Posts

Showing posts from January, 2019

ಮೋಟೆಬೆನ್ನೂರ ಪ್ರವಾಸಿ ತಾಣವಾಗಬಹುದೆ????.....

Image
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮವನ್ನು ಶಾಸನಗಳಲ್ಲಿ" ಬೆಣ್ಣೆವುರು" (ಬೆಣ್ಣೆವುರು-12 ಕಂಪಣದ ಆಡಳಿತ ಕೇಂದ್ರವಾಗಿತ್ತು) ಎಂದು ಕರೆಯಲಾಗಿದೆ. 'ಕ್ಯಾಪ್ಟನ್ ಮೂರ್"  ಈ ಗ್ರಾಮವನ್ನು ಶ್ರೀಗಂಧ ಎಣ್ಣೆಯ ಪ್ರಮುಖ ವ್ಯಾಪಾರಿ ಕೇಂದ್ರವೆಂದು ಕರೆದಿದ್ದಾನೆ.  ಕ್ರಿ.ಶ 1881 ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ಕೇವಲ 2621. ಕ್ರಿ.ಶ 1934 ರಂದು ಈ ಗ್ರಾಮಕ್ಕೆ ಮಹಾತ್ಮ ಗಾಂಧಿಯವರು ಭೆಟ್ಟಿ ಕೊಟ್ಟ ನೆನಪನ್ನು ಕೆದಕುವ ಕೋಟೆ ಮೈದಾನವನ್ನು ಸಹ ಇಲ್ಲಿ ನೋಡಬಹುದು.  ಸ್ವಾತಂತ್ರ ಸೇನಾನಿ ಮೈಲಾರ ಮಹಾದೇವಪ್ಪ ಹಾಗೂ ಸಾಹಿತಿಗಳಾಗಿದ್ದ "ಮಹದೇವ ಬಣಕಾರರ" ಜನ್ಮಭೂಮಿ ಇದಾಗಿದೆ. ಕಲ್ಯಾಣ ಚಾಲುಕ್ಯರ ಕಾಲದ ಭುಜಂಗೇಶ್ವರ ದೇವಾಲಯ,  ಮಲ್ಲಿಕಾಜು೯ನ ದೇವಾಲಯ ಹಾಗೂ ಸಮೀಪದಲ್ಲಿ ರಾಷ್ಟ್ರಕೂಟರ ಕಾಲದ ಇಟ್ಟಗಿಗಳನ್ನು ಸಹ ನೋಡಬಹುದು. ಇಲ್ಲಿ ಜೈನ ಬಸದಿಯನ್ನು ಕ್ರಿ.ಶ 1067 ರಲ್ಲಿ ಆಯ್ಯಿಮಯ್ಯ ನಾಯಕನು ಕಟ್ಟಿಸಿದ್ದನು. ಆದರೆ ಈಗ ಬಸದಿ ಹಾಳಾಗಿದ್ದು  ನಾವು ಮುಕ್ಕಾದ ತಿಥಾ೯ಂಕರ ವಿಗ್ರಹಗಳನ್ನು ಮಾತ್ರ ಊರಲ್ಲಿ ನೋಡಬಹುದಾಗಿದೆ.  ಊರಲ್ಲಿ ಹನುಮಂತ, ದುಗ೯ವ್ವ, ದ್ಯಾಮವ್ವ, ಹೊನ್ನತ್ತೆವ್ವ, ಮೈಲಾರಲಿಂಗಪ್ಪ, ಕತ್ತಲ ಮಲ್ಲಪ್ಪ ದೇವಾಲಯಗಳು ಹಾಗೂ ಏರಡು ಮಠಗಳಿವೆ. ಇಲ್ಲಿಯ ಕ್ಯಾಥೋಲಿಕ್ ಚಚ೯ನ್ನು ಹಾಗೂ ಹಿಂದೆ ಇವರು ಸಲ್ಲಿಸಿರುವ ಸಾಮಾಜಿಕ ಕಾಯ೯ಗಳನ್ನು ನಾವು ಸ...

