ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಇಂಡಿಯಾಕ್ಕೆ ಬಂದಿದ್ದ " ಎಡ್ಮಂಡ್ ಸಿಬ್ಸನ್" ವಿಪತ್ತಿಗೆ ಶಿಗ್ಗಾಂವಿಯಲ್ಲಿಯೇ ಮಣ್ಣಾದ…………!!!!!!!

ನೀರು, ಗಾಳಿ, ಬೆಳಕು ಆಹಾರವಿಲ್ಲದ ಈ ಜಗತ್ತು ಬರಿ ಶೂನ್ಯ. ಅನೇಕ ಕಾರಣಗಳಿಂದಾಗಿ ಭೂಮಿ ತನ್ನ ಮೂಲ ರೂಪವನ್ನು ಬದಲಿಸಿಕೊಂಡಿದೆ. ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಿದೆ. ಇದರ ಅಂತಿಮ ಪರಿಣಾಮ ಬಿಳುವುದು ಸಮುದ್ರದ ಮೇಲೆ. ತಾಪಮಾನ ಏರಿಕೆಯಿಂದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ಮಂಜುಗಡ್ಡೆಗಳು ಕರಗುತ್ತಿವೆ ಹಾಗೇಯೇ ನಿದಾನವಾಗಿ ಸಮುದ್ರದ ಮಟ್ಟ ಏರುತ್ತಾ ಸಾಗುತ್ತಿದೆ. ಭೂಮಿಯ ವಾತಾವರಣ ಯಾವಾಗಲೂ ಸಮುದ್ರದ ನೀರಿನ ಮಟ್ಟದ ಮೇಲೆ ಅವಲಂಬಿಸಿದೆ ಎನ್ನುವುದು ವಿಜ್ಞಾನಿಗಳ ಸಮರ್ಥನೆ. ಸಮುದ್ರದ ಮಟ್ಟ ಹೆಚ್ಚಾದಾಗ ವಾತಾವರಣದಲ್ಲಿ ಅನೇಕ ಬದಲಾವಣೆಗಳಾಗಿ ಪ್ರಕೃತಿ ವಿಕೋಪ ಸಂಭವಿಸಿ ಕಾಲರಾ, ಮಲೇರಿಯಾ ಹಾಗೂ ಅನೇಕ ರೋಗಾಣುಗಳ ಸಂಖ್ಯೆ ಹಚ್ಚಾಗುವುದು ಸಾಮಾನ್ಯ. ಭಾರತ ದೇಶ ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಸಂಪತ್ತಿನಿಂದಾಗಿ ಅನೇಕ ದೇಶದ ಜನರನ್ನು ತನ್ನ ಕಡೆಗೆ ಆಕರ್ಷಿಸಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ದೇಶದ ಸಂಪತ್ತನ್ನು ಬೆರೆಯ ದೇಶಕ್ಕೆ ಮಾರಬೇಕು ಹಾಗೂ ಅದರಿಂದ ಹಣವನ್ನು ಗಳಿಸಬೇಕು ಎಂಬ ದುರಾಸೆಯಿಂದ ಡಚ್ಚರು, ಪೋರ್ಚಗಿಸರು (1505-1961) ಹಾಗೂ ಬ್ರಿಟೀಷರು ಭಾರತಕ್ಕೆ ಬಂದರು. ಈ ವ್ಯಾಪಾರಿಗಳು ಭಾರತದಲ್ಲಿಯ ಸಂಪತ್ತಿನಿಂದಾಗಿ ತಮ್ಮೊಳಗೆಯೇ ಅನೇಕ ಬಾರಿ ಯುದ್ದವನ್ನು ಮಾಡಿಕೊಂಡರು. ಆದರೆ ಇವರುಗಳಲ್ಲಿ ಭದ್ರವಾದ ಬುನಾದಿಯನ್ನು ಭಾರತದಲ್ಲಿ ಹಾಕಿಕೊಂಡವರು ಬ್ರಿಟೀಷರೂ ಮಾ...