Posts

Showing posts from August, 2022

ಕೋಳೂರು ಕೊಡಗೂಸು: ಹಾವೇರಿಯ ಕೋಳೂರು??

Image
ಹಾವೇರಿ ತಾಲೂಕಿನ " ಕೋಳೂರು " ಹಾವೇರಿಯಿಂದ ಉತ್ತರಕ್ಕೆ ಸುಮಾರು 16ಕಿ.ಮೀ. ದೂರದಲ್ಲಿದೆ. ಈ ಊರು ವರದಾ ನದಿಯ ದಂಡೆಯ ಮೇಲಿದ್ದು ಕರ್ಜಗಿ ಹಾಗೂ ದೇವಗಿರಿಗಳ ಮಧ್ಯಭಾಗದಲ್ಲಿದೆ. ಕ್ರಿ.ಶ. 9-10 ನೇ ಶತಮಾನದಲ್ಲಿ ಬಾಸವೂರು-140 ಕ್ಕೆ ಸೇರಿದ್ದ ಈ ಊರಲ್ಲಿ ಎರಡು ಶಾಸನಗಳಿವೆ. ಕಲ್ಯಾಣದ ಚಾಳುಕ್ಯ ಅರಸ ಒಂದನೇಯ ಸೋಮೇಶ್ವರನ. ಕ್ರಿ.ಶ. 1045ರ ಶಾಸನ ಕಲಿಯಮರಸನು ಬಾಸವೂರು-140 ಆಳುವಾಗ ರಾಜ ಗುರುದೇವ ನೊಂದಿಗೆ ಜಂಟಿಯಾಗಿ ಕೋಳೂರ ಕಲಿದೇವೇಶ್ವರ  (ಈಗಿನ ಕೊಡಗುಸು)ದೇಗುಲಕ್ಕೆ ನೀಡಿದ ಭೂದಾನದ ಬಗ್ಗೆ ಹೇಳಿದರೆ, ಆರ್ಮಡಿ ವಿಕ್ರಮಾದಿತ್ಯನ ಕಾಲದ ಶಾಸನ ಗ್ರಾಮೇಶ್ವರ (ಈಗಿನ ಡೊಳ್ಳೇಶ್ವರ) ದೇವರಿಗೆ ನೀಡಿದ ಸುಂಕಗಳ ದಾನದ ಬಗ್ಗೆ ತಿಳಿಸುತ್ತದೆ. ಕ್ರಿ.ಶ. 1085ರ ಮತ್ತೊಂದು ಶಾಸನ ಕಲಿಯಮರಸನು ಬಾಸವೂರನ್ನಾಳುವಾಗ (ಈಗಿನ ಚಿಕ್ಕ ಬಾಸೂರು) ಬಿಟ್ಟ ಭೂದಾನದ ಬಗ್ಗೆ ಹೇಳುತ್ತದೆ. ಊರುಳಿವಿಗಾಗಿ ಹೋರಾಡಿ ಮಡಿದ ಬೀರಬೋವನಿಗೆ ತ್ರಿಭುವನಸಿಂಗಿ ಮತ್ತು ಊರಗೌಡ ದಾನಕೊಟ್ಟ ವಿಷಯವನ್ನು ವೀರಗಲ್ಲು ಶಾಸನವೊಂದು ಹೇಳುತ್ತದೆ. ಯಾದವ ಸಿಂಘನ ಕಾಲಕ್ಕೆ ಸೇರಿದ ಶಾಸನ ದೇವಂಗೇರಿಯ (ದೇವಗಿರಿಯ)  1000 ಪರಿವಾರದಿಂದ  " ಕೋಳೂರ ಕ್ಷೇತ್ರಪಾಳನಿಗೆ" (ಬಹುಶ: ಹುಲ್ಲಪ್ಪನ ಗುಡಿ) ಭೂದಾನ ಮಾಡಿದನ್ನು ದಾಖಲಿಸಿದೆ. ಈ ಶಾಸನ ಬಂಕಾಪುರದ ಇಂದ್...

ನನ್ನ ಗ್ರಂಥ ರಚನೆಗೆ ಆಶೀರ್ವದಿಸಿದ, ಪ್ರೇರೇಪಿಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತ ಅನಂತ ವಂದನೆಗಳು....!

