Posts

Showing posts from February, 2020

ಹಾವೇರಿಯ ಸಾವಿರ ವಷ೯ಗಳ ಹಿಂದಿನ ಇತಿಹಾಸ ಹೇಳುವ ಮೂಕ ಶಾಸನಗಳು

Image
ಶಿವಲಿಂಗ ಪೂಜೆಯಲ್ಲಿ ತಲ್ಲಿನನಾದ ವಿರಳ ವಿಷ್ಣುವಿನ ಪ್ರತಿಮೆ- ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಹಾವೇರಿ ನಗರದಲ್ಲಿ ಸುಮಾರು 28 ಶಾಸನಗಳು ಪತ್ತೆಯಾಗಿವೆ. ಅವುಗಳು ಸಾವಿರಾರು ವಷ೯ಗಳ ಹಿಂದಿನ ಇಲ್ಲಿಯ ಪರಿಸರವನ್ನು, ರಾಜರ ಆಡಳಿತವನ್ನು, ಸಂಸ್ಕೃತಿಯನ್ನು , ದೇವಾಲಯಗಳನ್ನು ಹಾಗೂ ಜನರ ಸ್ಥಿತಿಗತಿಯನ್ನು ಎಳೆ - ಎಳೆಯಾಗಿ ಬಿಡಿಸಿಡಲು ಸಹಕಾರಿಯಾಗಿವೆ. ಹಾವೇರಿಯನ್ನು ಶಾಸನಗಳಲ್ಲಿ "ಪಾವರಿ, ಹಾವರಿ, ಹಾಹರಿ, ಹಾಗೂ ನಳಪುರಿ" ಎಂದು ಉಲ್ಲೇಖಿಸಲಾಗಿದೆ. ಕಲ್ಲುಮಂಟಪದ ಬಳಿಯಿರುವ ಕ್ರಿ.ಶ 1157 ರ ಶಾಸನದಲ್ಲಿ "ಹರಿಯುವ ನೀರಿಗೆ ಅಡ್ಡಲಾಗಿ ಹಾವೊಂದು ಬಂದಿದ್ದರಿಂದ ಕೃತಾಯುಗದಲ್ಲಿ ನಳಚಕ್ರವತಿ೯ಯು ಕೆರೆಯೊಂದನ್ನು ನಿಮಿ೯ಸಿ" ಊರೊಂದನ್ನು ಕಟ್ಟಿದನು ಎಂದಿದೆ. ಆ ಕೆರೆಯನ್ನು ಶಾಸನಗಳಲ್ಲಿ ನಳಹಲ್ಲಕೆರೆಯೆಂದು ಕರೆಯಲಾಗಿದೆ. ಈ ವಿಷಯನ್ನಾದರಿಸಿ ಒಂದು ಶಾಸನದಲ್ಲಿ ಈ ಊರನ್ನು "ನಳಪುರಿ"ಯೆಂದು ಉಲ್ಲೇಖಿಸಲಾಗಿದೆ. ಶಾಸನ ಕವಿಯೊಬ್ಬ ಹಾವೇರಿಯನ್ನು ನಾಲ್ಕನೂರು ಜನರಿರುವ ಅಗ್ರಹಾರ, ಬ್ರಹ್ಮನ ನಿವಾಸ, ವೇದಗಳ ನೆಲೆ, ಭೂಮಿಗೊಂದು ಅಲಂಕಾರ, ವಿದ್ಯಾಧಿದೇವತೆ ಸರಸ್ವತಿಯ ನೆಲೆವೀಡೆಂದು ಹೊಗಳಿದ್ದಾನೆ. ಹಾವೇರಿಯು ಅಂದು ಬನವಾಸಿ ಪನ್ನಿಚ್ಛಾ೯ಸಿರಕ್ಕೆ (12000 ಗ್ರಾಮಗಳನ್ನೊಳಗೊಂಡ ಪ್ರಾಂತ) ಸೇರಿದ್ದ "ಪುಲಿಗೆರೆ-300" (ಈಗಿನ ಲಕ್ಷ್ಮೇಶ್ವರ...

ಸುಮಾರು 115 ವಷ೯ಗಳ ನಂತರ ನಡೆಯುತ್ತಿರುವ ಹಾವೇರಿಯ ದ್ಯಾಮವ್ವದೇವಿಯ ಜಾತ್ರೆ........!!!!!!

