Posts

Showing posts from November, 2019

ಕನಾ೯ಟಕದ ನಾಟಕ ಪಿತಾಮಹಾನ ಕಮ೯ಭೂಮಿಯಾದ ಹಾವೇರಿಯ ಅಗಣ್ಡೆ( ಅಗಡಿ ಗ್ರಾಮದ )ಯ ಇತಿಹಾಸ........

Image
ಬಹದ್ದೂರ ದೇಸಾಯಿಯವರ ನೇತೃತ್ವದಲ್ಲಿ ಬ್ರಿಟಿಷ್ ರಾಜನ ಸಿಲ್ವರ ಜ್ಯೂಬಿಲಿ ಆಚರಣೆಯ ದಿನ ತೆಗೆದ ಚಿತ್ರ -ಅಗಡಿ ಅಗಡಿಯಲ್ಲಿ ಕೆರೆಗೆ ಕಟ್ಟೆ ಕಟ್ಟುವಾಗ ತೆಗೆದ ಫೋಟೋ ಶ್ರೀ ಸದ್ಗುರು ಶೇಷಾಚಲ ಮಠ - ಅಗಡಿ ಅಗಡಿಯ ದೇಸಾಯಿ ಮನೆತನಕ್ಕೆ ಸೇರಿದ ಶಾಸನ ಜಿಲ್ಲಾ ಕೇಂದ್ರ ಹಾವೇರಿಯ ಸಮೀಪದ ಐತಿಹಾಸಿಕ ಗ್ರಾಮ " ಅಗಡಿ ". ಈ ಗ್ರಾಮದಲ್ಲಿಯ ಶಾಸನಗಳು, ಪುರಾತನ ದೇವಾಲಯಗಳು ಸಾವಿರಾರು ವಷ೯ಗಳ ಗತ ವೈಭವದ ಮೂಖ ಸಾಕ್ಷಿಗಳಾಗಿವೆ. ಪುರಾತನವಾದ ಈ ಗ್ರಾಮವನ್ನು ಶಾಸನದಲ್ಲಿ (ಕ್ರಿ.ಶ 1116 ರ) 'ಅಗಣ್ಡೆ 'ಎಂದು ಕರೆಯಲಾಗಿದೆ. ಬಹುಶಃ ದುಂಡಾದ ಸಣ್ಣ ಬೆಟ್ಟದ ರೂಪದಲ್ಲಿ ಈ ಗ್ರಾಮವಿದ್ದುದರಿಂದ ಈ ಗ್ರಾಮವನ್ನು ಶಾಸನದಲ್ಲಿ ' ಅಗಣ್ಡೆ' ಎಂದು ಕರೆದಿರಬಹುದಾಗಿದೆ ಎಂದು ಡಾ.ರಮೇಶ ತೆವರಿ ಅಭಿಪ್ರಾಯಪಟ್ಟಿದ್ದಾರೆ.  ಈಗಿನ ಅಗಡಿಯು ಮೂರು ಗ್ರಾಮಗಳನ್ನೊಳಗೊಂಡ ದೊಡ್ಡ  ಗ್ರಾಮವಾಗಿದೆ. ಕನ್ನಡ ಸಾಹಿತ್ಯಕ್ಕೆ, ಹಿಂದೂಳಿದ ಜನರ ಕಲ್ಯಾಣಕ್ಕಾಗಿ ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನದೆ ಕೊಡುಗೆಯನ್ನು ಕೊಟ್ಟ ಜಿಲ್ಲೆಯ ವಿಶೇಷ ಗ್ರಾಮ ಇದಾಗಿದೆ. ಈ ಗ್ರಾಮದಲ್ಲಿಯ ಬಸವಣ್ಣನ ಗುಡಿಯ ( ಹೊಲದಲ್ಲಿ ಹಾಳು ಬಿದ್ದಿರುವ) ಮುಂಭಾಗದಲ್ಲಿಯ ಕ್ರಿ.ಶ 1116 ರ ಶಾಸನದಲ್ಲಿ ಈ ಗ್ರಾಮವನ್ನು 'ಅಜಣ್ಡೆ' ಎಂದು ಉಲ್ಲೇಖಿಸಲಾಗಿದೆ.  ಬಂಕೆಯರಸನ ಅಧಿಕಾರಿಯಾದ "ಬ...