Posts

Showing posts from December, 2019

ಹಾವೇರಿ ಜಿಲ್ಲೆಯಲ್ಲಿ ಸಂತ ಶ್ರೀ ಕನಕದಾಸರ ಕುರುಹುಗಳು............!

Image
ಕನಕದಾಸರು ಬರೆದ ಮೋಹನತರಂಗೀಣಿಯ ತಾಳೆಗರಿಯ ಪ್ರತಿ ಕದರಮಂಡಲಗಿಯಲ್ಲಿ ಬಂಕಾಪುರದ ನರಸಿಂಹ ದೇವಸ್ಥಾನ ಹಾವೇರಿ ಸಮೀಪದ ಭರಡಿ ಗ್ರಾಮದಲ್ಲಿಯ ಕನಕದಾಸರ ಗುಹೆ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಉಚ್ಚ ಕುಲದಲ್ಲಿಯೇ ಜನಿಸಬೇಕು, ಜ್ಞಾನವಂತನೆ ಆಗಿರಬೇಕು ಎಂಬುದು ಶುದ್ದ ಸುಳ್ಳು. ನೀಚಕುಲದಲ್ಲಿ ಜನಿಸಿದರೇನು? ಮೂಢಮತಿಯಾದರೇನು? ಪರಿಶುದ್ದವಾದ ಭಕ್ತಿಯೊಂದಿದ್ದರೆ ಸಾಕು ಭಗವಂತನೇ ಭಕ್ತನನ್ನು ಬೆನ್ನತ್ತಿ ಬರುತ್ತಾನೆಂದು ಜಗತ್ತಿಗೆ  ತೋರಿಸಿದ ಎಕೈಕ ದಾಸಶ್ರೇಷ್ಟ ಕನಕದಾಸರು. ಇವರು ರಚಿಸಿದ ಮೋಹನ ತರಂಗಿಣಿ, ನರಸಿಂಹ ಹಸ್ತ, ಹರಿಭಕ್ತಸಾರ, ರಾಘವಧಾನ್ಯ( ರಾಮಧಾನ್ಯ ಚರಿತೆ), ನಳಚರಿತೆ ಹಾಗೂ ಮುಂಡಿಗೆಗಳನ್ನು ನಾವು ಗಮನಿಸಿದಾಗ ಅವರಲ್ಲಿಯ ಜ್ಞಾನದ ಆಳದ ಅರಿವು ನಮಗಾಗುತ್ತದೆ. ಕುಲದ ಮೂಲ ನೆಲೆಯನ್ನು ಪ್ರಶ್ನಿಸಿಸುತ್ತಾ ಸಮಾಜದ ಅಂದಿನ ಅಂಕು- ಡೊಂಕುಗಳನ್ನು ತಮ್ಮ ಸಾಹಿತ್ಯದಲ್ಲಿ ಬಲವಾಗಿ ಖಂಡಿಸಿದ್ದಾರೆ. ಅವರಲ್ಲಿಯ ಕ್ಷಾತ್ರ ಹಾಗೂ ಬ್ರಹ್ಮ ತೇಜಸ್ಸು ಅವರನ್ನು ದಂಡನಾಯಕನಿಂದ ದಾಸತ್ವದ ಕಡೆಗೆ ವಾಲಿಸಿತೆನ್ನಬಹುದು.  ಹಾವೇರಿ ಜಿಲ್ಲೆಯಲ್ಲಿಯ ಕಾಗಿನೆಲೆ, ಕದಿರಮಂಡಲಗಿ, ಬಂಕಾಪುರ, ಭರಡಿ (ಹಾವೇರಿ ತಾಲೂಕ), ಚಿಕ್ಕಲಿಂಗದಹಳ್ಳಿ, ಹಳ್ಳೂರ (ರಟ್ಟಿಹಳ್ಳಿ ತಾಲೂಕ), ಕನಕಾಪುರ (ಬೇಚರಾಕ. ಇದು ರಾಣೇಬೆನ್ನೂರ ಸಮೀಪದ ಗಂಗಾಪುರದಲ್ಲಿದೆ), ದೇವಗಿರ...

ಹತ್ತಿಬಿತ್ತಿ ಹಾಳಾಗಿ ಹೋಗು..............

     ತಂದೆಯ ಮಾತನ್ನು ಮಕ್ಕಳು  ಕೇಳದೆ ಇದ್ದಾಗ ಅಥವಾ ಹಿರಿಯರ ಮಾತನ್ನು ಕಿರಿಯರು ಕೇಳದೆ ಇದ್ದಾಗ ಈ ಮೇಲಿನ ಮಾತನ್ನು ಹಳೆಯ ಧಾರವಾಡ  ಜಿಲ್ಲೆಯಲ್ಲಿ (ಈಗಿನ ಹಾವೇರಿಯನ್ನು ಒಳಗೊಂಡಂತೆ) ಸಾಮಾನ್ಯವಾಗಿ ಬ...