ಉತ್ತರ ಕನಾ೯ಟಕದ ಹೆಬ್ಬಾಗಿಲು ಜಿಲ್ಲೆ ಎಂದೇ ಪ್ರಸಿದ್ದಿಯನ್ನು ಪಡೆದ ಹಾವೇರಿಯನ್ನು ಶಾಸನಗಳಲ್ಲಿ ನಳಪುರಿ, ಪಾವರಿ, ಸಿದ್ದನಾಥಕ್ಷೇತ್ರ, ಹಾವರಿ ಹಾಗೂ ಹಾವೇರಿ ಎಂಬ ಹೆಸರುಗಳಿಂದ ಕರೆಯಲಾಗಿದೆ. "ಸೇವಣ...

ಹಾವೇರಿ ನಗರಕ್ಕೆ 2500 ವಷ೯ಗಳ ಇತಿಹಾಸವಿದೆ

Image
ಹಾವೇರಿ: ನಗರದ ಹೃದಯ ಭಾಗವಾದ ಬಸವೇಶ್ವರ ನಗರದಲ್ಲಿ ಇತಿಹಾಸ ಪೂರ್ವ ಕಾಲದ ನಿಲಸುಗಲ್ಲು ಹಾಗೂ ಇತಿಹಾಸ ಕಾದ ಶಿಲಾ ಶಾಸನವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ, ಇತಿಹಾಸ ಸಂಶೋಧಕರಾದ ಡಾ. ಶರತ್‌ಬಾಬು ಹಾಗೂ ಡಾ. ರಮೇಶ ತೆವರಿ ಪತ್ತೆ ಮಾಡಿದ್ದಾರೆ. ನಿಲಸುಗಲ್ಲು : ಬೃಹತ್ ಶಿಲಾಗೋರಿಯ ಕುರುಹು ನಿಲಸುಗಲ್ಲಾಗಿದೆ. ಇತಿಹಾಸ ಪೂರ್ವ ಕಾಲದಲ್ಲಿ ಜನರ ಗುಂಪಿನ ನಾಯಕ ಸಾವನ್ನಪ್ಪಿದಾಗ ಆತನ ನೆನಪು ಚಿರವಾಗಿರಲಿ ಎಂಬ ಉದ್ದೇಶದಿಂದ ಬೃಹತ್ ಆಕಾರದ ಶಿಲೆಯನ್ನು ನಿಲ್ಲಿಸುತ್ತಿದ್ದರು. ಇಂತಹ ಇತಿಹಾಸ ಪೂರ್ವಕಾಲದ ಕುರುಹು ಹಾವೇರಿಯ ಬಸವೇಶ್ವರ ನಗರದ ’ಬಿ’ ಬ್ಲಾಕ್‌ನಲ್ಲಿ ದೊರೆತಿದೆ. ೮ ಅಡಿ ಉದ್ದ ಹಾಗೂ ೩ ಅಡಿ ಅಗಲದ ಈ ನಿಲಸುಗಲ್ಲು ರಸ್ತೆಯ ಪಕ್ಕದಲ್ಲಿದೆ. ಕ್ರಿ. ಪೂ. ೧೨೦೦-೨೫೦ ರ ಕಾಲಘಟ್ಟಕ್ಕೆ ಸೇರಿದ ಈ ನಿಲಸುಗಲ್ಲು ಸು. ೨೫೦೦ ವರ್ಷಗಳ ಹಿಂದೆ ಜನರ ಗುಂಪೊಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಭೋಜರಾಜ ಪಾಟೀಲ ಸು. ೨೫೦೦ ವರ್ಷಗಳ ಹಿಂದೆ ಈ ಸ್ಥಳವು ಜನರು ವಾಸಿಸಲು ಅನುಕೂಲಕರವಾಗಿದ್ದಿರಬಹುದು ಹಾಗೂ ಅಲ್ಲಿಯ ಬೃಹತ್ತಾದಂತಹ ಕೆರೆಯ ನೀರಿನ ಮೇಲೆ ಅವರು ಅವಲಂಬಿತರಾಗಿರಬಹುದು. ಆದರೆ ಕೆರೆಯು ಈಗ ಮಾಯವಾಗಿದ್ದು ಆ ಭಾಗದಲ್ಲಿಯ ’ಹೊಸಕೆರೆ ಮಠ’ ಎಂಬ ಹೆಸರಿನ ಆಧಾರದ ಮೇಲೆ ಅಲ್ಲಿ ದೊಡ್ಡದಾದ ಕೆರೆಯಿತ್ತೆಂದು ಊಹಿಸ...