ಹಾವೇರಿಯಲ್ಲಿ ಸುಭಾಶಚಂದ್ರ ಬೋಸ್‌ರ ನೆನಪುಗಳಿಗೆ 80 ರ ಪ್ರಾಯ

Image
1938 ರ ಹರಿಪುರ ಕಾಂಗ್ರೆಸ್ ಅಧಿವೇಶನ ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷತೆಯ ಚುಣಾವಣೆಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಭ್ಯಥಿ೯ಯಾದ ಪಟ್ಟಾ ಸೀತಾರಾಮಯ್ಯನವರನ್ನು ಸೋಲಿಸಿ ಸುಭಾಸ್ ಚಂದ್ರ ಬೋಸ್‌ ಅಧ್ಯಕ್ಷರಾದರು. ತಮ್ಮ ಗೆಲುವಿಗೆ ಸಹಕರಿಸಿದ ಹಾವೇರಿಯ ಅಭಿಮಾನಿಗಳಗೆ ಕೃತಜ್ಞತೆ ಸಲ್ಲಿಸಲು ಈಗಿನ ಹಾವೇರಿ ಜಿಲ್ಲೆಯ ಬ್ಯಾಡಗಿ ಹಾವೇರಿಗೆ  01/07/ 1939 ರಂದು ಆಗಮಿಸಿದ್ದರು.  ( ಬ್ಯಾಡಗಿಯ ಪುರಸಭೆ ಆವರಣದಲ್ಲಿ ಅವರ ನೆನಪಿಗಾಗಿ) ಇವರ ಸ್ವಾಗತಕ್ಕಾಗಿ ಹಾವೇರಿಯ ತುಂಬಾ ಹಸಿರು ತೋರಣವನ್ನು ಕಟ್ಟಲಾಗಿತ್ತು. ಕೆರೆಯ ಪಕ್ಕದಲ್ಲಿರುವ 'ಶಿವಾನಂದ ಥೀಯಟರ್ '( ಈಗಿನ ಅನ್ನದಾನೇಶ್ವರಿ ಕಲಾ ಮಂದಿರ) ಬರುವಿಕೆಗೆ ಕಾಯುತ್ತಿತ್ತು. ಹೊಸಮನಿ ಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಮೈಲಾರ ಮಹಾದೇವಪ್ಪನವರ ನೇತೃತ್ವದಲ್ಲಿ ಅಭಿನಂದನಾ ಕಾಯ೯ಕ್ರಮ ರೂಪಗೊಂಡಿತ್ತು.  ಅಭಿಮಾನಿಗಳ ಜೈಕಾರದ ಮಧ್ಯದಲ್ಲಿ, ಹೂವಿನ ಮಳೆಯಲ್ಲಿ ಆರು ಫೂಟ್ ಉದ್ದಳತೆಯ,ಛಾಲಿಸ್ ಧರಿಸಿದ ವ್ಯಕ್ತಿಯು ಬರುತ್ತಿದ್ದನ್ನು ಗಮನಿಸಿದ ಕೆಲವರಿಗೆ ದೇಹದಲ್ಲಿ ವಿದ್ಯುತ್ ಸಂಚಾರಿಸಿದಂತಾಯಿತು. ಮೈಲಾರ ಮಹಾದೇವಪ್ಪನವರು ಜನರನ್ನು ನೂಕುತ್ತಾ 'ಸುಭಾಸಚಂದ್ರ ಭೋಸ್' ರನ್ನು ಕಾಯ೯ಕ್ರಮದ ವೇದಿಕೆಯತ್ತ ಕರೆದೊಯ್ದರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಥೀಯಟರ್ ಕಿರಿದಾಯಿತು. ಹೊಸಮನಿ ಸಿದ್ದಪ್ಪನವರು ಸುಭಾಸ್ ಚಂದ್ರ ಭೋಸರ ಯೋಗಕ್ಷೇಮವನ್ನು ವಿಚಾರಿಸ...