Image
                              ಪ್ರೇರಣೆ   ಐತಿಹಾಸಿಕವಾಗಿ, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ,ಧಾಮಿ೯ಕವಾಗಿ, ಹೋರಾಟದ ಭಾಗವಾಗಿ ಕರ್ನಾಟಕ ಇತಿಹಾಸದ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿರುವ ಜಿಲ್ಲೆ ಹಾವೇರಿ. ಇಂತಹ ಮಹತ್ವತೆಯನ್ನು ಪಡೆದಿರುವ ಜಿಲ್ಲೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ,ಕಲೆ, ಹೋರಾಟ ಇತ್ಯಾದಿ ವಿಷಯಗಳನ್ನೊಳಗೊಂಡ ಜಿಲ್ಲೆಯ ಸಂಪೂರ್ಣ ಇತಿಹಾಸ ಹಾಗೂ ಹಾವೇರಿ ಜಿಲ್ಲೆಗೆ ಭೇಟಿ  ನೀಡಿದ ಪ್ರಮುಖ ನಾಯಕರ ಕುರಿತಾದ ಮಾಹಿತಿಯ ಕುರಿತು ಸಂಶೋಧನೆ ಕೈಗೊಂಡು ಜಿಲ್ಲೆಯ ಜನತೆಗೆ ಹಾಗೂ ಜಿಲ್ಲೆಗೆ ಬೇಟಿ ನೀಡುವ ವಿವಿಧ ಭಾಗದ ಜನತೆಗೆ ಹಾವೇರಿ ಜಿಲ್ಲೆಯ ಮಹತ್ವತೆಯನ್ನು ಡಿಜಿಟಲ್ ರೂಪದಲ್ಲಿ ಮಾಹಿತಿ ಪಡೆಯಲು ಕಾಯ೯ನಿವ೯ಹಿಸಿ "ಅಖಿಲ ಭಾರತ ಸಾಹಿತ್ಯ ಸಮ್ಮೇಳನ" ನಡೆಯುವ ಪೂವ೯ದಲ್ಲಿ  ಬಿಡುಗಡೆಗೊಳಿಸುವಂತೆ ಜಿಲ್ಲೆಯ ಇತಿಹಾಸ ಸಂಶೋಧಕರು ಹಾಗೂ ಉಪನ್ಯಾಸಕರಾದ ಶ್ರೀ ಪ್ರಮೋದ ನಲವಾಗಲ ಅವರಿಗೆ ನಾನು ಸೂಚಿಸಿದ್ದೆನು. ಅದರ ಪ್ರಯುಕ್ತ ಸಂಶೋಧಕ ಶ್ರೀ ಪ್ರಮೋದ್ ನಲವಾಗಲ ಹಾಗೂ ಅವರ ಸಂಶೋಧನಾ ತಂಡ ಹಾವೇರಿ ಜಿಲ್ಲೆಯ ಸಾಹಿತ್ಯ,ಕಲೆ, ಇತಿಹಾಸ, ಹೋರಾಟ ಇತ್ಯಾದಿ ವಿಷಯಗಳನ್ನೊಳಗೊಂಡ ಸಮಗ್ರ ಮಾಹಿತಿಯನ್ನು ಕಲೆಹಾಕಿ ಡಿಜಿಟಲ್ ರೂಪದಲ್ಲಿ ಬಿಡುಗಡೆ ಗೊಳಿಸುತ್ತಿರುವುದು ಸಂತೋಷದ ವಿಷಯ. ಈ ಮೂಲಕ ಹಾವೇರಿಯ ಶ್ರೇಷ್ಠತೆಯನ...

