವರಿ ಕಲಾ ಮಂದಿರ) ಬರುವಿಕೆಗೆ ಕಾಯುತ್ತಿತ್ತು. ಹೊಸಮನಿ ಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಮೈಲಾರ ಮಹಾದೇವಪ್ಪನವರ ನೇತೃತ್ವದಲ್ಲಿ ಅಭಿನಂದನಾ ಕಾಯ೯ಕ್ರಮ ರೂಪಗೊಂಡಿತ್ತು.  ಅಭಿಮಾನಿಗಳ ಜೈಕಾರದ ಮಧ್ಯದಲ್ಲಿ, ಹೂವಿನ ಮಳೆಯಲ್ಲಿ ಆರು ಫೂಟ್ ಉದ್ದಳತೆಯ,ಛಾಲಿಸ್ ಧರಿಸಿದ ವ್ಯಕ್ತಿಯು ಬರುತ್ತಿದ್ದನ್ನು ಗಮನಿಸಿದ ಕೆಲವರಿಗೆ ದೇಹದಲ್ಲಿ ವಿದ್ಯುತ್ ಸಂಚಾರಿಸಿದಂತಾಯಿತು. ಮೈಲಾರ ಮಹಾದೇವಪ್ಪನವರು ಜನರನ್ನು ನೂಕುತ್ತಾ 'ಸುಭಾಸಚಂದ್ರ ಭೋಸ್' ರನ್ನು ಕಾಯ೯ಕ್ರಮದ ವೇದಿಕೆಯತ್ತ ಕರೆದೊಯ್ದರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಥೀಯಟರ್ ಕಿರಿದಾಯಿತು. ಹೊಸಮನಿ ಸಿದ್ದಪ್ಪನವರು ಸುಭಾಸ್ ಚಂದ್ರ ಭೋಸರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಸುಭಾಸ್ ಚಂದ್ರ ಭೋಸರನ್ನು ಭಾಷಣಕ್ಕೆಂದು ಆಹ್ವಾನಿಸಿದಾಗ, ಜನರ ಜೈಕಾರದಲ್ಲಿಯೇ ತಮ್ಮ ಎರಡು ಕೈಗಳನ್ನು ಮೇಲೆತ್ತಿ '  ನನ್ನ ಮೇಲೆ ಇಟ್ಟ  ಅಪಾರ ಪ್ರೀತಿಗೆ ನಾನೆಂದು ಹಾವೇರಿ ಮುಗ್ದ ಅಭಿಮಾನಿಗಳಿಗೆ ಅಭಾರಿ. ನಿಮ್ಮಯ ಪ್ರೀತಿ- ವಿಶ್ವಾಸದ ಫಲವಾಗಿ ನಾನು ಘಟಾನುಗಟಿ ವಿರೋಧಿಯನ್ನು ಸೊಲಿಸಿದೆ. ನನಗೆ ನಿಮ್ಮನ್ನು ನೋಡಿದಾಗ ಅನಿಸಿತು, ನಾನೂ ಎಕಾಂಗಿಯಲ್ಲ. ನನ್ನೊಂದಿಗೆ ನಿಮ್ಮ ಅಮೂಲ್ಯವಾದ ಪ್ರೀತಿ ಹಾಗೂ ಆಶಿವಾ೯ದವಿದೆ ಎನ್ನುತ್ತಾ...ಒದ್ದೆಯಾದ ಕಣ್ಣುಗಳನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಿಳಿ ವಸ್ತ್ರದಿಂದ ಒತ್ತುತಿದ್ದರು. ಹಿಂದಿ ಭಾಷೆಯನ್ನು ಅಥೈ೯ಸಿಕೊಳ್ಳದ ನಮ್ಮ ಜನ. ಅವರ ಆ ಮುಗ್ದ ಮನಸ್ಸಿನೊಳಗಿನ ಮಾತಿಗೆ,ಅಭಿಮಾನಿಗಳ ಕಣ್ಣಿರಿನ ಕಟ್ಟೆ ಒಡೆದು ಹೋಗಿತ್ತು. ಥೀಯಟರ್ ಸಂಪೂಣ೯ವಾಗಿ ನಿಶಬ್ದವಾಗಿತ್ತು. 

