ಶಾಸನದಲ್ಲಿಯ ಬಿಂನವೂರು ಮುಂದೆ ರಾಣೇಬೆನ್ನೂರ ಹೇಗಾಯಿತು

ಶಾಸನದಲ್ಲಿಯ"ಬಿಂನವೂರು" ಮುಂದೆ ರಾಣೇಬೆನ್ನೂರ ಹೇಗಾಯಿತು?........................ ರಾಣೇಬೆನ್ನೂರು ಹಾವೇರಿ ಜಿಲ್ಲೆಯ ಏಂಟು ತಾಲೂಕುಗಳಲ್ಲಿ ಅತಿ ದೊಡ್ಡ ತಾಲೂಕಾ ಕೇಂದ್ರವಾಗಿದೆ. ಎಷ್ಯಾದಲ್ಲಿಯೇ ಬೀಜೋತ್ಪಾದನೆಯಲ್ಲಿ ಎರಡನೇಯ ಸ್ಥಾನವನ್ನು ಪಡೆದ ಹೆಗ್ಗಳಿಕೆ ಈ ತಾಲೂಕಿಗೆ ಸಲ್ಲುತ್ತದೆ. ಇಲ್ಲಿಯೇ ಸಮೀಪದಲ್ಲಿ ವಾಸಿಸುತ್ತಿರುವ ದಿ ಗ್ರೇಟ್ ಇಂಡಿಯನ ಬಸ್ಟಡ್೯ ಪಕ್ಷಿ ಹಾಗೂ ಕೃಷ್ಣಮೃಗಗಳಿಂದಾಗಿ ಇದರ ಹಿರಿಮೆ ಇಮ್ಮಡಿಯಾಗಿದೆ. ಕೋಟೆಯಲ್ಲಿರುವ ವಿದ್ಯಾದೀಶ ತಿಥ೯ರ ವಿಗ್ರಹ ಭಾರತದಲ್ಲಿಯೇ ಎಕೈಕ. ಇಂತಹ ಹತ್ತು ಹಲವು ಸಂಗತಿಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡ ರಾಣೇಬೆನ್ನೂರ, ತನ್ನ ಹೆಸರಿನ ಹಿಂದೆ ಇರುವ ಇತಿಹಾಸವನ್ನು ಅದು ಹೇಳಲು ಮಂದಾದರು ಅದನ್ನು ಅಥೈ೯ಸಿಕೊಳ್ಳಲು ನಮಗೆ ಆಗುತ್ತಿಲ್ಲವೇನ್ನುವುದು ವಿಷಾದದ ಸಂಗತಿ. ಹೀಗಾಗಿಯೇ ನಾನು ನನ್ನ ವ್ಯಾಪ್ತಿಯಲ್ಲಿ ಸಾಕ್ಷ್ಯಾಧಾರಗಳ ಮುಖಾಂತರ ನನ್ನ ಅಭಿಪ್ರಾಯವನ್ನು ತಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ. ನಾವು ಸಹಜವಾಗಿ ಯಾರಿಗಾದರು "ರಾಣೇಬೆನ್ನೂರ" ಎಂಬ ಹೆಸರು ಹೇಗೆ ಬಂದಿತು ? ಎಂದು ಪ್ರಶ್ನಿಸಿದಾಗ,ಅವರ ಉತ್ತರದಲ್ಲಿ "ಬಿದನೂರಿನ ರಾಣಿ" ಕಂಗೂಳಿಸುತ್ತಾಳೆ. ಆದರೆ ಆ ರಾಣಿಗೂ ಹಾಗೂ ನಮ್ಮ ರಾಣೇಬೆನ್ನೂರಿನ ಹೆಸರಿಗೂ ಯಾವುದೇ ಸಂಭಂದವಿಲ್ಲ ಎನ್ನುವುದು ನನ್ನ ಅನಿಸಿಕೆ.ಕಾರಣ ಶಾಸನಗಳನ್ನು ಅವಲೋಕಿಸಿದಾಗ ನನ್ನ...