Posts

Showing posts from November, 2020

ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಇಂಡಿಯಾಕ್ಕೆ ಬಂದಿದ್ದ " ಎಡ್ಮಂಡ್ ಸಿಬ್ಸನ್" ವಿಪತ್ತಿಗೆ ಶಿಗ್ಗಾಂವಿಯಲ್ಲಿಯೇ ಮಣ್ಣಾದ…………!!!!!!!

Image
ನೀರು, ಗಾಳಿ, ಬೆಳಕು ಆಹಾರವಿಲ್ಲದ ಈ ಜಗತ್ತು ಬರಿ ಶೂನ್ಯ. ಅನೇಕ ಕಾರಣಗಳಿಂದಾಗಿ ಭೂಮಿ ತನ್ನ ಮೂಲ ರೂಪವನ್ನು ಬದಲಿಸಿಕೊಂಡಿದೆ. ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಿದೆ. ಇದರ ಅಂತಿಮ ಪರಿಣಾಮ ಬಿಳುವುದು ಸಮುದ್ರದ ಮೇಲೆ. ತಾಪಮಾನ ಏರಿಕೆಯಿಂದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿರುವ ಮಂಜುಗಡ್ಡೆಗಳು ಕರಗುತ್ತಿವೆ ಹಾಗೇಯೇ ನಿದಾನವಾಗಿ ಸಮುದ್ರದ ಮಟ್ಟ ಏರುತ್ತಾ ಸಾಗುತ್ತಿದೆ. ಭೂಮಿಯ ವಾತಾವರಣ ಯಾವಾಗಲೂ ಸಮುದ್ರದ ನೀರಿನ ಮಟ್ಟದ ಮೇಲೆ ಅವಲಂಬಿಸಿದೆ ಎನ್ನುವುದು ವಿಜ್ಞಾನಿಗಳ ಸಮರ್ಥನೆ. ಸಮುದ್ರದ ಮಟ್ಟ ಹೆಚ್ಚಾದಾಗ ವಾತಾವರಣದಲ್ಲಿ ಅನೇಕ ಬದಲಾವಣೆಗಳಾಗಿ ಪ್ರಕೃತಿ ವಿಕೋಪ ಸಂಭವಿಸಿ ಕಾಲರಾ, ಮಲೇರಿಯಾ ಹಾಗೂ ಅನೇಕ ರೋಗಾಣುಗಳ ಸಂಖ್ಯೆ ಹಚ್ಚಾಗುವುದು ಸಾಮಾನ್ಯ. ಭಾರತ ದೇಶ ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಸಂಪತ್ತಿನಿಂದಾಗಿ ಅನೇಕ ದೇಶದ ಜನರನ್ನು ತನ್ನ ಕಡೆಗೆ ಆಕರ್ಷಿಸಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈ ದೇಶದ ಸಂಪತ್ತನ್ನು ಬೆರೆಯ ದೇಶಕ್ಕೆ ಮಾರಬೇಕು ಹಾಗೂ ಅದರಿಂದ ಹಣವನ್ನು ಗಳಿಸಬೇಕು ಎಂಬ ದುರಾಸೆಯಿಂದ ಡಚ್ಚರು, ಪೋರ್ಚಗಿಸರು (1505-1961) ಹಾಗೂ ಬ್ರಿಟೀಷರು ಭಾರತಕ್ಕೆ ಬಂದರು. ಈ ವ್ಯಾಪಾರಿಗಳು ಭಾರತದಲ್ಲಿಯ ಸಂಪತ್ತಿನಿಂದಾಗಿ ತಮ್ಮೊಳಗೆಯೇ ಅನೇಕ ಬಾರಿ ಯುದ್ದವನ್ನು ಮಾಡಿಕೊಂಡರು. ಆದರೆ ಇವರುಗಳಲ್ಲಿ ಭದ್ರವಾದ ಬುನಾದಿಯನ್ನು ಭಾರತದಲ್ಲಿ ಹಾಕಿಕೊಂಡವರು ಬ್ರಿಟೀಷರೂ ಮಾ...

ಮರೆಯಾಗುತ್ತಿರುವ "ಪ್ರಸನ್ನ ವನದುರ್ಗಾದೇವಿಯ ಪ್ರತೀಕವಾದ "ಕೋಣನ ತೆಲೆಯ" ಕಲ್ಲು ರಾಣೇಬೆನ್ನೂರಿನಲ್ಲಿ.............................!!