ಕನಕಾಪುರ

                    ಕನಕಾಪುರ ಹಾವೇರಿ: ಕನಕಾಪುರದ ಶಕ್ತಿ ಕೇಂದ್ರವಾದ ‘ಕಂದಾರಮ್ಮ’ ದೇವಸ್ಥಾನದಲ್ಲಿ ಸುಮಾರು ಕ್ರಿ.ಪೂ. ಅಂತ್ಯ ಕಾಲಕ್ಕೆ ಸೇರಿರಬಹುದಾದ ‘ದೇವಿಯ ಉಬ್ಬು ಆಕೃತಿಯಿರುವ ಮಣ್ಣಿನ ಮಡಿಕೆ’ಯನ್ನು ಉಪನ್ಯಾಸಕರಾದ ಪ್ರಮೋದ.ನಲವಾಗಲ ಹಾಗೂ ಡಾ.ರಮೇಶ ತೆವರಿ ಪತ್ತೆ ಮಾಡಿದ್ದಾರೆ. ಮಡಿಕೆ(ಕುಂಬ)ಯು ಕಪ್ಪು ಬಣ್ಣದಾಗಿದ್ದು ಬಹುಶ; ಚಕ್ರದ ಮೇಲೆ ಮಾಡಿದಾಗಿದ್ದು, ೧ ಅಡಿ ಎತ್ತರವಾದ ತಳಭಾಗ ಸಮತಟ್ಟಾಗಿದೆ. ಅದರ ಮೇಲೆ ಇತಿಹಾಸ ಪೂರ್ವ ಕಾಲಕ್ಕೆ ಸೇರಿರಬಹುದಾದ ಕೋಣನ ಮೇಲೆ ಅಯುದ ಹಿಡಿದು ನಿಂತಿರುವ ಶಕ್ತಿ ದೇವಿಯ ಆಕೃತಿ ಕಂಡು ಬಂದಿದೆ. ಶಕ್ತಿ ದೇವತೆಯ ಅಕ್ಕಪಕ್ಕದಲ್ಲಿ ಇಬ್ಬರು ಮಾನವರ ಚಿತ್ರಗಳಿವೆ. ಇದರಲ್ಲಿ ದೇವಿಯ ಎಡಭಾಗದಲ್ಲಿ ನಿಂತಿರುವ ಮನುಷ್ಯನ ಶಿರಛ್ಚೇದವಾಗಿದ್ದು, ಈ ದೃಶ್ಯವು ಕುತೂಹಲವನ್ನು ಸೃಷ್ಟಿಸುತ್ತದೆ. ಈ ಕುರಿತು ಸ್ಥಳೀಯ ಮುಖಂಡರನ್ನು ವಿಚಾರಿಸಲಾಗಿ ಮಡಿಕೆಯು ಪುರಾತನವಾದದ್ದು ನಮಗೂ ಇದರ ಕಾಲಘಟ್ಟದ ಕುರಿತು ಮಾಹಿತಿ ಇಲ್ಲ ಎನ್ನುತ್ತಾರೆ. ಆದರೆ ಎಂಟು ವರ್ಷಗಳ ಹಿಂದೆ ‘ಕನಕಾಪುರ ಹಾಗೂ ಹೊಂಬರಡಿ’ ಗ್ರಾಮಗಳ ಮಧ್ಯದದಲ್ಲಿರುವ ಗುಡ್ಡದಲ್ಲಿ ಕೆಲಸ ಮಾಡುವಾಗ ಎಲಬು ಹಾಗೂ ಬೂದಿ ತುಂಬಿದ ಮಡಿಕೆ ಸಿಕ್ಕಿತ್ತು, ಅರಿವಿಗೆ ಬಾರದೆ ಅದನ್ನು ಬಿಸಾಡಿದೆವು ಎಂಬ ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟರು. ಇದನ್ನು ಗ್ರಹಿಸಿದ ಸಂಶೋಧಕರು ಕನಕಾಪುರವು ‘ಇತಿಹಾಸ ಪೂರ್ವ’ ಕಾ...

ಹಾವೇರಿ ಜಿಲ್ಲೆಯ ಕೆಲವು ಶಾಸನಗಳ ದರ್ಶನ

Image
ಶಾಸನಗಳು ನಮ್ಮ ನಾಡಿನ ಜ್ಞಾನದ ಗಣಿ. ಈ ಗಣಿಯನ್ನು ನಾವು ಸಂರಕ್ಷಿಸಬೇಕು, ಸಂಶೋಧಿಸಬೇಕು, ಅಭಿವೃದ್ದಿಗೊಳಿಸಬೇಕು. ಈ ಶಾಸನಗಳು ದೊರೆಯದಿದ್ದರೆ ನಮ್ಮ ಚರಿತ್ರೆ ಕತ್ತಲ ಕೋಣೆಯಾಗಿರುತ್ತಿತ್ತು.  ಭಾರತೀಯ ಲಿಪಿಶಾಸ್ತ್ರದ ಚರಿತ್ರೆಯಲ್ಲಿ ಅಶೋಕನ ಬ್ರಾಹ್ಮೀಲಿಪಿಯಿಂದ ಪ್ರಾರಂಭವಾಗಿ ಇಂದಿನ ಭಾರತೀಯ ಲಿಪಿಗಳವರೆಗೂ ನಾವು ಅನೇಕ ಹಂತಗಳನ್ನು ಕಾಣುತ್ತೇವೆ. ಕನ್ನಡ ಲಿಪಿಯು ಅಶೋಕನ ದಕ್ಷಿಣದ ಬ್ರಾಹ್ಮೀಲಿಪಿಯಿಂದ ಉಗಮವಾಯಿತು. ಅಂದರೆ ಅಶೋಕನ ಬ್ರಾಹ್ಮೀಲಿಪಿಯು ಕಾಲಕ್ರಮದಲ್ಲಿ ಶಾತವಾಹನ, ಕದಂಬ, ಗಂಗ, ರಾಷ್ಟ್ರಕೂಟ. ಚಾಳುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಒಡೆಯರ ರಾಜಮನೆತನಗಳ ಕಾಲದಲ್ಲಿ ಬದಲಾವಣೆಗಳನ್ನು ಹೊಂದಿದವು. ಈ ಲಿಪಿಯ ವಿಕಾಸಕ್ಕೆ ಮೂಲ ಕಾರಣಗಳು ಲೇಖನ ಸಾಮಗ್ರಿಗಳು (ಬರೆಯುವ ಲೇಖನದ ತುದಿ ದುಂಡಾಗಿರಬಹುದು, ತ್ರಿಕೋನಾಕಾರದಲ್ಲಿ ಅಥವಾ ಚೌಕಾಕಾರದಲ್ಲಿರಬಹುದು) ಅಥವಾ ಲೇಖನವನ್ನು ತಾಮ್ರ ಪಟದ ಮೇಲೆ ಬರೆದಾಗ ಅದು ಕಲ್ಲು ಮತ್ತು ಭೋಜ ಪತ್ರ (ಗಿಡದ ತೊಗಟೆ) ಮೇಲೆಯ ಬರವಣಿಗೆಯು ವಿಭಿನ್ನವಾಗಿ ಕಾಣುತ್ತದೆ ಅಥವಾ ಅಕ್ಷರಗಳು ಅಲಂಕೃತಗೊಂಡಿರಬಹುದು. ಇಂತಹ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಸಿಕ್ಕ ಮಾರ್ಗವೇ ಈ ಕನ್ನಡ ಲಿಪಿಯ ಉಗಮಕ್ಕೆ ಕಾರಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಸುಮಾರು ೧೩೦೦ ಶಾಸನಗಳು ದೊರೆತ್ತಿದ್ದು ಅವುಗಳು ಪ್ರಮುಖ ಘಟನೆಗಳನ್ನು, ವ್ಯಕ್ತಿಗಳನ್ನು ಮತ್ತು ಕಾಲಜ್ಞಾನದ ಕುರಿತು ಮಾಹಿತಿಯನ್ನು ನ...

