Posts

Showing posts from July, 2019

ಹಾಲಸಿದ್ದೇಶ್ವರನಿಂದ ಪ್ರಸಿದ್ಧಿ ಪಡೆದ; ಹಲಗೇರಿ.....lll

ರಾಣೇಬೆನ್ನೂರಿನಿಂದ 7 ಕಿ.ಮೀ ದೂರದಲ್ಲಿರುವ ಹಾಗೂ ಕೊಡ,ಸಮಸಗಿ ಮತ್ತು ಇಟಗಿಯ ಮಧ್ಯದಲ್ಲಿಯ ಗ್ರಾಮವೆಂದರೆ ಹಲಗೇರಿ. ಸುಮಾರು 900 ವಷ೯ಗಳಷ್ಟು ಹಳೆಯದಾದ ಗ್ರಾಮವಿದು ಎನ್ನಲು ನಮಗೆ ಅನೇಕ ಪುರಾವೆಗಳು ಇಲ್ಲಿ ದೊರೆಯುತ್ತವೆ. ಅಂದು ಹಲಗೇರಿಯು ರಟ್ಟಿಹಳ್ಳಿ ಆಡಳಿತ ಕೇಂದ್ರಕ್ಕೆ ಒಳಪಡುತ್ತಿತ್ತು. ಊರಿನಲ್ಲಿಯ ಹೊಂಡದ ಮೇಲಿರುವ ಕ್ರಿ.ಶ 1404 ರ ಶಾಸನದಲ್ಲಿ ಈ ಗ್ರಾಮದ ಹೆಸರನ್ನು " ಹಲಿಗೆರೆ" ಎಂದು ಖಂಡರಿಸಲಾಗಿದೆ. ಕೆಲವು ಬ್ರಿಟಿಷರ ದಾಖಲೆಗಳಲ್ಲಿ "ಹಲಗೆರೆ" ಎಂದು ಸಹ ದಾಖಲಾಗಿದೆ. ಬಹುಶಃ ಪುರಾತನವಾದ "ಹಾಲಸಿದ್ದೇಶ್ವರನ" ದೇವಾಲಯದಿಂದಾಗಿ ಈ ಊರಿಗೆ ಹಲಗೇರಿ ಎಂದು ಬಂದಿರಬಹುದಾಗಿದೆ. ಇದರ ಸಮೀಪದಲ್ಲಿಯೇ ಇಟಗಿ ಗ್ರಾಮಕ್ಕೆ ಹೋಗುವ ಬಲ ಭಾಗದಲ್ಲಿ ಬೇಚರಾಕ(ಹಾಳಾದ) "ಸುಂಕಾಪುರ" ಗ್ರಾಮವೊಂದಿದ್ದು ಅದು ಸಂಪೂಣ೯ವಾಗಿ ಹಾಳಾಗಿದೆ. ಕಾರಣ ಅಂದಿನ ಸಮಯದಲ್ಲಿ ಈ ಊರಿಗೆ ಫ್ಲೇಗ್ ಬಂದಿದ್ದರಿಂದ ಜನರು ಊರನ್ನು ತೊರೆದು ಪಕ್ಕದ ಇಟಗಿ, ಅಂತರವಳ್ಳಿ ಹಾಗೂ ಮಾಗೋಡ ಗ್ರಾಮದಲ್ಲಿ ನೆಲೆಯನ್ನು ಕಂಡುಕೊಂಡರು. ಹೀಗಾಗಿ ಅವರುಗಳನ್ನು "ಸುಂಕಾಪುರ" ದವರು ಎಂದು ಕರೆಯುತ್ತಿದ್ದರು.ಮಸೀದಿಯ ಪಕ್ಕದಲ್ಲಿಯ ಹೊಂಡದ ದಿಬ್ಬದ ಮೇಲಿರುವ ಕ್ರಿ.ಶ 1404 ರ ಶಾಸನದಲ್ಲಿ "ಕಾಂಕತಿಯ ನರಸೆನಾಯ್ಕರು ಹರಿಹರದ ಲಕ್ಕನಾಥಿದೇವಿಯ ಅಮ್ರುತಪಡಿಗೆ "ಹಲಿಗೆರೆ"ಯ ಕೆಲ ಭಾಗಗಳನ್ನು ಧಮ೯ವಾಗಲೆಂದು ನೀಡಲಾಯಿತು...

