Posts

Showing posts from April, 2022

ಹಾವೇರಿ ಜಿಲ್ಲೆಯ ಮಾಂಡಳಿಕ ಅರಸು ಮನೆತನಗಳು- ವೈ. ಮದ್ದಾನಸ್ವಾಮಿ.

Image
ಮೊದಲು ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹಾವೇರಿ ಜಿಲ್ಲೆ ದಿನಾಂಕ 24-08-1997 ರಂದು ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪಗೊಂಡಿತು. ಸದ್ಯ ಹಾವೇರಿ ಜಿಲ್ಲೆಯು ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾಂವಿ, ಹಾನಗಲ್ಲು, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಹಾವೇರಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡ ವಿಶಾಲ ಜಿಲ್ಲೆಯಾಗಿದೆ. ಇದು 4823 ಚದರ ಕಿ. ಮೀ. ವಿಸ್ಥೀರ್ಣವನ್ನು ಹೊಂದಿದ್ದು, ಮಲೆನಾಡು, ಅರೆಮಲೆನಾಡು, ಮತ್ತು ಬಯಲುಸೀಮೆಗಳಿಂದ ಕೂಡಿದೆ.  ಹಾವೇರಿ ಜಿಲ್ಲೆಯು ಧಾರವಾಡ, ಗದಗ, ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ ಮತ್ತು ವಿಜಯನಗರ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಹಾವೇರಿ ಜಿಲ್ಲಾ ಪ್ರದೇಶವು ಕಾಲಕಾಲಕ್ಕೆ ಕರ್ನಾಟಕವನ್ನಾಳಿದ ಅನೇಕ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿತೆಂದು ಅಲ್ಲಿಯ ಶಾಸನಗಳು ಮತ್ತು ಸಾಹಿತ್ಯ ಗ್ರಂಥಗಳು ದೃಢಪಡಿಸುತ್ತವೆ. ಹಾಗೆಯೇ ಈ ಅರಸು ಮನೆತನಗಳ ಅಧೀನದಲ್ಲಿ ಕೆಲವಾರು ಮಾಂಡಳಿಕರು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಆಳ್ವಿಕೆ ಮಾಡಿದ ಕುರುಹುಗಳಾಗಿ ವಿಫುಲ ಆಕರಗಳು ದೊರೆಯುತ್ತವೆ. ಪ್ರಮುಖವಾಗಿ ಹಾವೇರಿ ಜಿಲ್ಲೆಯಲ್ಲಿ ದೊರೆಯುವ ಶಾಸನಗಳನ್ನು ಅವಲೋಕಿಸಿ, ಪೂರಕ ಸಾಹಿತ್ಯ ಕೃತಿಗಳನ್ನು ಬಳಸಿಕೊಂಡು ಪ್ರಸ್ತುತ ಸಂಶೋಧನಾ ಲೇಖನವನ್ನು ಸಿದ್ಧಪಡಿಸಲಾಗಿದೆ. 1. ಬಾಸವೂರಿನ ಸೇನವಾರರು ಇವರು ಎಂಟನೆಯ ಶತಮಾನದಿಂದ ಹನ್ನೊಂದನೆಯ ಶತಮಾನದ ಪೂರ್ವದವರ...

ಧಾರ್ಮಿಕ ಆತ್ಮಬಲಿದಾನ ಸ್ಮಾರಕಶಿಲ್ಪಗಳಲ್ಲಿಯ ಸಂಕೇತಗಳ ವಿಶ್ಲೇಷಣೆ” - ವೈ ಮದ್ದಾನಸ್ವಾಮಿ

Image
“ಧಾರ್ಮಿಕ ಆತ್ಮಬಲಿದಾನ ಸ್ಮಾರಕಶಿಲ್ಪಗಳಲ್ಲಿಯ ಸಂಕೇತಗಳ ವಿಶ್ಲೇಷಣೆ” (ಹಾವೇರಿ ಜಿಲ್ಲೆಯನ್ನು ಅನುಲಕ್ಷಿಸಿ)                             ಮೊದಲು ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹಾವೇರಿ ಜಿಲ್ಲೆಯು, ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ದಿನಾಂಕ 24-08-1997 ರಂದು ಹೊಸ ಜಿಲ್ಲೆಯಾಗಿ ರೂಪಗೊಂಡಿತು. ಸದ್ಯದಲ್ಲಿ ಹಾವೇರಿಯು  ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾಂವಿ, ಹಾನಗಲ್ಲು, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಹಾವೇರಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡ ವಿಶಾಲ ಜಿಲ್ಲೆಯಾಗಿದೆ. ಹಾವೇರಿ ಜಿಲ್ಲೆಯು 4823 ಚದರ ಕಿ. ಮೀ. ವಿಸ್ಥೀರ್ಣವನ್ನು ಹೊಂದಿದ್ದು, ಇದು ಮಲೆನಾಡು, ಅರೆಮಲೆನಾಡು, ಮತ್ತು ಬಯಲುಸೀಮೆಗಳಿಂದ ಕೂಡಿದೆ. ಹಾವೇರಿ ಜಿಲ್ಲೆಯು ಧಾರವಾಡ, ಗದಗ, ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.1        ಈವರೆಗೆ ಬಲಿದಾನ ಸ್ಮಾರಕಶಿಲ್ಪಗಳನ್ನು ಕುರಿತು ನಡೆದ ಪ್ರಮುಖ ಅಧ್ಯನಗಳೆಂದರೆ ಡಾ. ಜೆ. ಎಂ. ನಾಗಯ್ಯನವರ “ಆತ್ಮಬಲಿದಾನ”, ಡಾ. ಎಂ. ಎಂ, ಕಲಬುರ್ಗಿಯವರ “ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು”, ಡಾ.ಎಂ. ಚಿದಾನಂದಮೂರ್ತಿಯವರ “ಕನ್ನಡ ಶಾಸನಗಳ ಸಾಂಸ...

