ಹಾವೇರಿಯ ಸಾವಿರ ವಷ೯ಗಳ ಹಿಂದಿನ ಇತಿಹಾಸ ಹೇಳುವ ಮೂಕ ಶಾಸನಗಳು

ಶಿವಲಿಂಗ ಪೂಜೆಯಲ್ಲಿ ತಲ್ಲಿನನಾದ ವಿರಳ ವಿಷ್ಣುವಿನ ಪ್ರತಿಮೆ- ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಹಾವೇರಿ ನಗರದಲ್ಲಿ ಸುಮಾರು 28 ಶಾಸನಗಳು ಪತ್ತೆಯಾಗಿವೆ. ಅವುಗಳು ಸಾವಿರಾರು ವಷ೯ಗಳ ಹಿಂದಿನ ಇಲ್ಲಿಯ ಪರಿಸರವನ್ನು, ರಾಜರ ಆಡಳಿತವನ್ನು, ಸಂಸ್ಕೃತಿಯನ್ನು , ದೇವಾಲಯಗಳನ್ನು ಹಾಗೂ ಜನರ ಸ್ಥಿತಿಗತಿಯನ್ನು ಎಳೆ - ಎಳೆಯಾಗಿ ಬಿಡಿಸಿಡಲು ಸಹಕಾರಿಯಾಗಿವೆ. ಹಾವೇರಿಯನ್ನು ಶಾಸನಗಳಲ್ಲಿ "ಪಾವರಿ, ಹಾವರಿ, ಹಾಹರಿ, ಹಾಗೂ ನಳಪುರಿ" ಎಂದು ಉಲ್ಲೇಖಿಸಲಾಗಿದೆ. ಕಲ್ಲುಮಂಟಪದ ಬಳಿಯಿರುವ ಕ್ರಿ.ಶ 1157 ರ ಶಾಸನದಲ್ಲಿ "ಹರಿಯುವ ನೀರಿಗೆ ಅಡ್ಡಲಾಗಿ ಹಾವೊಂದು ಬಂದಿದ್ದರಿಂದ ಕೃತಾಯುಗದಲ್ಲಿ ನಳಚಕ್ರವತಿ೯ಯು ಕೆರೆಯೊಂದನ್ನು ನಿಮಿ೯ಸಿ" ಊರೊಂದನ್ನು ಕಟ್ಟಿದನು ಎಂದಿದೆ. ಆ ಕೆರೆಯನ್ನು ಶಾಸನಗಳಲ್ಲಿ ನಳಹಲ್ಲಕೆರೆಯೆಂದು ಕರೆಯಲಾಗಿದೆ. ಈ ವಿಷಯನ್ನಾದರಿಸಿ ಒಂದು ಶಾಸನದಲ್ಲಿ ಈ ಊರನ್ನು "ನಳಪುರಿ"ಯೆಂದು ಉಲ್ಲೇಖಿಸಲಾಗಿದೆ. ಶಾಸನ ಕವಿಯೊಬ್ಬ ಹಾವೇರಿಯನ್ನು ನಾಲ್ಕನೂರು ಜನರಿರುವ ಅಗ್ರಹಾರ, ಬ್ರಹ್ಮನ ನಿವಾಸ, ವೇದಗಳ ನೆಲೆ, ಭೂಮಿಗೊಂದು ಅಲಂಕಾರ, ವಿದ್ಯಾಧಿದೇವತೆ ಸರಸ್ವತಿಯ ನೆಲೆವೀಡೆಂದು ಹೊಗಳಿದ್ದಾನೆ. ಹಾವೇರಿಯು ಅಂದು ಬನವಾಸಿ ಪನ್ನಿಚ್ಛಾ೯ಸಿರಕ್ಕೆ (12000 ಗ್ರಾಮಗಳನ್ನೊಳಗೊಂಡ ಪ್ರಾಂತ) ಸೇರಿದ್ದ "ಪುಲಿಗೆರೆ-300" (ಈಗಿನ ಲಕ್ಷ್ಮೇಶ್ವರ...