ಶಿಶುನಾಳ ಷರೀಫ್ ಸಾಹೇಬರ ಪುರಾಣ ಅಮೇರಿಕಾದ ಎಲ್ಲಾ ಗ್ರಂಥಾಲಯಗಳಲ್ಲಿರಲಿ: ಅಮೇರಿಕದ ಪ್ರೊಫೆಸರ್ ವಿಲಿಯಂ.ಸಿ.ಎಂ ಕಾರಮ್ಯಾಕ್ ....................!

Image
                                                  ಕರ್ನಾಟಕದಲ್ಲಿಯೇ ಶರೀಫ ಸಾಹೇಬರಿಂದ ಪ್ರಸಿದ್ದಿಯನ್ನು ಪಡೆದ ಗ್ರಾಮವೆಂದರೆ ಶಿಗ್ಗಾಂವಿಯಿಂದ 15 ಕಿ.ಮೀ ದೂರದಲ್ಲಿರುವ ಶಿಶುನಾಳ.  "ಶಿಶುನಾಳಧೀಶ" ಈ ಗ್ರಾಮದ ಅಧೀದೇವತೆಯಾಗಿದೆ. ವಿಶಾಲವಾದ ದೇವಸ್ಥಾನದ ಮಧ್ಯದಲ್ಲಿ ಸ್ತಂಭದ ಮೇಲಿರುವ ನಂದಿಯೇ (ಬಯಲು ಬಸವಣ್ಣ) ಶಿಶುನಾಳಧೀಶ. ಇದರ ಸ್ತಂಭದ ಮೇಲೆ 12-13 ನೇ ಶತಮಾನದ ಶಾಸನದಲ್ಲಿ ಇಲ್ಲಿಯ ಭೋಗನಾಥ ಹಾಗೂ ಮಲ್ಲಿನಾಥದೇವರಿಗೆ ಬಿಟ್ಟ ಭೂದಾನದ ಬಗ್ಗೆ ತಿಳಿಸುತ್ತದೆ. ಇಲ್ಲಿಯೇ ಸಮೀಪದಲ್ಲಿ ಹುಲಗೂರ ಹಾಗೂ ವೀರಭದ್ರೇಶ್ವರ ದೇವರಿಂದ ಪ್ರಸಿದ್ಧಿಯನ್ನು ಪಡೆದ ಕಾರಡಗಿ ಗ್ರಾಮಗಳನ್ನು ನೋಡಬಹುದು. ಹುಲಗೂರನ್ನು ಶಾಸನಗಳಲ್ಲಿ "ಪುಲ್ಲಂಗೂರು" ಎಂದು ಕರೆಯಲಾಗಿದೆ. ಇಲ್ಲಿಯ " ಪುಲಂಗೂರಬ್ಬೆ" ಗ್ರಾಮದೇವತೆಯಿಂದಾಗಿ ಈ ಹೆಸರು ಈ ಗ್ರಾಮಕ್ಕೆ ಬಂದಿದೆ ಎನ್ನಲು ಕ್ರಿ.ಶ 970 ರ ರಾಷ್ಟ್ರಕೂಟರ ಶಾಸನ ಸಹಕಾರಿಯಾಗುತ್ತದೆ.  ಒಟ್ಟು 13 ಶಾಸನಗಳು ಇಲ್ಲಿಯವರೆಗೂ ಈ ಗ್ರಾಮದಲ್ಲಿ ದೊರೆತಿವೆ. ಸಂತರಾದ "ಹಜರತ್ ಷಾಹ್‌ ಖಾದರಿರವರು" ಕ್ರಿ.ಶ 1800 ರಲ್ಲಿ ಸವಣೂರಿನ ನವಾಬನಾದ ಖೈರಖಾನನ ರಾಜ್ಯದಲ್ಲಿ ( ಸವಣೂರಿನಲ್ಲಿ)ವ...