ಅಲ್ಲಿ ಭೋಸರ ಮಾತುಗಳು ಮಾತ್ರ ಶಬ್ದವನ್ನು ಹುಟ್ಟುಹಾಕುತ್ತಿದ್ದವು. ಆ ಶಬ್ದ..... ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುತ್ತಿದ್ದವು, ರಾಷ್ಟ್ರನಿಮಾ೯ಣದ ಕನಸ್ಸುಗಳನ್ನು ಕಟ್ಟುತ್ತಿದ್ದವು...... ತಕ್ಷಣವೆ ಎಚ್ಚೆತ್ತುಗೊಂಡು ಮುಂದೆ ಧಾರವಾಡಕ್ಕೆ ಹೋಗಬೇಕು ಎಂದು...... ತಮ್ಮ ಮಾತಿಗೆ ಪೂಣ೯ವಿರಾಮವಿಟ್ಟರು. ಥೀಯಟರ್ ಮುಂದೆ ಬಂದು ಹೋಗಲು ಅಣಿಯಾಗುತ್ತಿರುವಾಗ, ನಿಮ್ಮ ನೆನಪು ನಮಗೆ ಸದಾ ಹಸಿರಾಗಿರಲಿ,ನಾವು ಸದಾ ಸತ್ಯದೊಂದಿಗಿದ್ದೇವೆ ಹಾಗೂ ಮುಂದೆಯು.......ಎಂದು ಹೊಸಮನಿ ಸಿದ್ದಪ್ಪನವರು ನುಡಿದರು. ಚಂಬಣ್ಣ ಮಾಗಾವಿಯವರು ಫೊಟೊ ತೆಗೆಯಲು ಫೊಟೊಗ್ರಾಫರಗೆ ಸೂಚಿಸಿದರು.

 ಕಾಯ೯ಕ್ರಮದ ಮುಕ್ತಾಯದ ನಂತರ, ಹೊಸಮನಿ ಸಿದ್ದಪ್ಪನವರು ಹಾಗೂ ಚಂಬಣ್ಣ ಮಾಗಾವಿಯವರು ( ಅವರದೆ Duke car) ಬೋಸರನ್ನು ತಮ್ಮ ಕಾರಿನಲ್ಲಿ ಕುಳ್ಳರಿಸಿಕೊಂಡು ಧಾರವಾಡಕ್ಕೆ ಬಿಟ್ಟು ಬರಲು ಗಾಡಿಯನ್ನು ಚಾಲು ಮಾಡಲು... ಸುಭಾಸ ಚಂದ್ರ ಬೋಸ್ ತಮ್ಮ ಭಾರವಾದ ಮನಸ್ಸಿನಿಂದ  ಕೆ. ಎಫ್ ಪಾಟೀಲ, ಶಿವಪ್ಪ ಅಂಕಲಕೋಟಿ, ಚಾವಟಿ ವೆಂಕಣ್ಣ, ತಮ್ಮಣ್ಣ ಕರಕುದರಿ, ಕೃಷ್ಣಾಜೀ ಕುಂಠೆ, ನೀಲನಗೌಡ ಪಾಟೀಲ(ಅಕ್ಕೂರ), ಶಾಂತಾರಾಮ ಅವಘಾನ, ಕೃಷ್ಣಪ್ಪ ಅಕ೯ಸಾಲಿ, ಪಂಚಾಕ್ಷರಪ್ಪ ವಳಸಂಗದ ಹಾಗೂ ಅನೇಕ ಅಭಿಮಾನಿಗಳತ್ತ ಕೈಬೀಸುತ್ತಿದ್ದರು... ಕಾರು ಚಿಕ್ಕದಾಗುತ್ತಾ ಸಾಗಿತು. ಕಾಲ ಉರಳಿದಂತೆ ಶಿವಾನಂದ ಥಿಯೇಟರ್ ಮಾಯವಾಗಿ 'ಅನ್ನದಾನೇಶ್ವರಿ ಕಲಾ ಮಂದಿರ' ಎಂಬ ಹೆಸರನ್ನು ಪಡೆದುಕೊಂಡಿತು. ಅವರು ಬಂದು ನಿಂತುಕೊಂಡ ಸ್ಥಳ ಮುಂದೆ "ಸುಭಾಸ್ ಸಕ೯ಲ್" ಆಯಿತು, ಅವರನ್ನು ಭೆಟ್ಟಿ ಮಾಡಿದ ಅನೇಕರು ವಯಸ್ಸಿನಿಂದಾಗಿ ಮಡಿದರು. ಆದರೆ ಅವರು ಅವಸರದಲ್ಲಿ ತೆಗೆಸಿಕೊಂಡಿದ್ದ ಆ ಫೊಟೊ ಈ ಇತಿಹಾಸದ ಘಟನೆಯನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿರುವುದು ಮಾತ್ರ ಸತ್ಯ.....ಸತ್ಯ......ಸತ್ಯಕ್ಕೆ  ಸಾವಿಲ್ಲ. ಫೊಟೊ ಕೊಟ್ಟು ಸಹಕರಿಸದ ಮಿತ್ರ ನೇಸರ ಮಾಗವಿಯವರಿಗೆ ಅನಂತ ಧನ್ಯವಾದಗಳು.( ಪ್ರಮೋದ ನಲವಾಗಲ)

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!