ಸವ೯ರಿಗೂ ಕಲ್ಪವೃಕ್ಷ ಕದಿರಮಂಡಲಗಿ ಕಾಂತೇಶ

Image
ಕದಿರಮಂಡಲಗಿ ಎಂಬ ಚಿಕ್ಕ ಗ್ರಾಮ ಇತಿಹಾಸಪೂರ್ವಕಾಲದ ನೆಲೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನಲು ಇಲ್ಲಿಯ ಜನರು "ಅಸ್ತಿ ಸಂಗ್ರಹ ಪದ್ದತಿಯನ್ನು" (ದೇಹ ದಹನ ಮಾಡಿದ ಮೇಲೆ ಬರುವ ಅಸ್ತಿ ಸಂಗ್ರಹ)ಇನ್ನೂ ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಶಾಸನಗಳಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲುಕಿನ ಕದಿರಮಂಡಲಗಿಯನ್ನು ಕದಿರವುಂಡಲಗಿ, ಕದಿಮಿ೯ಡಿ ಎಂದು ಉಲ್ಲೇಖಿಸಲಾಗಿದೆ.  ಈ ಹಿಂದೆ ಚಂದ್ರಗುತ್ತಿಯ ಒಳಗಣ ರಟ್ಟಿಹಳ್ಳಿ ವೆಂಠೆಗೆ ಸೇರುತ್ತಿದ್ದ ಈ ಚಿಕ್ಕ ಗ್ರಾಮ ತನ್ನದೇ ಆದಂತಹ ಇತಿಹಾಸವನ್ನು ಹೊಂದಿದೆ.  ಗತಕಾಲದ ಇತಿಹಾಸವನ್ನು ಹೇಳುವ ಜೈನ ವಿಗ್ರಹಗಳು ಗ್ರಾಮದಲ್ಲಿ ಕೆಲವು ಕಡೆ ಬಿದ್ದಿರುವುದನ್ನು ಹಾಗೂ ಈ ಹಿಂದೆ ಉತ್ಖನನ ಸಮಯದಲ್ಲಿ ಇಂತಹ ವಿಗ್ರಹಗಳು ಸಿಕ್ಕಿರುವುದನ್ನು ಗಮನಿಸಿದಾಗ ಬಹುಶಃ ಈ ಹಿಂದೆ ಇದು ಜೈನ ಕೇಂದ್ರ ವಾಗಿರಬಹುದು. ಅನೇಕ ಕಂತಿಗಳು (ಜೈನ ಭಿಕ್ಷ ಕಿಯರು) ಇಲ್ಲಿ ವಾಸವಾಗಿರಬಹುದು ಎಂಬ  ಮಾತಿಗೆ ಕಂತಿ ಸ್ವಾಮಿಮಠ ಹಾಗೂ ಕಾಂತೇಶ ಎಂಬ ನಾಮಗಳು ಪುಷ್ಟಿಯನ್ನು ನೀಡುತ್ತವೆ.  ಕದಿರಮಂಡಲಗಿ ಎಂಬ ಪುಣ್ಯಕ್ಷೇತ್ರವನ್ನು ಹಾಗೂ ಇಲ್ಲಿಯ ಕಾಂತೇಶ ದೇವರನ್ನು ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿಗೊಳಿಸಿದ ಶ್ರೇಯಸ್ಸು ಸಂತ ಕನಕದಾಸರಿಗೆ ಸಲ್ಲುತ್ತದೆ. ಕದರಮಂಡಲಗಿಯಲ್ಲಿರುವ ಪ್ರಾಣ ದೇವರಾದ ಕಾಂತೇಶ ದೇವರನ್ನು ಪ್ರತಿಷ್ಠಾಪಿಸಿದ್ದು "ಜನಮೇಜಯ" ಎಂಬ...

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

Image
ಅಂಬಿಗರ ಚೌಡಯ್ಯನವರ ಗದ್ದುಗೆ- ಚೌಡಯ್ಯದಾನಪುರ ಇಂಗಳೇಶ್ವರ-ಬಾಗೇವಾಡಿಯಲ್ಲಿಯ ಶುದ್ದ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆ ದಂಪತಿಗಳು ಶಿವನ ಪೂರ್ಣ ಭಕ್ತರಿದ್ಧದರಿಂದ  ಶಿವನ ವಾಹನವಾದ ನಂದಿಯು ಇವರ ಗಭ೯ದಲ್ಲಿ ಬಸವನೆಂಬ ಹೆಸರಿನಿಂದ ಅವತರಿಸಿತು. ಪಾಲ್ಕುರಿಕೆ ಸೋಮನಾಥ, ಸಿಂಗಿರಾಜಪುರಾಣ, ಹರಿಹರನ ರಗಳೆಯಲ್ಲಿ ಹಾಗೂ ರಾಚಪ್ಪಯ್ಯನ 'ನಂದಿ ಆಗಮ ಲೀಲೆಯಲ್ಲಿ' ಬಸವಣ್ಣನವರ ಜನನದ ಉದ್ದೇಶವನ್ನು ವಿವಿದ ರೀತಿಯಲ್ಲಿ ಬಿಂಬಿಸಿದ್ದರು ಅದು 'ಲೋಕ ಕಲ್ಯಾಣಕ್ಕೆ' ಮಾತ್ರವೆಂದು ನಾವು ತಿಳಿಯುವುದು ಒಳಿತು. ಬಸವಣ್ಣನವರು ಯಾವುದೇ ಅಂಧಶ್ರದ್ಧೆ, ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು-ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಆಚಾರವೇ ಸ್ವರ್ಗ, ಅನಾಚಾರವೇ ನರಕ’ ಎಂದು ಸಾರಿ, ‘ಹೊನ್ನಶೂಲ’ ಎಂದು ಹೊಗಳಿಕೆಯನ್ನು  ದೂರವಿಟ್ಟು 'ಕೂಡಲ ಸಂಗಮದೇವನಿಗೆ' ಸರ್ವಾರ್ಪಣೆ ಮಾಡಿಕೊಂಡರು. ಶುಭ್ರಜೀವನ, ಸಮತಾಭಾವ, ಕಾಯಕಗಳ ಆದರ್ಶಗಳನ್ನು ಸಾರಿದರು, ಅವನ್ನೇ ಆಚರ...