ಸಾವಿರಾರು ವರ್ಷಗಳಿಂದ ಮನುಕುಲವನ್ನು ರೋಗಗಳಿಂದ ರಕ್ಷಿಸುತ್ತಿರುವ ವೈದ್ಯರಿಗೂ, ನಗರ ಸಭೆ ನೌಕರರಿಗೂ ಹಾಗೂ ಸಿಬ್ಬಂದಿಯವರಿಗೆ ನನ್ನದೊಂದು ಸಲಾಂ...............!!!!!

ಮನುಷ್ಯನ ಹುಟ್ಟು ಭೂಮಿಯ ಮೇಲೆ ಹೇಗೆ ಆಯಿತು ? ಎಂಬುದು ವಿಜ್ಞಾನಕ್ಕೆ ಈಗಲೂ ಸಹ ಸವಾಲಾಗಿಯೇ ಉಳಿದಿದೆ. ಆದರೆ ಮಾನವನು ತನ್ನ ಹುಟ್ಟಿನಿಂದ ಅನೇಕ ಕಷ್ಟಗಳನ್ನು ಅನುಭವಿಸುತ್ತಾ ಬಂದಿದ್ದಾನೆ. ಪ್ರಕೃತಿಯಲ್ಲಾದ ಸಾವು ನೋವುಗಳಿಂದ ಹೆದರಿ, ಅವುಗಳ ನಿವಾರಕ ದೇವನೊಬ್ಬನೇ ಎಂದು ತಿಳಿದು ದೇವರ ಮೊರೆ ಹೋದನು. ಗುಡುಗು, ಸಿಡಿಲು, ಮಳೆ, ಅಗ್ನಿ ಹಾಗೂ ಕ್ರೂರ ಪ್ರಾಣಿಗಳಿಂದಾದ ಸಾವನ್ನು ಕಂಡು ಅವುಗಳು ದೇವರ ಕೋಪದಿಂದಾದ ಕೃತ್ಯಗಳು ಎಂದು ಭಾವಿಸಿದನು. ಬಹುಶಃ ಅವನ ಆ ನಂಬಿಕೆಯ ದೇವರು ಅವನನ್ನು ಸಂಕಷ್ಟದಿಂದ ಪಾರು ಮಾಡಿರಲೂಬಹುದು. ಅಕ್ಷರ ಜ್ಞಾನವಿಲ್ಲದ ಆ ಮನುಷ್ಯ ಗುಹೆಯಲ್ಲಿ ವಾಸಿಸುತ್ತಾ ಪ್ರಾಕೃತಿಕ ಜೀವನವನ್ನು ನೆಡೆಸುತ್ತಿದ್ದ. ಅಂತಹ ಪ್ರಾಕೃತಿಕ ಜೀವನ ನಡೆಸಿದ ಮಾನವನ ಕುರುಹುಗಳನ್ನು ನಾವು ಹಾವೇರಿ ಜಿಲ್ಲೆಯ ಹಳ್ಳೂರು, ಫತ್ತೇಪುರ, ನಲವಾಗಲ, ನದಿಹರಳಹಳ್ಳಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಈಗಲೂ ಸಹ ನೋಡಬಹುದಾಗಿದೆ. ಪ್ರಾಕೃತಿಕ ಜೀವನದಿಂದ ಸಂಸ್ಕೃತಿಕದ ಕಡೆ ಬರುವಾಗ ಗುಹೆಯಲ್ಲಿದ್ದ ದೇವರಿಗೆ ಗುಡಿಯನ್ನು ಕಟ್ಟಿ ತಾನು ಗುಡಿಸಲಿನಲ್ಲಿ ವಾಸಿಸಲಾರಂಭಿಸಿದನು. ಜನರ ಮಧ್ಯದಲ್ಲಾದ ಜಗಳದಿಂದಾಗಿ ಬಲಿಷ್ಠನಾದವನು ಅವರ ಮೇಲೆ ಹಿಡಿತವನ್ನು ಸಾಧಿಸಿ ಅರಸನಾದನು. ಮಾನವನ ವಿಕಾಸ ಶರವೇಗದಲ್ಲಿ ಹೋಗಲಾರಂಭಿಸಿತು. ಹೊಸ ಆವಿಷ್ಕಾರಗಳಾದವು. ಪಕೃತಿಯಲ್ಲಾಗುತ್ತಿದ್ದ ವಿಕೋಪಗಳಿಗೆ ಎದೆ ಉಬ್ಬಿಸಿಕೊಂಡು ನಿಂತನು, ರೋಗಗಳ ನಿವಾರಕ್ಕೆ ಭಗವಂತನ ಮೊರ...