Posts

Showing posts from March, 2020

ಸಾವಿರಾರು ವರ್ಷಗಳಿಂದ ಮನುಕುಲವನ್ನು ರೋಗಗಳಿಂದ ರಕ್ಷಿಸುತ್ತಿರುವ ವೈದ್ಯರಿಗೂ, ನಗರ ಸಭೆ ನೌಕರರಿಗೂ ಹಾಗೂ ಸಿಬ್ಬಂದಿಯವರಿಗೆ ನನ್ನದೊಂದು ಸಲಾಂ...............!!!!!

Image
ಮನುಷ್ಯನ ಹುಟ್ಟು ಭೂಮಿಯ ಮೇಲೆ ಹೇಗೆ ಆಯಿತು ? ಎಂಬುದು ವಿಜ್ಞಾನಕ್ಕೆ ಈಗಲೂ ಸಹ ಸವಾಲಾಗಿಯೇ ಉಳಿದಿದೆ. ಆದರೆ ಮಾನವನು ತನ್ನ ಹುಟ್ಟಿನಿಂದ ಅನೇಕ ಕಷ್ಟಗಳನ್ನು ಅನುಭವಿಸುತ್ತಾ ಬಂದಿದ್ದಾನೆ. ಪ್ರಕೃತಿಯಲ್ಲಾದ ಸಾವು ನೋವುಗಳಿಂದ ಹೆದರಿ, ಅವುಗಳ ನಿವಾರಕ ದೇವನೊಬ್ಬನೇ ಎಂದು ತಿಳಿದು ದೇವರ ಮೊರೆ ಹೋದನು. ಗುಡುಗು, ಸಿಡಿಲು, ಮಳೆ, ಅಗ್ನಿ ಹಾಗೂ ಕ್ರೂರ ಪ್ರಾಣಿಗಳಿಂದಾದ ಸಾವನ್ನು ಕಂಡು ಅವುಗಳು ದೇವರ ಕೋಪದಿಂದಾದ ಕೃತ್ಯಗಳು ಎಂದು ಭಾವಿಸಿದನು. ಬಹುಶಃ ಅವನ ಆ ನಂಬಿಕೆಯ ದೇವರು ಅವನನ್ನು ಸಂಕಷ್ಟದಿಂದ ಪಾರು ಮಾಡಿರಲೂಬಹುದು. ಅಕ್ಷರ ಜ್ಞಾನವಿಲ್ಲದ ಆ ಮನುಷ್ಯ ಗುಹೆಯಲ್ಲಿ ವಾಸಿಸುತ್ತಾ ಪ್ರಾಕೃತಿಕ ಜೀವನವನ್ನು ನೆಡೆಸುತ್ತಿದ್ದ.  ಅಂತಹ ಪ್ರಾಕೃತಿಕ ಜೀವನ ನಡೆಸಿದ ಮಾನವನ ಕುರುಹುಗಳನ್ನು ನಾವು ಹಾವೇರಿ ಜಿಲ್ಲೆಯ ಹಳ್ಳೂರು, ಫತ್ತೇಪುರ, ನಲವಾಗಲ, ನದಿಹರಳಹಳ್ಳಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಈಗಲೂ ಸಹ ನೋಡಬಹುದಾಗಿದೆ. ಪ್ರಾಕೃತಿಕ ಜೀವನದಿಂದ ಸಂಸ್ಕೃತಿಕದ ಕಡೆ ಬರುವಾಗ ಗುಹೆಯಲ್ಲಿದ್ದ ದೇವರಿಗೆ ಗುಡಿಯನ್ನು ಕಟ್ಟಿ ತಾನು ಗುಡಿಸಲಿನಲ್ಲಿ ವಾಸಿಸಲಾರಂಭಿಸಿದನು. ಜನರ ಮಧ್ಯದಲ್ಲಾದ ಜಗಳದಿಂದಾಗಿ ಬಲಿಷ್ಠನಾದವನು ಅವರ ಮೇಲೆ ಹಿಡಿತವನ್ನು ಸಾಧಿಸಿ ಅರಸನಾದನು. ಮಾನವನ ವಿಕಾಸ ಶರವೇಗದಲ್ಲಿ ಹೋಗಲಾರಂಭಿಸಿತು. ಹೊಸ ಆವಿಷ್ಕಾರಗಳಾದವು. ಪಕೃತಿಯಲ್ಲಾಗುತ್ತಿದ್ದ ವಿಕೋಪಗಳಿಗೆ ಎದೆ ಉಬ್ಬಿಸಿಕೊಂಡು ನಿಂತನು, ರೋಗಗಳ ನಿವಾರಕ್ಕೆ ಭಗವಂತನ ಮೊರ...

