ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹೊಯ್ಸಳರ ಲಾಂಛನದಲ್ಲಿಯ "ಪ್ರಾಣಿ ಹುಲಿಯಲ್ಲ ಸಿಂಹ"..................! ಹೊಯ್ಸಳರ ದೊರೆ ವಿಷ್ಣುವರ್ಧನ್ ಈಗಿನ ಹಾವೇರಿ ಜಿಲ್ಲೆಯ ಬಂಕಾಪುರ ಹಾಗೂ ಹಾನುಗಲ್ ನ್ನು ಉಪರಾಜಧಾನಿಗಳನ್ನಾಗಿ ಮಾಡಿಕೊಂಡು ಆಡಳಿತವನ್ನು ಮಾಡಿ ಕೊನೆಗಾಲದಲ್ಲಿ ಬಂಕಾಪುರದಲ್ಲಿಯೇ ಪ್ರಾಣವನ್ನು ಬಿಟ್ಟನು ಎಂಬುದು ವಿಶೇಷ. ರಟ್ಟಿಹಳ್ಳಿಯ ಕದಂಬೇಶ್ವರ ದೇವಸ್ಥಾನದ ಮೇಲ್ಭಾಗದಲ್ಲಿ ಹಾಗೂ ಚೌಡದಾನಪುರದ ಮುಕ್ತೇಶ್ವರ ದೇವಸ್ಥಾನಗಳಲ್ಲಿ ಹೊಯ್ಸಳರ ಲಾಂಛನವನ್ನು ನೋಡಬಹುದಾಗಿದೆ. ಆದರೆ ಅವುಗಳು ತನ್ನ ನಾಯಕನ ಕಥೆಯನ್ನು ಜನರಿಗೆ ವಿಭಿನ್ನ ರೀತಿಯಲ್ಲಿ ತಿಳಿಸುತ್ತಿರುವುದು ವಿಶೇಷ. ದಂತಕತೆಯ ಪ್ರಕಾರ ಜೈನ ಗುರು ಸುದತ್ತಚಾರ್ಯನು ಸೊಸೆಯೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ "ಸಳನಿಗೆ" "ಹೊಯ್ ಸಳ" ಎಂದು ಆಜ್ನಾಪಿಸಿದನು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಈ ದಂತ ಕಥೆಯು ಕಂಡು ಬಂದದ್ದು ಕ್ರಿ.ಶ ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ. ಕಾರಣ ಹುಲಿಯೊಡನೆ ಬೇಟೆಯಾಡಲು ಆತನಿಗೆ ಅಹಿಂಸಾ ಧಮ೯ ಅಡ್ಡಿಯಾಗಲಿಲ್ಲವೆ ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಅದೆನೆಂದರೆ.........ಅಡ್ದಿಯಾಗಲಿಲ್ಲ ......ಎಕೆಂದರೆ ಆತ ಮೂಲದಲ್ಲಿ ಬೇಟೆಗಾರನಾಗಿದ್ದು ಆ ಸ್ಥಳದಲ್ಲಿ ಬೇಟೆಯನ್ನಾಡುತ್ತಿರುವ...