ಹಾವೇರಿ ಜಿಲ್ಲೆಯ ಸ್ಮಾರಕ ಶಿಲ್ಪಗಳು - ವೈ. ಮದ್ದಾನಸ್ವಾಮಿ.

Image
(ನಿಲಸುಗಲ್ಲು - ಹಳ್ಳೂರು) ಈಗಾಗಲೇ ಒಪ್ಪಿತವಾದ ಚರಿತ್ರೆಯು ಸಾಮ್ರಾಟರ, ಮಾಂಡಳಿಕರ, ಸಾಮಂತರ ಇತಿಹಾಸವನ್ನು ಹಾಡಿಹೊಗಳುತ್ತ ಬಂದಿದ್ದು, ಕೇವಲ ಅವರು ಮಾಡಿದ ಕಾಳಗಗಳ ದಾಖಲೆಯಾಗಿದೆ. ಇದರಿಂದಾಗಿ ಉದಾಸೀನಕ್ಕೊಳಗಾದ ತಳ ಸಮುದಾಯಗಳ ಐತಿಹಾಸಿಕ ಸಂಗತಿಗಳು ನಿರ್ಲಕ್ಷಕ್ಕೆ ಒಳಗಾಗಿ ಗೌಣವಾದವು. ಹಾಗಾಗಿ ಸಮಾಜದಲ್ಲಿ ಬದುಕಿ ಬಾಳಿದ ಸಾಮಾನ್ಯನೊಬ್ಬನ ಜೀವನ ಮಟ್ಟ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿ, ಧಾರ್ಮಿಕ ಪರಿಕಲ್ಪನೆಗಳು ಮತ್ತು ಸಾಧಿಸಿದ ಸಾಂಸ್ಕøತಿಕ ಕೊಡುಗೆಗಳು ದಾಖಲಾಗದೆ ಹೋದವು. ಕಳೆದ ಕೆಲವಾರು ದಶಕಗಳಿಂದ ಇತಿಹಾಸವನ್ನು ನೋಡುವ ದೃಷ್ಟಿಕೋನ ಗಮನಾರ್ಹವಾದ ರೀತಿಯಲ್ಲಿ ಬದಲಾವಣೆಯನ್ನು ಪಡೆಯುತ್ತಿದೆ. ವಿಭಿನ್ನ ರಂಗದಲ್ಲಿ ಪ್ರಾವೀಣ್ಯತೆ ಪಡೆದ ವಿದ್ವಾಂಸರು ಇತಿಹಾಸ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರಿಂದ ನಮಗೆ ಪರಿಚಯವೇ ಇಲ್ಲದ ನಮ್ಮ ನಾಡಿನ ಪ್ರಾಚೀನ ಜನಜೀವನದ ಅಧ್ಯಯನಕ್ಕೆ ಅವಶ್ಯಕವೆನಿಸಿದ ಆಕರಗಳ ಅಮೂಲ್ಯ ಭಂಡಾರವನ್ನೇ ತೆರದಂತಾಗಿದೆ. ಇತಿಹಾಸ ಅಧ್ಯಯನಗಳು ವಿಶಾಲ ವ್ಯಾಪ್ತಿಯಿಂದ ಕಿರುವ್ಯಾಪ್ತಿಯತ್ತ ಸರಿಯುತ್ತಿವೆ. ಒಂದರ್ಥದಲ್ಲಿ ಇದು ಮೂಲದತ್ತ ಸರಿಯುವ ಪ್ರಯತ್ನವಾಗಿದ್ದು, ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಜನಸಾಮಾನ್ಯರ ಜೀವನದ ವಿಶ್ಲೇಷಣೆಯನ್ನು ಮಾಡುವತ್ತ ಸಾಗಿ, ತನ್ನ ನಿಜವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನಾಡಿನ ಇತಿಹಾಸವನ್ನು ಪುನರ್ ರಚಿಸುವಲ್ಲಿ ಪ್ರತಿ ಜಿಲ್ಲೆ, ತಾಲೂಕು ಮತ...