Image
ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವುದಕ್ಕೆ ವಿಜಯ ನಗರದ ಅರಸರು ಹಾಗೂ ಮೈಸೂರ ಒಡೆಯರು ಮೂಲ ಕಾರಣಿಭೂತರು. ಈ ಹಬ್ಬವನ್ನು ನವರಾತ್ರಿ ಹಾಗೂ ವಿಜಯದಶಮಿ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುವುದು. ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ, ಅವುಗಳೆಂದರೆ. ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ "ಮಹಿಷಾಸುರ"  ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಬತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ, ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರ, ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದ ದಿನ ಇದಾಗಿದೆ ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದೂ ಸಹ ಕರೆಯುತ್ತಾರೆ.  ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ. ಪುರಾತನ ಕಾಲದಲ್ಲಿ ವೈದಿಕ ಸಂಸ್ಕೃತಿಯ ದೇವತೆಗಳು ಬಹು ಮಟ್ಟಿಗೆ ಪುರುಷರು. ಆರ್ಯರದ್ದು ಪುರ...

ಸಂತ ಕನಕದಾಸರ ನೈಜ ವಿಗ್ರಹಗಳು ಇವಾಗಿರಬಹುದೇ ?

Image
ತಿರಿದುಂಬದಾಸರ ಕೈಯ ಕಪ್ಪವ ಕಟ್ಟಿಸಿಕೊಂಡೆ I ತಿರುಮಲಾಚಾರ್ಯ ಶ್ರೀ ಗುರುವೆ ಬಲ್ಲ I   ಎಂದು ಕಿರ್ತನೆಯಲ್ಲಿ ಗುರುಗಳಾದ ತಿರುಮಲಾಚಾರ್ಯರನ್ನು ಕನಕದಾಸರು ನೆನೆದ್ದಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಿರಮಂಡಲಗಿಯಲ್ಲಿ ರಚಿತವಾದ 'ಮೋಹನ ತರಂಗಿಣಿ' ಗ್ರಂಥದಲ್ಲಿಯೂ ಸಹ ರಾಮಾನುಜಾಚಾರ್ಯರನ್ನು ನೆನೆಯುವದೊರೊಂದಿಗೆ ಅವರ ಪಂಥೀಯವರಾದ 'ತಾತಾಚಾರ್ಯರನ್ನು' ಸಹ ಕನಕದಾಸರು ಸ್ಮರಿಸಿದ್ದಾರೆ.  ಕನಕದಾದಾಸರು ತಿರುನಾಮ ಹಾಗೂ ತಿರುಚೂರಣದ ಬಗ್ಗೆ ಹೆಚ್ಚಾಗಿ ಒತ್ತು ಕೊಟ್ಟಿದ್ದಾರೆಂದರೆ ಅವರು ತಿರುಪತಿಯ ತಿಮ್ಮಪ್ಪನ ಮೇಲೆ ಅಗಾಧವಾದ ಭಕ್ತಿಯನ್ನಿಟ್ಟಿದ್ದರು ಎಂದು ತಿಳಿಯಬಹುದು. ಜ್ಞಾನಿ - ವಿಜ್ಞಾನಿಗಳನ್ನು ಮೀರಿಸುವ ಜ್ಞಾನ ಸಂಪತ್ತು ಅವರಲ್ಲಿತ್ತು. ಅವರ 'ಮೋಹನ ತರಂಗಿಣಿ' 'ನಳಚರಿತೆ' ಹಾಗೂ ರಾಮದಾನ್ಯ ಚರಿತೆ ಗ್ರಂಥಗಳನ್ನು ಸಮಗ್ರಹವಾಗಿ ಅಧ್ಯಯನ ಮಾಡಿದಾಗ ಅವರಲ್ಲೊಬ್ಬ ಕಾಲಜ್ಞಾನಿ ಅಡಗಿದ್ದು ನಮಗೆ ಗೋಚರವಾಗದಿರದು.  ಅವರು ಕಾಗಿನೆಲಿಯ ಆದಿಕೇಶವನನ್ನು, ತಿಮ್ಮಪ್ಪನನ್ನು ಹಾಗೂ ಕದಿರಮಂಡಲಗಿಯ ಹನುಮೇಶನನ್ನು ಸಾಕ್ಷತ್ಕರಿಸಿಗೊಂಡಿದ್ದರು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲಾ ಎನ್ನುವುದಕ್ಕೆ ಅವರ ಗ್ರಂಥದಲ್ಲಿಯ ಶಬ್ದಗಳೇ ನಮಗೆ ಆಧಾರ. ಭಕ್ತಿ ಹಾಗೂ ಜ್ಞಾನ ಮಾರ್ಗದಿಂದ ಹರಿಯನ್ನು ತನ್ನಡೆ ಸೆಳೆದದ್ದನ್ನು ನೋಡಿದಾಗ ಭಗವಂತನನ್ನು ಸಾಕ್ಷಾತ್ಕಾರಸಿಕೊಳ್ಳಲು ನಿರ್ಮಲಾವಾ...