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

Image
ಶಿಗ್ಗಾಂವ (ಅರಟಾಳ) ರಾಣೇಬೆನ್ನೂರು ಹಿರೇಕೆರೂರು (ಹಳ್ಳೂರು) ಬ್ಯಾಡಗಿ (ಹಾವನೂರು ಹನುಮಂತಗೌಡರ ಶಿಲ್ಪ) ಹಾವೇರಿ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳ ಇತಿಹಾಸವು ಅಮುಲ್ಯವಾಗಿದೆ. ಇಂತಹ ಸ್ಥಳಗಳನ್ನು ನಾವು ವೀಕ್ಷಿಸಲು ನಮ್ಮ ಕುಟುಂಬ ಪರಿವಾರ ಸಮೇತ ಹೋಗುತ್ತಿರುವಾಗ, ಅದರ ಇತಿಹಾಸ ನಮಗೆ ಗೊತ್ತಿರುವುದು ಒಳ್ಳೆಯದು, ಏಕೆಂದರೆ ಅವುಗಳ ಇತಿಹಾಸವನ್ನು ತಿಳಿಸುವುದರಿಂದ ಆ ಸ್ಥಳಗಳ ಬಗೆಗಿನ ಆಕರ್ಷಣೆ ಇಮ್ಮಡಿಗೊಳ್ಳುತ್ತದೆ. ವಿಶೇಷವಾಗಿ ಶೈಕ್ಷಣಿಕ ಪ್ರವಾಸದ ವೇಳೆ ಇಂತಹ ಅನುಭವ ಇರುವ ವ್ಯಕ್ತಿ ನಮ್ಮೊಂದಿಗೆ ಮಾರ್ಗದರ್ಶಕರಾಗಿದ್ದರೆ ಬಹಳ ಒಳ್ಳೆಯದು ಎನ್ನುವ ಭಾವನೆ ನನ್ನದು. ಹಾವೇರಿಯನ್ನು ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿ 24/08/1997 ರಂದು ಘೋಷಣೆ ಮಾಡಿದರು. ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಜಿಲ್ಲೆಗೆ ಎಂಟು ತಾಲೂಕುಗಳನ್ನು ಸೇರಿಸಿ ಇದರ ಸೋಬಗನ್ನು ಮತ್ತಷ್ಟು ಹೆಚ್ಚಿಸಿದರು.  ಹಾವೇರಿ ಜಿಲ್ಲೆಯಲ್ಲಿ  07 ( ಇತ್ತೀಚಿಗೆ 01 ಸೇರಿಕೊಂಡು 08) ತಾಲೂಕುಗಳು, 703 ಗ್ರಾಮಗಳು ಮತ್ತು 10 ಪಟ್ಟಣಗಳಿವೆ. ಭಾರತ 2011 ರ ಜನಗಣತಿಯ ಪ್ರಕಾರ, ಹಾವೇರಿ ಜಿಲ್ಲೆಯಲ್ಲಿ 330414 ಕುಟುಂಬಗಳಿವೆ, 1597668 ಜನಸಂಖ್ಯೆಯಲ್ಲಿ 819128 ಪುರ...