ಅಳಿವಿನ ಅಂಚಿನಲ್ಲಿರುವ ಐರಣಿ ಕೋಟೆ....!!!!!

Image
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನಲ್ಲಿರುವ ಐರಣಿ ಗ್ರಾಮ ಐತಿಹಾಸಿಕ ನೆಲೆಯಾಗಿದ್ದು, ಶ್ರೀ ಸಿದ್ಧಾರೂಡ ಹಾಗೂ ಮುಪ್ಪಿನಾರ್ಯ ಸ್ವಾಮೀಜಿಯವರು ತಪೋಗೈದ ಪೂಣ್ಯ ಭೂಮಿ (ಮಲ್ಲಿಕಾರ್ಜುನ ಬೆಟ್ಟ) ಈ ಐರಣಿ. ಇಲ್ಲಿಯ ವೆಂಕಪ್ಪ ದೇವಸ್ಥಾನ ಹಾವನೂರ ದೇಸಾಯಿಯವರ ನೆನಪನ್ನು ಬಿಚ್ಚಿಡುತ್ತದೆ. ಇಲ್ಲಿಯ ಹಾಳಾದ ಕೋಟೆ, ಮಠ ಹಾಗೂ ದೇವಸ್ಥಾನ ತನ್ನ ಗತವೈಭವದ ಕತೆಯನ್ನು ಹೇಳುತ್ತವೆ. ಬ್ರಿಟಿಷರು ಹಳೆಯ ಧಾರವಾಡ ಜಿಲ್ಲೆಯನ್ನು ಶತ್ರುಗಳಿಂದ ರಕ್ಷಿಸಲು ಪೂರ್ವ ದಿಕ್ಕಿನಲ್ಲಿಯ ಐರಣಿ ಗ್ರಾಮದಲ್ಲಿ ಗುಡ್ಡಗಳ ಶ್ರೇಣಿಯೊಂದಿದೆ ಎಂದು ದಾಖಲಿಕರಿಸಿದ್ದಾರೆ.  ಕೋಟೆಯ ಮಂಭಾಗದಲ್ಲಿಯ ರಸ್ತೆಯ ( ನದಿಹರಳಹಳ್ಳಿಗೆ ಹೋಗುವ ಮಾರ್ಗ) ಮೇಲೆ ವಾರಕ್ಕೊಮ್ಮೆ(ಶನಿವಾರ) ಸಂತೆ ನಡೆಯುತ್ತಿತ್ತು. ಹೀಗಾಗಿ ಹಳೆಯ ಮಂದಿ ಇದನ್ನು ಸಂತೆಯ ದಾರಿಯೆಂದು ಈಗಲೂ ಕರೆಯುತ್ತಾರೆ. 1881ರಲ್ಲಿ  ಕೇವಲ 1778 ಜನರು ಮಾತ್ರ ಈ ಗ್ರಾಮದಲ್ಲಿ ವಾಸವಾಗಿದ್ದರು. ಗುಣಮಟ್ಟದ ಕಂಬಳಿಗಳನ್ನು ಇಲ್ಲಿಯ ಕೆಲವು 'ಕುರುಬ' ಜನಾಂಗದ ಕುಟುಂಬಗಳು ಸ್ಥಳೀಯರ ಉಪಯೋಗಕ್ಕಾಗಿ ನೇಯುತ್ತಿದ್ದರು. ಆದರೆ ಆ ಜನಾಂಗದವರು 1876- 77 (ಬರಗಾಲ ಬಂದ ವಷ೯) ರಲ್ಲಿ ಬರಗಾಲದಿಂದಾಗಿ ಊರನ್ನು ಬಿಟ್ಟು ಹೋದರು. ಹೀಗಾಗಿ ಇಲ್ಲಿ ಕಂಬಳಿ ನೇಯುವುದು ಸಂಪೂರ್ಣವಾಗಿ ನಿಂತು ಹೋಯಿತು.  ಹೊಳೆಯ ದಂಡೆಗೆ ಬೇಳೆಯುತ್ತಿದ್ದ ಕಲ್ಲಂಗಡಿ ಬ್ರಿಟಿಷರಿಗೆ ಬಹು ಪ್ರಿಯವಾಗಿತ್ತು....