ಎಕಲಕ್ಷ್ಮಣಪುರ ಮುಂದೆ ಯಕ್ಲಾಸಪುರವಾಯಿತೇ????
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಯಕ್ಲಾಸಪುರದ ಗ್ರಾಮನಾಮ ಪೌರಾಣಿಕೆ ಹಿನ್ನಲೆಯುಳ್ಳದ್ದು ಎಂದು ಊಹಿಸಬಹುದು. ಅದಕ್ಕೆ ಅನೇಕ ಪುರಾವೆಗಳು ಇಲ್ಲಿ ಲಭ್ಯ. ಯಕ್ಲಾಸಪುರ ಗ್ರಾಮದ ಸನಿಹದಲ್ಲಿರುವ ಆರೇಮಲ್ಲಾಪುರ ಗ್ರಾಮನಾಮವೂ ಸಹ ಪೌರಾಣಿಕ ಹಿನ್ನಲೆಯಳ್ಳದ್ದು. ಕಾರಣ ಅದು "ಮಲ್ಹಾರಿಯ"(ಮೈಲಾರ) ಹೆಸರಿನಿಂದ ಹುಟ್ಟಿದ್ದು. ಅಲ್ಲಿ ಮರಾಠ (ಆರೇರ) ಸಮೂದಾಯದವರು ವಾಸವಾಗಿದ್ದರಿಂದ ಆರೇಮಲ್ಲಾಪುರ ಎಂದು ಹೆಸರನ್ನು ಪಡೆದಿರಬಹುದು ಎಂದು ಊಹಿಸಬಹುದು. ಹರಪನಹಳ್ಳಿ ಪಾಳೆಯಗಾರರೊಡನೆ ಚಿತ್ರದುರ್ಗದ ಪಾಳೆಯಗಾರರು ಯುದ್ದವನ್ನು ಸಾರಿದಾಗ ಚಿತ್ರದುರ್ಗದವರಿಗೆ ಸಹಾಯ ಮಾಡಲು ಹಾವನೂರು ದೇಸಾಯಿಯ ಹಾಗೂ ಕೆಳದಿ ಅರಸರ ದಂಡು ಯಕ್ಲಾಸಪುರದಲ್ಲಿಯೇ ಬೀಡಾರ ಹೂಡುತ್ತಿತ್ತು. ಅಶ್ವಾರೋಹಿಗಳ (ರಾವುತರ) ದಂಡು ಈಗಿನ ಯಕ್ಲಾಸಪುರದಿಂದ ಸ್ವಲ್ಪ ದೂರದಲ್ಲಿರುತ್ತಿದ್ದರು. ಆ ಸ್ಥಳವೇ ಈಗ ರಾವುತನಕಟ್ಟಿ ಎಂಬ ಹೆಸರನ್ನು ಪಡೆದುಕೊಂಡಿದೆ. ಪೇಶ್ವೆಯವರು ಸೇಂಧಿ ಗೀಡಗಳನ್ನು *ಈಳಿಗ*(ಇಡಿಗ) ಸಮೂದಾಯದವರಿಗೆ ಹರಾಜು ಕೊಟ್ಟಿದ್ದರು. ಅದನ್ನು ಬ್ರಿಟಿಷರು ಮುಂದುವರೆಸಿದರು. ಆ ಸಮೂದಾಯದ ಜನರನ್ನು ಈಗಲೂ ಗ್ರಾಮದಲ್ಲಿ ನೋಡಬಹುದು. ಛತ್ರಪತಿ ಶಿವಾಜಿಯ ಕಾಲಘಟ್ಟಕ್ಕಿಂತ ಪೂರ್ವದಲ್ಲಿಯೇ ಇಲ್ಲಿ ಹಾಗೂ ಮಲ್ಲಾಪುರ ಗ್ರಾಮದಲ್ಲಿ ಮರಾಠ ಸಮೂದಾಯದ ಜನರು ವಾಸವಾಗಿದ್ದಾರೆ ಎಂದು ನಾವು ಹೇಳಬಹುದು. ವಿಜಯನಗರದ ಕಾಲದಲ್ಲಿ ಇಲ್ಲಿಯ ಶೃಂಗೇರಿ ಮಠದ ಶ...